Tuesday, September 30, 2008

ಗೋಕರ್ಣದ ಇತಿಹಾಸದಲ್ಲಿಯೇ ಪ್ರಥಮ

ಬೆಂಗಳೂರು/ಗೋಕರ್ಣ, ಸೆ.೩೦ - ಗೋಕರ್ಣದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸುತ್ತಮುತ್ತಲಿನ ಹರಿಜನರೂ ಸೇರಿದಂತೆ ಎಲ್ಲ ಸಮಾಜ ಬಾಂಧವರು ಆತ್ಮಲಿಂಗದ ಪೂಜಾಸೇವೆಗೆ ಸಂಕಲ್ಪಿಸಿದ್ದಾರೆ.

ನವರಾತ್ರಿಯ ಒಂಬತ್ತೂ ದಿನಗಳಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ ಈ ಸೇವಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ.
ಈಗಾಗಲೇ ಹಾಲಕ್ಕಿ, ಪಡಸಾಲಿ, ಅಂಬಿಗ, ಹರಿಕಂತ್ರ, ಖಾರ್ವಿ, ಬೋವಿ, ದಾಬಿತ್, ಭಂಡಾರಿ, ದೇಶಭಂಡಾರಿ, ದೇವಾಡಿಗ, ಗುಡಿಗಾರ, ಮೊಗೇರ, ಮಡಿವಾಳ, ಪಟಗಾರ, ರಾಮಕ್ಷತ್ರಿಯ, ಗುನಗ, ಮರಾಠಿ, ಸವಿತ ಸಮಾಜ, ಸಾರಸ್ವತ, ಗೌಡ ಸಾರಸ್ವತ, ವಿಶ್ವಕರ್ಮ, ದೈವಜ್ಞ ಬ್ರಾಹ್ಮಣ, ವೈಶ್ಯವಾಣಿ, ನಾಡೋರ, ಮುಕ್ರಿ, ಹರಿಜನ, ನಾಮಧಾರಿ, ಗಾಣಿಗ, ಕೋಮಾರಪಂಥ, ಹವ್ಯಕ, ಹಬ್ಬು ಮೊದಲಾದ ಸಮಾಜದವರು ಸೇವೆ ಸಲ್ಲಿಸಲು ಮುಂದೆಬಂದಿದ್ದಾರೆ. ಬೆಳಗ್ಗೆ ಹಾಲಕ್ಕಿ ಮತ್ತು ಪಡಸಾಲಿ ಸಮಾಜದವರು ಈ ದಿನದ ಪೂಜಾಸೇವೆಯನ್ನು ನಡೆಸಿಕೊಟ್ಟಿರುತ್ತಾರೆ.

ಜೊತೆಗೆ ಶ್ರೀ ಸ್ವಾಮೀಜಿಯವರು ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಗ್ರಾಮ ಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆ ಕ್ರಮವಾಗಿ ಗಂಗಾವಳಿ, ಹಿರೇಗುತ್ತಿ, ಬಿದ್ಯೂರು, ಗಂಗೇಕೊಳ್ಳ, ತದಡಿ, ಬಂಕಿಕುಡ್ಲು, ದೇವರಬಾವಿಯಲ್ಲಿ ನಡೆಯಲಿದೆ.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ಪ್ರಧಾನ : ದೇಶಪಾಂಡೆ


ಬೆಂಗಳೂರು/ಗೋಕರ್ಣ, ಸೆ.೩೦ - ಗೋಕರ್ಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ಪ್ರಧಾನ. ಅದು ಯಾರಿಂದ ಆಗುತ್ತಿದೆ ಎಂಬೆಲ್ಲ ಸಂಗತಿಗಳು ಗೌಣ ಎಂದು ಕೆ.ಪಿ.ಸಿ.ಸಿ.ಯ ನೂತನ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಬೆಳಗ್ಗೆ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿಯಿತ್ತಿದ್ದ ಅವರು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿದರು. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಏನಿದ್ದರೂ ಮಠಗಳಿಂದಲೇ ಸಾಧ್ಯ. ಪ್ರಸ್ತುತ, ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯ ಜವಾಬ್ದಾರಿ ಶ್ರೀರಾಮಚಂದ್ರಾಪುರಮಠಕ್ಕೆ ಬಂದಿರುವುದು ಸ್ವಾಗತಾರ್ಹ ಎಂದರು.

ಹಲವಾರು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀಮಠ ಪ್ರಥಮ ಹಂತದಲ್ಲಿಯೇ ದೇವಾಲಯದ ಸ್ವಚ್ಛತಾ ಕಾರ್ಯ ಕೈಗೊಂಡು, ಕುಡಿಯುವ ನೀರು ಮೊದಲಾದ ವ್ಯವಸ್ಥೆಗಳನ್ನು ಮಾಡಿದ್ದನ್ನು ಶ್ಲಾಘಿಸಿದರು.

ಮಧ್ಯದಲ್ಲೊಮ್ಮೆ, ಎಸ್.ಎಂ. ಕೃಷ್ಣರವರು ಗೋಕರ್ಣ ಕ್ಷೇತ್ರಕ್ಕೆ ಭೇಟಿಯಿತ್ತದ್ದ ಸಂದರ್ಭವನ್ನು ನೆನಪಿಸಿಕೊಂಡರು. ಭೇಟಿಯ ಸಂದರ್ಭದಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆಯ ಕುರಿತಾಗಿ ವಿಷಾದ ವ್ಯಕ್ತಪಡಿಸಿದ್ದನ್ನು ಮುಕ್ತವಾಗಿ ಹಂಚಿಕೊಂಡರು.

ಹಳೆಯದನ್ನು ಮತ್ತೆ ಮತ್ತೆ ಕೆದಕುವುದರ ಬದಲು ಹೊಸದಾಗಿ ಬಂದಿರುವ ಆಡಳಿತ ವ್ಯವಸ್ಥೆಗೆ ಸಂಪೂರ್ಣ ಬೆಂಬಲ ನೀಡೋಣ ಎಂದರು.

ಈ ಸಂದರ್ಭದಲ್ಲಿ ಗೋಕರ್ಣ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಭಾರತೀ ದೇವತೆ, ಪ್ರಾಕ್ತನ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಕುಮಟಾದ ಉದ್ಯಮಿ ಮುರಳೀಧರ ಪ್ರಭು ಉಪಸ್ಥಿತರಿದ್ದರು.

Wounded hearts


A good Article by Tarun vijayji, who is The Director of Dr. Syama Prasad Mookerjee Research Foundation, Delhi.

Tarun Vijay
September 25, 2008

I would have loved to see Hindus coming out in unison to protect the churches and say no, whatever our grievances may be, it is our Hindu-ness to see all prayer halls are secure and run unhindered. It's sacrilegious for any Hindu to assault the place of faith of any other brother citizen; the united colours of the tricolour that we so proudly fluttered in Jammu, makes us respect the bond that unites us all. If we don't do this, we are not Hindus. It's impossible as a Hindu, however aggrieved and anguished and unfairly treated I might be, to sit silent and watch approvingly the desecration of another's place of reverence.

I know professional hate-mongers would jump in and cite the example of Ayodhya, forgetting that the structure there was not a functional place of worship. Remember, no one would have been able to stop the Hindus from storming Kashi or Mathura's 'subjugated' temples, pre-independence or after 1947, if the Hindus were so reckless and intolerant. Just see the structures built on Hindu temples there. Yet, we didn't touch them.

It will be naïve say the same Hindus would feel great by pelting stones and breaking places of worship. Such acts never help a religious community. The crowd that did it is the crowd that expresses anger spontaneously and often in an uncontrolled manner, hitting at its own interests and image. Unacceptable, and sad indeed.

But when Hindus are unable to protect and secure respect for their religious scriptures, icons, gods and temples, how can they be exhorted to do so for others? Whatever is happening in Mangalore and Bengaluru needs introspection on both sides. Closing all options before the Hindus, making them look barbaric and demonising them as if they have surpassed Osama and Church-supported terror groups in the northeast would be to push them into a corner.

The Hindus who sheltered all the persecuted and brutalised religious communities of the world -- from Jews to Parsis to Tibetans and never created roadblocks for the aggressive harvesters of the West and rather mingled with the Muslims to pray at dargahs and light candles at churches, producing a cyclonic Hindu monk, Vivekananda, who officially started celebrating Christmas in all his great centres of Hindu faith the world over, which has continued unopposed. Such Hindus can't be assaulters of the kind they themselves have been condemning and complaining about.

Just see if it suits your palate and patience, what really happened at Mangalore. I have seen translations from a book -- Satya Darshini distributed by the missionaries of New Life in Mangalore and Bengaluru. It's in Kannada and the booklet denigrates Hindu gods and said Indians worship false gods and pleads for their 'liberation'.
Where are the leaders of the sacred word and social concerns?

All the incidents that took place were not attacks on churches.In fact, unauthorised prayer halls were attacked where the blasphemous pamphlets were distributed and aggressive proselytisation was taking place. These incidents were not localised but took place across three districts of Mangalore, Udupi and Chikmagalur.

The only place where attacks took place apart from New Life prayer halls was at a small prayer hall in the premises of Milagres church in Mangalore, where some miscreants had damaged an idol of Jesus Christ.The Vishwa Hindu Parishad and Bajrang Dal have condemned this attack.Following this incident, a Christian mob gathered and the situation went out of control as it started pelting stones and disrupting traffic.The police was forced to intervene and this resulted in unsavoury violence.

It was not a Hindu-Christian clash. In fact, it is more appropriate to call it a 'Christian-police' clash. Since some Christians holed up in churches were pelting stones and disrupting traffic, the police was forced to enter the church to clear the mob.

Stabbing incidents were reported from four or five places across Mangalore district.In fact, an activist belonging to the Shri Ram Sena was stabbed, which led to a bandh call by the orgnanisation -- an outfit that is not connected with the Sangh Parivar.

The VHP and Bajrang Dal have condemned the desecration of Jesus Christ's idol in the prayer halladjacent to Milagres church in Mangalore.They have also clarified that they are not against the Catholic faith and the churches.

The archbishop was arrogant and rude to Chief Minister Yeddyurappa who had gone to see him. He could have used this opportunity to express his dismay but also to start a dialogue to know and eliminate the reasons for the unrest and an untowardly reaction.

Fine. Can Hindus express the same to the archbishop: your grace, we are deeply hurt and wounded by your silence on the brutal violence of words against Hindus by your people? And more so, since you have chosen to ignore the pains and angst of the Hindus. What do you have to say about the books of New Life mission?

The best and truly Christian voice I heard amidst the cacophony of blame game and wounded hearts was of a reputed Christian scholar P N Benjamin, in Bengaluru. He wrote, 'The real source of danger to the Indian Christian community is not the handful of Hindu extremists. Most of the violent incidents have been due to aggressive evangelising. Other than this, there have been few attacks on Christians. Finally, the sensitive and sensible Christians must realise that acts of certain groups of Christian evangelists are the root-cause of tension between Christians and Hindus. Christian leaders should come out in the open to disown such acts of intolerance. The best and perhaps the only way Christians can bear witness to their faith, is by extending their unconditional love to their neighbours and expecting nothing in return.'

And he advised, 'Will the Christians listen to the words of sanity of Dr Ken Gnanakan, well-known Christian scholar who told this writer the other day: 'Preach Christ, but do not condemn others'. Even Jesus said in John 3.17: 'God did not send his Son to condemn the world'

Hindus are like that. The aggressive conversions and the justification of it by the 'harvesters' are hurting Hindus as much as any other violence. Still there are saner ways to explain that hurt if there are saner platforms to receive those voices.
Have you seen in any magazine or periodical a story about the swami who was brutally murdered on the night of Krishna's birthday in Orissa? Why was he killed? They keep blaming the Maoists, and have immediately denied their hand through a well-publicised statement. And the aged lady monk, Ma Bhaktimoyee? Should her murder while performing puja be ignored just because she was not a nun and the Vatican won't speak about her plight and Italy's blind-curtained state would not call the Indian ambassador to protest over her death? How long do we have to run our public life directed by signals from firang-lands?

Nowhere on this earth have a people so brutalised and passed through many a holocaust been living so peacefully introverted that some elements of society call it cowardice. Yet, we never allowed the hate for the faithful of those communities whose ancestors were in the forefront of attacks on us.

But should it always be a one-sided story?
The muffling of Hindu voices of reason and dialogue will ultimately lead to more pitfalls and long nights of distrust. Those who advertise their beef-eating rendezvous with unashamed aplomb are trying to teach what makes for a good Hindu. It is bound to invite a payback.

How many of the church people came to heal our wounds when temples were desecrated and razed to the ground in Kashmir? How many maulanas came to help us forget the painful past and have a fresh and harmonious beginning after Godhra and Mumbai and Raghunath temple and Akshardham and Sankatmochan Mandir and Doda and……..
India needed an Indian prescription to heal the wounds and face the unhealthy attackers. Instead we received communalised medicines from secular panacea providers, practitioners of hate certified by state registry.

How can hate for one side provide succour to the other?
Everything this polity does or allows to be a victor in the elections is coated with hate for the other side -- a poison prescription to win a battle can't be transformed to yield admirable results.

Victims can't be aggressors and any amount of wordplay won't heal the hurt Hindus have been subjected to bear in isolation.

The Christian aggressiveness and offence is as much if not more violent than jihadis. They carnivalised the shameful mockery of Hindu gods through public passages in a show of strength that takes power from an Italian statement, the Vatican's powered protest, and finally a White House warning.

URL for this article:
Tarun Vijay
Director,
Dr. Syama Prasad Mookerjee Research Foundation
(centre for civilisational values and policy research)
11 Ashok Road, New Delhi 110001
tel. no.-011-23382569,23382234.
tarun-vijay.blogspot.com

Monday, September 29, 2008

ಗೋಕರ್ಣದ ಬಗ್ಗೆ ವಿಜಯಕರ್ನಾಟಕದಲ್ಲಿ ಪ್ರಕಟಗೊಂಡ ಶ್ರೀ ಪ್ರತಾಪಸಿಂಹರವರ ಲೇಖನ

ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ


ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.

ವರದ ಮಹರ್ಷಿಯಿಂದ ಪ್ರಾಪ್ತವಾಗಿದ್ದ ಶ್ರೀರಾಮಾದಿ ವಿಗ್ರಹಗಳು, ಚಂದ್ರಮೌಳಿಯ ಲಿಂಗ, ಪಾದುಕೆಯನ್ನು ವಿದ್ಯಾನಂದರಿಗೆ ಒಪ್ಪಿಸಿದ ಶಂಕರಾ ಚಾರ್ಯರು ಈ ಮಠ ‘ರಘೂತ್ತಮ ಮಠ’ವೆಂದು ಪ್ರಸಿದ್ಧಿ ಯಾಗಲಿ ಎಂದು ಹಾರೈಸಿ ಜಗನ್ನಾಥ ಕ್ಷೇತ್ರಕ್ಕೆ ತೆರಳಿದರು. ಹೀಗೆ ಶಂಕರಾಚಾರ್ಯರಿಂದ ನೇರವಾಗಿ ದೀಕ್ಷೆ ಪಡೆದ ವಿದ್ಯಾನಂದರೇ ಈ ಮಠದ ಮೊದಲ ಪೀಠಾಧಿಪತಿಗಳು. ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರ ಗಿರಿ ನದಿಯವರೆಗೆ ಮಠದ ವ್ಯಾಪ್ತಿ ಹರಡುತ್ತದೆ. ಇದು ಒಂದು ಜಾತಿಗೆ ಸೇರಿದ ಮಠವಲ್ಲ. ಈ ಪ್ರದೇಶಗಳಲ್ಲಿ ಕಂಡುಬರುವ ಹವ್ಯಕ, ದೇವಾಂಗ, ಮಡಿವಾಳ, ಭಂಡಾರಿ, ಹಾಲಕ್ಕಿ, ಅಮ್ಮಕೊಡವ, ಪದ್ಮಶಾಲಿ, ಭೋವಿ, ಹರಿಕಂತರು, ಮರಾಠಿ, ಕೋಕಾಬಿ, ಪಡಿಯಾರು, ಗುಡಿಗಾರ, ಭಜಂತ್ರಿ, ಗಾಣಿಗ, ಗೋಮಾಂತರು, ಕಂಚುಗಾರ, ಕೆಡಿಯ ಹೀಗೆ ೧೮ ಜಾತಿಗಳು ರಘೂತ್ತಮ ಮಠಕ್ಕೆ ಸೇರಿವೆ.

ಇದೇನೇ ಇರಲಿ, ನಮ್ಮ ಕರ್ನಾಟಕದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಲೆಯೆತ್ತಿದ ವಿಜಯ ನಗರ ಸಾಮ್ರಾಜ್ಯ ಹಾಗೂ ಆ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ಮಂಡಲಾಧೀಶರು, ಪ್ರಾಂತಾಧಿಪತಿಗಳು, ಪಾಳೇಗಾರರು ಮಠಕ್ಕೆ ದಾನ, ದತ್ತಿ ನೀಡಲಾರಂಭಿಸಿದರು. ಅವರು ನೀಡಿದ ಹಗಲು ದೀವಟಿಗೆ, ಶ್ವೇತಛತ್ರಗಳು, ಕುದುರೆ, ಆನೆ, ಒಂಟೆಗಳಿಂದ ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲೆಯೆತ್ತಿದ್ದ ರಘೂತ್ತಮ ಮಠಕ್ಕೂ ವೈಭವ ಬಂತು.

ಈ ರಘೂತ್ತಮ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಒಂದು ಕೊಂಡಿಯಿದೆ.

ರಘೂತ್ತಮ ಮಠದ ೧೨ನೇ ಯತಿಗಳಾದ ಶ್ರೀ ರಾಮ ಚಂದ್ರ ಭಾರತೀ ಸ್ವಾಮಿಗಳು ಕಾರಣಾಂತರದಿಂದ ಹೊಸನಗರ ತಾಲೂಕಿನಲ್ಲಿರುವ ಶ್ರೀರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ತೀರಕ್ಕೆ ವಲಸೆ ಬಂದರು. ಅಲ್ಲೇ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸಮಾಡಲಾರಂಭಿಸಿದರು. ಹಾಗೆ ಯತಿಗಳೇ ಆಗಮಿಸಿದ ಕಾರಣ ಶ್ರೀರಾಮಚಂದ್ರಾಪುರವೇ ಮಠದ ಮುಖ್ಯಕೇಂದ್ರವಾಯಿತು. ರಘೂತ್ತಮ ಮಠ ಹೋಗಿ ಶ್ರೀರಾಮಚಂದ್ರಾಪುರ ಮಠವಾಯಿತು. ಇತ್ತ ೧೨ನೇ ಯತಿಗಳು ಇರುವವರೆಗೂ ಆದಿ ಶಂಕರಾಚಾರ್ಯರ ಅಣತಿಯಂತೆ ಗೋಕರ್ಣದಲ್ಲಿರುವ ವಿಶ್ವವಿಖ್ಯಾತ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರ ಹಾಗೂ ಪರಿವಾರ ದೇವರ ಪೂಜಾದಿ ಸೇವೆಗಳನ್ನು ಮಠದ ಪೀಠಾಧಿಪತಿಗಳೇ ನೆರವೇರಿಸುತ್ತಾ ಬರುತ್ತಿದ್ದರು. ಅವರಿಗೆ ಪೂಜಾಕಾರ್ಯಗಳ ಸಂದರ್ಭದಲ್ಲಿ ಸಹಾಯ ಮಾಡಲು ಉಪಾಧಿವಂತರು ಎಂಬವವರಿದ್ದರು. ಆದರೆ ೧೨ನೇ ಯತಿಗಳು ರಾಮಚಂದ್ರಾಪುರಕ್ಕೆ ಬಂದು ನೆಲೆಸಿದ ಕಾರಣ, ರಾಮಚಂದ್ರಾಪುರವೇ ಮುಖ್ಯವಾದ ಕೇಂದ್ರವಾದ ಸಲುವಾಗಿ ಗೋಕರ್ಣದ ಮಹಾಬಲೇಶ್ವರ ಹಾಗೂ ಪರಿವಾರ ದೇವರ ಪೂಜಾ ಸೇವೆಯನ್ನು ಯತಿಗಳೇ ನೆರವೇರಿ ಸಲು ಸಾಧ್ಯವಾಗದಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಯತಿಗಳಿಗೆ ಪೂಜಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ಉಪಾಧಿವಂತರೇ ಅರ್ಚನೆ ಮಾಡಬೇಕಾಗಿ ಬಂತು. ಆದರೆ ಮಠ ಸ್ಥಳಾಂತರಗೊಂಡರೂ ಉಪಾಧಿವಂತರು ಪೀಠಾಧಿಪತಿಗಳ ಹತೋಟಿಯಲ್ಲೇ ಇದ್ದರು, ಅಣತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಇತ್ತೀಚಿನವರೆಗೂ, ಅಂದರೆ ೧೯೮೩ರಲ್ಲಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನಡೆದಾಗಲೂ ಮಠದ ೩೫ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಅವರೇ ಮುಂದೆ ನಿಂತು ನವರತ್ನಾದಿಗಳನ್ನು ದೇವರಿಗೆ ಅರ್ಪಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟಿದ್ದರು. ಇಂದಿಗೂ ಪೀಠಾಧಿಪತಿಗಳ ಪರಾಕು ಹೇಳುವಾಗ “ಶ್ರೀಸಂಸ್ಥಾನ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಎನ್ನಲಾಗುತ್ತದೆ.

ಆದರೆ ಆದಿಶಂಕರರು ಹಾದುಹೋದ ಗೋಕರ್ಣಕ್ಕೆ ಇಂದು ನೀವೇನಾದರೂ ಭೇಟಿ ಕೊಟ್ಟರೆ ದೇವರು ಇರುವಿಕೆಯ ಬಗ್ಗೆಯೇ ನಿಮ್ಮ ಮನದಲ್ಲಿ ಖಂಡಿತ ಅನು ಮಾನಗಳೇಳುತ್ತವೆ!! ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಅಥವಾ ಗಾಂಧೀನಗರದಲ್ಲಿ ಬಸ್‌ನಿಂದ ಕೆಳಗಿಳಿದ ಕೂಡಲೇ “ನಿಮ್ಮ ಕೈಯಲ್ಲಿನ ಬ್ಯಾಗನ್ನು ಮೊದಲು ಕಿತ್ತುಕೊಂಡು, ಬನ್ನಿ ಸಾರ್ ಕುಳಿತುಕೊಳ್ಳಿ, ಎಲ್ಲಿಗೆ ಹೋಗಬೇಕು ಸಾರ್” ಎನ್ನುತ್ತಾ ಮುತ್ತಿಗೆ ಹಾಕುವ ಆಟೋ ಡ್ರೈವರ್‌ಗಳಂತೆ ಗೋಕರ್ಣದಲ್ಲಿ ಅರ್ಚಕರು ನಿಮ್ಮ ಮೇಲೆ ಮುಗಿಬೀಳುತ್ತಾರೆ!! ಸಾಮಾನ್ಯ ಜನರೂ ದೇವರನ್ನು ಮಟ್ಟಬಹುದಾದ ಎರಡೇ ಎರಡು ಕ್ಷೇತ್ರಗಳೆಂದರೆ ಕಾಶಿ ಮತ್ತು ಗೋಕರ್ಣ. ಆದರೆ ಗೋಕರ್ಣದ ಅರ್ಚಕರು, ‘ದೇವರನ್ನು ಮುಟ್ಟಬೇಕಾ?’ ಅಂತ ಕೇಳಿದಾಗ ನೀವೇನಾದರೂ ‘ಹೌದು’ ಎಂದರೆ ಕೂಡಲೇ ‘ರೇಟ್’ ಹೇಳಿ ಬಿಡುತ್ತಾರೆ! ಮೊದಲು ಉಪಾಧಿವಂತರ ಸುಮಾರು ಐದು ಕುಟುಂಬಗಳು ಇಲ್ಲಿ ಅರ್ಚನೆ ಕಾರ್ಯದಲ್ಲಿ ತೊಡಗಿದ್ದವು. ಆದರೆ ಕಾಲಾಂತರದಲ್ಲಿ ಕುಟುಂಬಗಳ ಗಾತ್ರ ದೊಡ್ಡದಾಗಿ, ಒಡೆದು ಹೋಳಾಗಿ, ಪ್ರತ್ಯೇಕವಾಗಿ ಇಂದು ೩೦ಕ್ಕೂ ಹೆಚ್ಚು ಕುಟುಂಬಗಳಿವೆ. ಹಾಗಾಗಿ ಪೂಜಾ ಕಾರ್ಯ ನೆರವೇರಿಸುವುದಕ್ಕೂ ಪೈಪೋಟಿ ಸೃಷ್ಟಿಯಾಗಿದೆ, ಕಿತ್ತಾಟವೂ ನಡೆದಿದೆ. ಹಾಗಾಗಿ ಒಳ ಒಪ್ಪಂದ ಏರ್ಪಟ್ಟು ತಿಂಗಳಲ್ಲಿ ಇಂತಿಷ್ಟು ದಿನ ಒಂದು ಕುಟುಂಬಕ್ಕೆ ಎಂದು ವಿಭಜನೆ ಮಾಡಿಕೊಳ್ಳಲಾಗಿದೆ. ಇಲ್ಲೂ ಒಂದು ರಾಜಕೀಯವಿದೆ. ಒಂದು ಕುಟುಂಬದ ಸರದಿ ಬಂದಾಗ ಉಳಿದ ಕುಟುಂಬಗಳ ಅರ್ಚಕರು ಖಾಲಿ ಕುಳಿತುಕೊಳ್ಳುವುದಿಲ್ಲ. ಪೂಜೆ, ಪುನಸ್ಕಾರವನ್ನು ಮಾತ್ರ ದೇವಸ್ಥಾನದಲ್ಲಿ ಮಾಡಿಸಿ, ಹೋಮ, ಹವನಗಳನ್ನು ನಾವು ಮನೆಯಲ್ಲೇ ಬೇಗ ಮಾಡಿಕೊಡುತ್ತೇವೆ ಎಂದು ಭಕ್ತಾದಿಗಳನ್ನೇ ಪುಸಲಾಯಿಸುತ್ತಾರೆ!ಇಂತಹ ಅರ್ಚಕರು(ದೇವರ ಏಜೆಂಟರು) ಇರುವ ಕ್ಷೇತ್ರ ಗಳ ಸ್ವಾಸ್ಥ್ಯ ಹೇಗೆ ತಾನೇ ಹಾಳಾಗದೆ ಉಳಿಯಲು ಸಾಧ್ಯ?

ಇಲ್ಲಿನ “ಓಂ ಬೀಚ್”ಗೆ ಹಿಪ್ಪಿಗಳು ಬಂದಿದ್ದಾರೆ, ಬಾರ್ ಗಳಾಗಿವೆ, ಲಾಡ್ಜ್‌ಗಳಿವೆ, ‘ಚಿನ್ನವೀಡು’ ಸೌಲಭ್ಯವೂ ಇದೆ. ಮತ್ತೂ ಒಂದು ವಿಶೇಷವೆಂದರೆ ಆ ಬಾರ್, ಲಾಡ್ಜ್, ಲಿಕ್ಕರ್ ಶಾಪ್‌ಗಳ ಮಾಲೀಕರಲ್ಲಿ ದೇವರ ಏಜೆಂಟರೂ ಇದ್ದಾರೆ. ವಿದೇಶಿ ಮದ್ಯವೂ ದೊರೆಯುತ್ತದೆ, ಮಾನಿನಿಯರೂ ಸಿಗುತ್ತಾರೆ. ದಕ್ಷಿಣದ ಕಾಶಿ ಎಂದೇ ಹೆಸರಾಗಿದ್ದ ಗೋಕರ್ಣ ವಿಂದು ಹೇಸಿಗೆಪಟ್ಟುಕೊಳ್ಳಬೇಕಾದ ಮಟ್ಟಕ್ಕೆ ಹೋಗಿದೆ. ಅಲ್ಲಿಗೆ ಹೋದರೆ ದೇವರ ಮೇಲೆ ಇದ್ದ ಶ್ರದ್ಧೆಯೂ ಹೊರಟು ಹೋಗುತ್ತದೆ, ಅರ್ಚಕರ ಬಗ್ಗೆ ಅಸಹ್ಯವುಂಟಾಗುತ್ತದೆ. ಇಷ್ಟಾಗಿಯೂ ಗೋಕರ್ಣದ ಕೊಳೆ ತೊಳೆಯಲು ಸಾಧ್ಯವಾಗುತ್ತಿರಲಿಲ್ಲ.

ಅದಕ್ಕೆ ಕಾರಣವೂ ಇದೆ.
೧೯೫೦ರ ‘ಬಾಂಬೆ ದತ್ತಿ ಕಾಯಿದೆ’ ಒಂದು ದೊಡ್ಡ ಅಡಚಣೆಯಾಗಿತ್ತು. ಈ ಕಾಯಿದೆ ಜಾರಿಗೆ ಬಂದಾಗ ಮಠದ ನಿಯಂತ್ರಣದಲ್ಲಿದ್ದ ಗೋಕರ್ಣದ ಶ್ರೀಮಹಾ ಬಲೇಶ್ವರ ಹಾಗೂ ಅಲ್ಲಿನ ಪರಿವಾರ ದೇವರ ಗುಡಿಗಳನ್ನೂ ಕಾಯಿದೆಯ ವ್ಯಾಪ್ತಿಗೆ ತಪ್ಪಾಗಿ ಒಳಪಡಿಸಿ ಅಧಿಸೂಚನೆ ಹೊರಡಿಸಲಾಯಿತು. ಇತ್ತ ೧೨ನೇ ಯತಿಗಳ ಕಾಲದಲ್ಲೇ, ಅಂದರೆ ೧೬ನೇ ಶತಮಾನದಲ್ಲೇ ಗೋಕರ್ಣದಿಂದ ರಾಮ ಚಂದ್ರಾಪುರಕ್ಕೆ ಸ್ಥಳಾಂತರಗೊಂಡಿದ್ದ ಶ್ರೀರಾಮಚಂದ್ರಾಪುರ ಮಠ ದೇವಾಲಯದ ಮೇಲೆ ನಿಯಂತ್ರಣ ಹೊಂದಿದ್ದರೂ ೧೯೫೦ರ ಕಾಯಿದೆಯಿಂದಾದ ತಪ್ಪನ್ನು ಸರಿಪಡಿಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ. ಹಾಗಾಗಿ ದೇವಾಲಯ ಮಠಕ್ಕೆ ಬದಲು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು. ಅರ್ಚನೆ ಮಾಡಿಕೊಂಡು ಬರುತ್ತಿದ್ದ ಉಪಾಧಿವಂತರನ್ನೇ ದೇವಾಲಯದ ಟ್ರಸ್ಟಿಗಳಾಗಿ ನೇಮಕ ಮಾಡಲಾಯಿತು. ಇವರ ನೇಮಕಕ್ಕೆ ಮಠದ ಅಸ್ತು ಕೂಡ ದೊರಕಿತ್ತು. ಆದರೆ ಮಠದ ನಿರ್ಲಕ್ಷ್ಯ ಹಾಗೂ ಕಾಯಿದೆಯಿಂದಾಗಿ ತಪ್ಪಿದ ನಿಯಂತ್ರಣದಿಂದಾಗಿ ಮಠಕ್ಕೆ ಅಧೀನವಾಗಿ ನಡೆದುಕೊಳ್ಳುವ ವಿಧಿವಿಧಾನಗಳು ಹೆಸರಿಗಷ್ಟೇ ಮುಂದುವರಿದುಕೊಂಡು ಹೋಗಿ ಕಾಲಾಂತರದಲ್ಲಿ ಉಪಾಧಿವಂತರೇ ಗೋಕರ್ಣದ ಬಾಸ್‌ಗಳಾದರು. ೧೯೫೭ರಲ್ಲಿ ದೇವಾಲಯದ ಟ್ರಸ್ಟಿ ದಾಮೋದರ ದತ್ತಾತ್ರೇಯ ದೀಕ್ಷಿತರು ತೀರಿಕೊಂಡ ನಂತರ ಮತ್ತೆ ಅರ್ಚನೆಯ ಪ್ರಶ್ನೆ ಎದುರಾಯಿತು. ತಮ್ಮ ತಂದೆಯ ಮರಣದಿಂದಾಗಿ ತೆರವಾಗಿರುವ ಸ್ಥಾನವನ್ನು ತನಗೇ ನೀಡಬೇಕೆಂದು ದಾಮೋದರ ದತ್ತಾತ್ರೇಯ ಅವರ ಪುತ್ರ ವಿಘ್ನೇಶ್ವರ ದಾಮೋದರ ದೀಕ್ಷಿತ್ ೧೯೫೦ರ ಬಾಂಬೆ ದತ್ತಿ ಕಾಯಿದೆಯ ಸೆಕ್ಷನ್ ೪೭ರ ಅಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಘ್ನೇಶ್ವರ ದೀಕ್ಷಿತರನ್ನು ಟ್ರಸ್ಟಿಯಾಗಿ ನೇಮಕ ಮಾಡಿತು. ದೇವಾಲಯದ ಏಕಮಾತ್ರ ಜೀವಂತ ಟ್ರಸ್ಟಿಯಾಗಿದ್ದ ಅವರು ೨೦೦೪ರಲ್ಲಿ ವಿಧಿವಶರಾದಾಗ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ದೇವಾಲಯ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಕ್ಕುಪ್ರತಿಪಾದಿಸಿದರು. ಇವರ ಮಾತಿಗೆ ಕೋರ್ಟಿನಲ್ಲಿ ಕಿಮ್ಮತ್ತು ಸಿಗಲಿಲ್ಲ. ಅಷ್ಟಕ್ಕೂ “೧೯೯೭ರ ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ” ಜಾರಿಗೆ ಬಂದ ನಂತರ ೧೯೫೦ರ ಬಾಂಬೆ ದತ್ತಿ ಕಾಯಿದೆ ಅರ್ಥ ಕಳೆದುಕೊಂಡು, ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ. ೧೯೯೭ರ ಕಾಯಿದೆಯ ಸೆಕ್ಷನ್ ೧(೪)ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಗೋಕರ್ಣದ ಸ್ಥಳೀಯರು ಹಾಗೂ ಶ್ರೀರಾಮಚಂದ್ರಾಪುರ ಮಠದ ೩೬ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ೫೮ ವರ್ಷಗಳ ಹಿಂದೆ ಆದ ತಪ್ಪನ್ನು ಸರಿಪಡಿಸಿ, ದೇವಾಲಯವನ್ನು ಅಧಿಸೂಚನೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಠಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆಗಸ್ಟ್ ೧೨ರಂದು ದೇವಾಲಯದ ಆಡಳಿತ ವನ್ನು ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ನ್ಯಾಯ ಸಮ್ಮತವಾಗಿ ಒಪ್ಪಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಒಂದು ರೀತಿಯಲ್ಲಿ “Floodgates” ತೆರೆದಂತಾಗಿದೆ. ಇತರ ಮಠಗಳೂ ಕೂಡ ಸರಕಾರದ ಈ ಆದೇಶವನ್ನು ಆಧಾರವಾಗಿಟ್ಟುಕೊಂಡು ಪರಂಪರಾಗತವಾಗಿ ತಮಗೆ ಸೇರಬೇಕಾಗಿರುವ, ಆದರೆ ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳನ್ನು ಮರಳಿ ತಮಗೆ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಬಹುದು. ಮಠಗಳು ದೇವಾಲಯಗಳ ಆಡಳಿತವನ್ನು ಕೈಗೆತ್ತಿಕೊಂಡರೆ ತೀರ್ಥಕ್ಷೇತ್ರಗಳ ಅಭಿವೃದ್ಧಿಯೂ ಆಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು “ಧರ್ಮೋ ತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರದಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಯವರು ನಿರ್ಮಿಸಿರುವ ಕಾಲಭೈರವೇಶ್ವರ ದೇವಾಲಯವಂತೂ ಎಲ್ಲರ ಹುಬ್ಬೇರಿಸು ವಂತಿದೆ. ನಮ್ಮ ದೇವಾಲಯಗಳ ಮೇಲಿನ ನಿಯಂತ್ರಣ ಮಠಗಳಿಗೆ ದೊರೆತರೆ ಮುಜರಾಯಿ ಇಲಾಖೆ ಸೇರಿ ಮಸೀದಿ, ಚರ್ಚ್ ಅಭಿವೃದ್ಧಿಯ ಪಾಲಾಗುತ್ತಿದ್ದ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಯಂತಹ ಕಾರ್ಯಕ್ಕೆ ಸದ್ವಿನಿಯೋಗವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂ ತರ ಮಾಡಿರುವುದನ್ನು ಧರ್ಮದ ಬಗ್ಗೆ ಕಾಳಜಿ ಇರುವ ನಾಡಿನ ಎಲ್ಲ ಗಣ್ಯರೂ ಸ್ವಾಗತಿಸಬೇಕು.

ಆದರೆ ಗೋಕರ್ಣದ ಅರ್ಚಕರು ಸುಮ್ಮನಿರುತ್ತಾರೆಯೇ?!

ಮಹಾಬಲೇಶ್ವರ ದೇವಾಲಯ ತಮ್ಮ ಆಸ್ತಿ ಎಂಬಂತೆ ಬೊಬ್ಬೆ ಹಾಕಲಾರಂಭಿಸಿದ್ದಾರೆ. ವಿಷಯದ ಸತ್ಯಾಸತ್ಯತೆಯನ್ನು ಸರಿಯಾಗಿ ಅರಿಯದ ಹಾಗೂ ಅರಿತರೂ ಕಲಹ ತಂದಿಡುವ ಉದ್ದೇಶದಿಂದ ಕೆಲವರು ಬೊಬ್ಬೆ ಹಾಕುತ್ತಿರುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಉಡುಪಿಯ ಶ್ರೀಕೃಷ್ಣ ಪೇಜಾವರ ಮಠಕ್ಕೆ ಹೇಗೋ, “ಲಕ್ಷ್ಮಿ”ಯಾಗಿರುವ ಶಾರದೆ ಶೃಂಗೇರಿ ಮಠಕ್ಕೆ ಹೇಗೋ ಹಾಗೆಯೇ ಗೋಕರ್ಣದ ದೇವಾಲಯದ ಮೇಲೆ ಶ್ರೀರಾಮಚಂದ್ರಾಪುರಕ್ಕೂ ಹಕ್ಕಿದೆ. ಹಾಗಂತ ದುಡ್ಡು ಮಾಡುವ ಉದ್ದೇಶದಿಂದ ರಾಘವೇಶ್ವರ ಭಾರತೀ ಅವರು ಯಾರಿಗೋ ಸೇರಿದ್ದ ದೇವಾಲಯವನ್ನು ನಮಗೆ ನೀಡಿ ಎಂದು ಕೇಳಿಕೊಂಡಿರಲಿಲ್ಲ. ಮಠಕ್ಕೆ ಸೇರಿ ರುವ ದೇವಾಲಯಕ್ಕೆ ಅಂಟಿಕೊಂಡಿರುವ ಕೊಳೆಯನ್ನು ತೊಳೆ ಯುವ ಉದ್ದೇಶದಿಂದ ಹಕ್ಕು ಪ್ರತಿಪಾದನೆ ಮಾಡಿದ್ದಾರೆ.

ಇದರಲ್ಲಿ ತಪ್ಪೇನಿದೆ?
ನೀವೇ ಹೇಳಿ, ಈಗಿರುವ ಪರಿಸ್ಥಿತಿಯಲ್ಲಿ ಗೋಕರ್ಣ ವೆಂದರೆ ನಿಮಗೆ ಭಕ್ತಿ ಮೂಡುತ್ತದೋ ಆಥವಾ ಓಂ ಬೀಚ್‌ನ ಬಿಕಿನಿಗಳು ನೆನಪಾಗುತ್ತವೋ? ಒಂದು ದೇವಸ್ಥಾನ ಶಿಥಿಲಗೊಂಡರೆ ಅದರ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕಾಗುತ್ತದೆ. ಇಂದು ಇಡೀ ಗೋಕರ್ಣದ ಮಹಾ ಬಲೇಶ್ವರ ದೇವಾಲಯ, ಅದರ ಸುತ್ತಲಿನ ಪರಿಸರ ಮಾತ್ರವಲ್ಲ, ಅರ್ಚನೆಯಲ್ಲಿ ತೊಡಗಿರುವವರ ಮನಸ್ಸುಗಳ ಜೀರ್ಣೋದ್ಧಾರ ಕಾರ್ಯವೂ ಆಗಬೇಕಾಗಿದೆ. ಅಷ್ಟಕ್ಕೂ ನಾವು ನಮ್ಮ ವಿಶ್ವಾಸದ ಗಂಟನ್ನು ಇಟ್ಟಿರುವುದೇ ಮಠ, ಮಂದಿರಗಳಲ್ಲಿ. ಅಂತಹ ಸ್ಥಳಗಳೇ ರೇಜಿಗೆ ಹುಟ್ಟಿಸುವ ತಾಣಗಳಾದರೆ ಜನರಿಗೆ ದೇವರ ಮೇಲಿನ ವಿಶ್ವಾಸವೇ ಹೊರಟು ಹೋಗದೇ ಇದ್ದೀತೆ? ಮಂಗಳಾರತಿ ತಟ್ಟೆಯ ಮೇಲೆ ಹಾಕಿದ್ದು ನೋಟೋ, ನಾಣ್ಯವೋ ಎಂಬುದನ್ನು ನೋಡಿ ಪ್ರಸಾದ ನೀಡುವ ಅರ್ಚಕರಿಂದಾಗಿ ಕೆಲವು ದೇವಾಲಯಗಳ ಬಗ್ಗೆ ನಮಗೆ ಕಸಿವಿಸಿಯಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಅವರು ಗೋಕರ್ಣದ ಕಡಲ ಕಿನಾರೆಯ ಕೊಳೆ ತೊಳೆದು ಶುದ್ಧೀಕರಣ ಮಾಡಲು ಹೊರಟಿದ್ದಾರೆ. ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಒಂದು ವೇಳೆ ರಾಘವೇಶ್ವರರಿಗೆ ದುಡ್ಡು ಮಾಡುವ ಹಂಬಲವಿದ್ದಿದ್ದರೆ ರಾಮಚಂದ್ರಾಪುರದ ಹಟ್ಟಿಯಲ್ಲಿ ದನಕರುಗಳ ಬದಲು ಒಂದೆರಡು ಇಂಜಿನಿಯ ರಿಂಗ್, ಮೆಡಿಕಲ್ ಕಾಲೇಜುಗಳೆಂಬ ‘ಕಾಮ ಧೇನು’ಗಳನ್ನು ಕಟ್ಟುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಈಗಾಗಲೇ ಸಾಬೀತಾಗಿದೆ. ಇಲ್ಲದಿದ್ದರೆ ಗೋಮಾತೆಯ ಮಹತ್ವವನ್ನು ಸಾರುವ ಪ್ರತಿಫಲವಿಲ್ಲದ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ. ಇವತ್ತು ನಾಸ್ತಿಕವಾದಿ ಕಮ್ಯುನಿಸ್ಟರ ಕೇರಳದಲ್ಲಿ ಅಕ್ಕರೆಯ ಅಪ್ಪುಗೆಯ ಮೂಲಕ ದೇವರ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿರುವ ‘ಅಮ್ಮಾ’, ಆಧ್ಯಾತ್ಮದ ಮೂಲಕ ಜನರಿಗೆ ಮನಃಶಾಂತಿ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗದ ಮೂಲಕ ಆರೋಗ್ಯಯುತ ಜೀವನ ಮತ್ತು ಆಧ್ಯಾತ್ಮದತ್ತ ನಮ್ಮನ್ನು ಕರೆದೊಯ್ಯುತ್ತಿರುವ ಬಾಬಾ ರಾಮದೇವ್, ಆಮಿಷಗಳಿಗೊಳಗಾಗಿ ಮತಾಂತರಗೊಂಡಿರುವವರನ್ನು “ಶಬರಿ ಕುಂಭ’ದಲ್ಲಿ ಮೀಯಿಸಿ ಮರಳಿ ಮಾತೃಧರ್ಮಕ್ಕೆ ಕರೆತರುತ್ತಿರುವ ಆಶಾರಾಮ್ ಬಾಪು ಮುಂತಾದವರು ಅಪ್ರತಿಮ ಸೇವೆ ಮಾಡುತ್ತಿದ್ದಾರೆ. ನಾವು ತಾಯಿಯ ನಂತರ ಸ್ಥಾನವನ್ನು ನೀಡಿರುವ ಗೋಮಾತೆಯ ಬಗ್ಗೆ ಅರಿವು ಮೂಡಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿಗಳು ಮಾಡುತ್ತಿರುವುದೂ ಆ ರೀತಿಯ ಸೇವೆ ಮತ್ತು ಧರ್ಮಸಂಸ್ಥಾಪನಾ ಕಾರ್ಯವನ್ನೇ. ಅಂತಹವರ ಸುಪರ್ದಿಗೆ ಗೋಕರ್ಣದ ದೇವಾಲಯವನ್ನು ನೀಡಿದರೂ ವಿರೋಧಿಸುತ್ತಾರಲ್ಲಾ…

ಹೇ ಆದಿಶಂಕರಾ!

Saturday, September 27, 2008

ಶ್ರೀಮಠ ಮತ್ತು ಶಿಬಿರ

ನುಡಿಚಿತ್ರ ಅಂದರೇನು ಅಂತ ನನಗೆ ಗೊತ್ತಿರಲಿಲ್ಲ. ನನಗೇನು ಅಂದು ಅಲ್ಲಿ ಸೇರಿದ್ದ ಘಟಾನುಗಟಿ ಪತ್ರಕರ್ತರಿಗೂ ತಿಳಿದಿರಲಿಲ್ಲ.ದಿನಾಂಕ ೧೩-೦೮-೨೦೦೮ ರಂದು ಶ್ರೀ ಮಠದ ವತಿಯಿಂದ ಬೆಂಗಳೂರಿನ ಗಿರಿನಗರದ ಸಮೀಪ ಶ್ರೀಮಾತಾ ಕಲ್ಯಾಣ ಮಂಟಪದಲ್ಲಿ ಗೋವಿಗಾಗಿ ಮಾದ್ಯಮ ಎಂಬ ತರಬೇತಿ ಶಿಬಿರದಲ್ಲಿ ಖ್ಯಾತ ಬರಹಗಾರ ಆನಂದ್ ವಿವರವಾಗಿ ಹೇಳಿದಮೇಲೆ ಅರಿವಾಗಿದ್ದು ನಮಗೆಲ್ಲ. ನೀರುನೆರಳಿನ ರಾಧಾಕೃಷ್ಣ ಭಡ್ತಿ ಮಠದ ಪರವಾಗಿ ಶಿಬಿರವನ್ನು ಆಯೋಜಿಸಿದ್ದರು.ಪ್ರತೀ ಸೀಮೆಯಿಂದ ಕನಿಷ್ಠ ಇಬ್ಬರು ಬರುವಂತೆ ಮಠದ ಪರವಾಗಿ ಭಾರತೀಶ ಆಹ್ವಾನ ಕಳುಹಿಸಿದ್ದರು. ಆದರೆ ಜನರು ಈ ತರಬೇತಿ ಶಿಬಿರವನ್ನು ಬಳಸಿಕೊಳ್ಳುವಲ್ಲಿ ವಿಫಲವಾದರು. ಇರಲಿ ಬಂದಷ್ಟು ಜನರು ಬಳಸಿಕೊಂಡರೆ ಸಾಕಲ್ಲವೇ ಈಗ ವಿಷಯಕ್ಕೆ ಬರೊಣ.

ಶ್ರೀಯುತ ಆನಂದ ನಮಗೆಲ್ಲಾ ಒಂದು ಪ್ರಶ್ನೆ ಎಸೆದರು. ಅದು ಹೀಗಿತ್ತು. " ಜೋಗದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಳು" ಎಂಬುದನ್ನು ವರದಿ ಮಾಡಿ" ಎಂದು. ಸರಿ ನಾವೆಲ್ಲಾ ಪಟಪಟನೆ ವರದಿ ಬರೆದಿದ್ದೇ ಬರೆದಿದ್ದು. ಬರೆದಾದಮೇಲೆ ಓದಲು ಒಬ್ಬೊಬ್ಬರನ್ನೇ ಕೇಳಿದರು. ಎಲ್ಲರೂ ಯಥಾಪ್ರಕಾರ ನಿತ್ಯ ಪತ್ರಿಕೆಗಳಲ್ಲಿ ಬರುವಂತೆ ವರದಿ ಮಾಡಿದರು. ಆದರೆ ಆನಂದ್ ರವರಿಗೆ ತೃಪ್ತಿಯಾಗಲಿಲ್ಲ. ಕೆಲವರಂತೂ ಪುಟಗಟ್ಟಲೆ ವರದಿ ಮಾಡಿದ್ದರು ಆದರೂ ಅವರಿಗೆ ತೃಪ್ತಿ ಇಲ್ಲ. ಕೊನೆಯದಾಗಿ ಕುಮಾರಿಯಕ್ಕ ಎಂಬ ನಲವತ್ತೈದು ವರ್ಷದ (ವಿಜಯಕರ್ನಾಟಕ ಪತ್ರಿಕೆಯ ತಾಳಗುಪ್ಪ ವರದಿಗಾರನ ಪತ್ನಿ) ಆರಂಭದ ಒಂದೇ ಒಂದು ಸಾಲು ಹೇಳುತ್ತಿದ್ದಂತೆ ಭೇಷ್ ಎಂದರು. ಅದೇ ನುಡಿಚಿತ್ರ ಎಂದರು. ಅದು ಹೀಗಿತ್ತು " ಹೆರಿಗೆ ಆಸ್ಪತ್ರೆಯಾದ ಬಸ್". ಈಗ ನಿಮಗೂ ಅರ್ಥವಾಗಿರಬೇಕು ನುಡಿಚಿತ್ರವೆಂದರೆ. ಹೌದು ನಮ್ಮ ಸುತ್ತಮುತ್ತ ನಡೆಯುವ ವಿಷಯಗಳನ್ನು ವಿಶೇಷವಾಗಿ ಹೇಳುವ ಹಾಗೂ ಅರ್ಥಪೂರ್ಣ ಸಾಲುಗಳಲ್ಲಿ ಹೇಳುವ ಮತ್ತು ನುಡಿಗಳಲ್ಲಿ ಚಿತ್ರವನ್ನು ಕಟ್ಟಿಕೊಡುವ ವರದಿಗಳಿಗೆ ನುಡಿಚಿತ್ರ ಎನ್ನುತ್ತಾರೆ. ಇದೊಂದು ಉದಾಹರಣೆ. ನಂತರ ಆನಂದ ಶಿಬಿರಾರ್ಥಿಗಳಿಗೆ ಉತ್ತಮವಾಗಿ ಬರೆಯುವ ವಿಧಾನಗಳನ್ನು ಹೇಳಿದರು. ಭಡ್ತಿಯವರು ಪತ್ರಕರ್ತನ ನಡಾವಳಿಕೆ ನೀತಿ ಶ್ರದ್ಧೆ ಯ ಕುರಿತು ಉತ್ತಮವಾಗಿ ಭಾಷಣ ಮಾಡಿದರು.ದಟ್ಸ್ ಕನ್ನಡದ ವರದಿಗಾರರು, ಮಂಗಳ ಪತ್ರಿಕೆಯ ಸಂಪಾದಕರು ಬರಹಗಳ ಕುರಿತು ಒಳ್ಳೆಯ ಮಾತನ್ನಾಡಿದರು.


ಇಂಥಹ ಉತ್ತಮ ಕೆಲಸಗಳು ಶ್ರೀಮಠದಿಂದ ನಡೆಯುತ್ತವೆ. ಆದರೆ ಜನರು ಅದೇಕೋ ಬಳಸಿಕೊಳ್ಳುವುದಿಲ್ಲ. ಇಂದು ಪತ್ರಿಕೋದ್ಯಮ ವಿಚಿತ್ರ ರೀತಿಯಲ್ಲಿ ಬೆಳೆಯುತ್ತಿದೆ. ತತ್ವ ಸಿದ್ದಾಂತಗಳೆಲ್ಲಾ ಗಾಳಿಗೆ ತೂರಿದ ದಿವಸಗಳು ಇವು. ಒಂದಿಷ್ಟು ಒಳ್ಳೆಯ ಬರಹಗಳು ಬರಬೇಕೆಂದರೆ ಇಂಥಹ ಶಿಬಿರಗಳು ಹೆಚ್ಚಾಗಬೇಕು. ಶಿಬಿರಗಳು ಹೆಚ್ಚಾಗಬೇಕೆಂದರೆ ಜನ ಬೆಂಬಲ ಸಿಗಬೇಕು. ಜನರು ಹೆಚ್ಚು ಬಳಸಿಕೊಂಡು ಉತ್ತಮ ಲೇಖಕರು ಹೊರಹೊಮ್ಮಲಿ

-ಶಿಬಿರಾರ್ಥಿ

letter

Hi ,

Sure nice blog.. . but please have it posted in hindi/English .. can't read kannada :(( ! If you feel appropriate you can post it on the blog with the permisssion of Acharya.

I am presently at IIT, Delhi in research in Electrical Engineering, also to work with some of the doctors .. but I always think of Swamiji and think how I can participate in his quest for saving the indigenous cow. I totally cherish the significance of cow he highlights .. . Some times looking at the trees on the campus ( particularly right infront of my apartment, new vindhyachal, IIT Delhi ) I feel atleast they should allow some cows to be put here .. it will add more peace and serenity to this hardworking and intellectual environment. I hope really I can do it one day .

Recently I was talking to Amul and Mother Dairy I was querying how come they don't even have a supply of cow milk ?? All feel for it . the mangers ... but the question is which dairy will come forward in pride to start and sustain this indigenous cow milk supply ?

Although we see lot of cows on streets of Delhi ( most of them seem like indigenous) there is no cow milk supply in city

Please convey my regards to Acharya ....... surely will have his Darshan while I come to Bangalore. My Pranams to all the indigineous "Govugalu" around too ..

Seeking Blessings ..
Regards,
-Gomata
9717967308
-Gomata Sarma Varanasi
http://www.samskruti.org/people/gomata/gomata_index.html

Friday, September 26, 2008

ಇಷ್ಟಕ್ಕೂ ಅವರೇಕೆ ತಮ್ಮಲ್ಲಿರುವ ದಾಖಲೆಗಳನ್ನು ತೋರಿಸುತ್ತಿಲ್ಲ?!

ಪತ್ರೆಮನೆ ಅವರ ಬರಹಕ್ಕೆ ಇದು ಪ್ರತಿಕ್ರಿಯೆ
ಅಗಸ್ಟ೧೨ ,೨೦೦೮ರವರೆಗೂ ಗೋಕರ್ಣ ಅಂದರೆ ಅನುಪಯುಕ್ತ ವಸ್ತುವಾಗಿತ್ತು. ಅದೇ ಅ.೧೩ರಂದು ಕರ್ನಾಟಕ ಸರಕಾರ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟ ಮೇಲೆ ಗೋಕರ್ಣ ಈಗ ಎಲ್ಲರಿಗೂ ಬೇಕಾದ “ಕಲ್ಪಧೇನು”ವಾಗಿ ಬಿಟ್ಟಿದೆ!!.

ಎಲ್ಲ ಜಾತಿ ಜನಾಂಗ ಭಕ್ತಿ ಇಟ್ಟುಕೊಂಡಿರುವ,,ಪುರಾತನ ಐತಿಹಾಸಿಕ ಎನ್ನುವ ದೇವಸ್ಥಾನದ ಇಂದಿನ ಪರಿಸ್ಥಿತಿ ನೋಡಿದರೆ ಮನ ಮರುಗದೆ ಇರದು. ಅಭಿವೃದ್ಧಿ ಮಾಡಲು ದುಡ್ಡಿಲ್ಲವಾಗಿತ್ತ ಅಂದರೆ ಅದೂ ಇತ್ತು.ಆದರೆ ಮಾಡುವ ಮನಸ್ಸು ಮಾತ್ರ ಇಲ್ಲವಾಗಿತ್ತು. “ದುಡ್ಡಿನ” ಮದ ದಿಂದ ಬಂದ ದುಡ್ಡನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ೬ ತಲೆಮಾರಿನವರೆಗೂ ಕೂಡಿಟ್ಟರೆ ಅಭಿವ್ರದ್ಧಿಯಾದರೂ ಹೇಗೆ ಸಾಧ್ಯ?


ಅದು ಅಲ್ಲದೇ ಸರಕಾರದ ಅಧೀನ ಇದ್ದಿದ್ದರಿಂದ ಸರಕಾರದ ಅಭಿವೃದ್ಧಿ ಹೇಗೆ ಅಂಥ ಎಲ್ಲರಿಗೂ ಗೋತ್ತು.ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ, ಗಣ್ಯರು, ಮಠಾಧೀಶರೂ ಸಮಾಜದ ಎಲ್ಲರೂ ಗೋಕರ್ಣಕ್ಕೆ ಚಿತ್ತೈಸಿ, ಶ್ರೀ ಮಹಾಬಲನ ದರ್ಶನ ಪಡೆದವರೆ. ಆದರೂ ಇಷ್ಟು ವರ್ಷ ಗೋಕರ್ಣ ತನ್ನ ಪರಿಸರವನ್ನು ಕಲ್ಮಶ ಮಾಡಿಕೊಂಡಿದೆ. ಅಭಿವೃದ್ಧಿಯ ಗಂಧ ಗಾಳಿಯನ್ನೇ ಮರೆತು ಎಷ್ಟು ವರ್ಷವಾಯಿತೋ?.


ಹೀಗೆ ಇರುವಾಗ.....:ಹೀಗೆ ಅನಾಥವಾಗಿ ಬಿದ್ದಿದ್ದ ಗೋಕರ್ಣ ರಾತ್ರೋರಾತ್ರಿ ಇಡೀ ಜಗತ್ತಿಗೆ ಪ್ರಸಿದ್ಧಿಯಾಯಿತು. ಯಾವಾಗ ಅದು ಶ್ರೀರಾಮಚಂದ್ರಾಪುರ ಮಠದ ಆಸ್ತಿ ಎಂದು ಸರಕಾರ ಘೋಷಿಸಿ ಅದನ್ನು ಶ್ರೀಮಠಕ್ಕೆ ಹಸ್ತಾಂತರಿಸಿತೋ ಅಷ್ಟು ದಿನ ಮಲಗಿದ್ದ “ಹುಲಿ” ಗಳು ಮೈಕೊಡವಿ ಎಚ್ಚೆತ್ತುಕೊಂಡರು. ಸರಕಾರವೇನೋ ಸದ್ದು ಗದ್ದಲವಿಲ್ಲದೇ ಹಸ್ತಾಂತರಿಸಿತು ನಿಜ. ಆದರೆ ಗ್ರಾಮ ಪಂಚಾಯತ ಮಟ್ಟದಲ್ಲಿ ಠರಾವು ಮಾಡಿ ಅದನ್ನು ಸರಕಾರಕ್ಕೆ ಕಳುಹಿಸಲಾಗಿದೆ.ಅದೇನು ಕದ್ದು ಮುಚ್ಚಿ ಮಾಡಿದ್ದ? ಆಗ ಯಾರು ಯಾಕೆ ಧ್ವನಿ ಎತ್ತದೆ ಸುಮ್ಮನಿದ್ದಿದ್ದು?


ಆಮೇಲೆ ನಡೆದ ಘಟನೆ ಎಲ್ಲರಿಗೂ ಗೋತ್ತಿದೆ. ನಂತರ ಈ ಘಟನೆಗೆ ತಿರುವು ಬಂದಿದ್ದು ಅದೇ ಸಮುದಾಯಕ್ಕೆ ಸೇರಿದ ಮತ್ತೊಂದು ಮಠ ಸ್ವರ್ಣವಲ್ಲಿ ಮಠ ಇದನ್ನು ವಿರೋಧಿಸಿ ಸಭೆ ಕರೆದು ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದ್ದು.(ಇದರ ಘಟನಾವಳಿಗೆ www.bimbapratibimba.blogspot.com , www.media4cow.blogspot.com ನೋಡಬಹುದು). ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ಅನಿಸಿಕೆಯೇ ಅಸ್ಪಷ್ಟ. ‘ ಗೋಕರ್ಣವನ್ನು ಮಠಾಧೀಶರ ಸಮಿತಿಗೆ ಒಪ್ಪಿಸಬೇಕು. ಶೃಂಗೇರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಸಲಹೆ ಪಡೆಯಬೇಕು. ನಂತರ ಆ ಸಮಿತಿ ಗೋಕರ್ಣದ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ... ಹೀಗೆ ಅವರ ಮಾತು ಮುಂದುವರೆಯುತ್ತದೆ.


ಅಷ್ಟಕ್ಕೂ ಶೃಂಗೇರಿಯ ಸ್ವಾಮಿಗಳು ಹಿರಿಯರು ಹೇಳಿ ಒಂದೇ ಕಾರಣಕ್ಕೆ ಗೋಕರ್ಣಕ್ಕೆ ಸಂಭಂಧಿಸದ ಅವರ ಮಾರ್ಗದರ್ಶನ ಇವರಿಗೆ ಬೇಕ? ಅವರ ಮಾರ್ಗದರ್ಶನ ಇಲ್ಲದೇ ಕೆಲಸವಾಗದ? ರಾಮಚಂದ್ರಾಪುರ ಮಠಕ್ಕೆ ದೇವಸ್ಥಾನ ಹಸ್ತಾಂತg ವಾಗುವ ಮೊದಲು ನಿಜವಾಗಿಯೂ ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ಈ ಕಾರ್ಯವನ್ನು ಆವಗಲೇ ಮಾಡಿ ತಾವೊಬ್ಬ “ಮಾದರಿ” ಸ್ವಾಮಿ ಎಂದು ತೋರಿಸಬಹುದಿತ್ತು. ಎಲ್ಲದೂ ಬೇರೆಯವರು ಮಾಡಲು ಹೋರಟ ಮೇಲೆ ಇತರರೂ ಯಾಕೆ ಮಾಡಲು ಹೋಗಬೇಕು?


ಎಲ್ಲ ಮಾಧ್ಯಮಗಳ ತೀವ್ರ ವಿರೋಧ, ಹಾಗೂ ಇತರ ಕಡೆಗಳಿಂದಲೂ ಟೀಕೆಗಳ ದಾಳಿ ರಾಮಚಂದ್ರಾಪುರ ಮಠದ ಮೇಲೆ ಆಗುತ್ತಿರುವಾಗ, ಅದಕ್ಕೆ ಬೆಂಬಲಿಸದೇ ಇರುವುದು ಗೋಕರ್ಣ ಅಭಿವೃದ್ಧಿಯನ್ನು ವಿರೋಧಿಸಿದಂತೆ ಅಲ್ಲವೆ?


ಅವರಲ್ಲಿ ಇಲ್ಲ ಎನ್ನುವವರ ಬಳಿ ಇದೆಯೆ ದಾಖಲೆ:
ಇಷ್ಟಕ್ಕೂ ಸ್ವರ್ಣವಲ್ಲಿ ಶ್ರೀಗಳು ರಾಮಚಂದ್ರಾಪುರ ಮಠ ಸಲ್ಲಿಸಿರುವ ಗೋಕರ್ಣ ತನ್ನದು ಎನ್ನುವ ದಾಖಲೆ ಗಟ್ಟಿಯಾಗಿಲ್ಲ, ಅದು ರಾಮಚಂದ್ರಾಪುರ ಮಠದ್ದು ಅಲ್ಲಎನ್ನುವ ಅವರು ಅದಕ್ಕೆ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಬಹುದಿತ್ತಲ್ಲ. ಅಥವಾ ಹೇಳ ಬಹುದಿತ್ತಲ್ಲ.ಸ್ವರ್ಣವಲ್ಲಿಯವರು ಒಂದೇ ಅಲ್ಲ, ಅದನ್ನು ವಿರೋಧಿಸುವವರು ಮಠದ ದಾಖಲೆ ಕೇಳುವ ಬದಲು ತಮ್ಮಲ್ಲಿರುವ ದಾಖಲೆಗಳನ್ನು ಕೊಡಬಹುದಲ್ಲ. ಕೇವಲ ಮಠಕ್ಕೆ ಬರುವ ಮೊದಲು ಟ್ರಸ್ಟನ ಉಸ್ತುವಾರಿಯಲ್ಲಿತ್ತು ಹೇಳುವುದು ಮತ್ತು ಅಲ್ಲಿನ ಅರ್ಚಕರ ಒಡೆತನದಲ್ಲಿತ್ತು ಎನ್ನುವುದು ದಾಖಲೆಯೆ? ಅಷ್ಟಕ್ಕೂ ಅವರೂ ದಾಖಲೆ ಬಿಡುಗಡೆ ಮಾಡಿದ್ದರೆ ಜನರಲ್ಲಿ ಸಮಸ್ಯೆಯೇ ಇರುತ್ತಿರಲಿಲ್ಲ. ರಾಮಚಂದ್ರಾಪುರ ಮಠಕ್ಕೆ ಇನ್ನಷ್ಟು ಗಟ್ಟಿಯಾದ ದಾಖಲೆಗಳನ್ನು ಸಲ್ಲಿಸಲು ಅವಕಾಶ ಆಗುತ್ತಿತ್ತೇನೋ??!!!
“ಇಬ್ಬರ ಜಗಳ ಮೂರನೆಯವರಿಗೆ ಲಾಭ” ಎನ್ನುವ ಗಾದೆ ಎಲ್ಲರಿಗೂ ಚಿರಪರಿಚಿತ. ನಮ್ಮ ಸಂಸ್ಕೃತಿಯ ಸಂಕೇತವಾಗಿರುವ ದೇವಸ್ಥಾನವನ್ನು ಮೂರನೇಯವರೆಗೆ ಕೊಳ್ಳೆಹೊಡೆಯಲು ಬಿಡದೆ ರಕ್ಷಿಸೋಣ. ಏನನ್ನುತ್ತಿರಿ?

-ನಿತಿನ್ ಮುತ್ತಿಗೆ
nitinmuttige@gmail.com

Thursday, September 25, 2008

ಮಠಾಧೀಶರ ಟೀಕೆ ಕೃತಘ್ನತೆಯ ಪರಮಾವಧಿ



ಮತಾಂತರ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿ ನೇತೃತ್ವದ ಮಠಾಧೀಶರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಅಪಿಸಿದ್ದಕ್ಕೆ ಪ್ರತಿಪಕ್ಷಗಳಿಂದ ವ್ಯಕ್ತವಾಗಿರುವ ಟೀಕೆಗೆ ಇಲ್ಲಿದೆ ಉತ್ತರ.

‘ಸರ್ವಸಂಗ ಪರಿತ್ಯಾಗ ಮಾಡಿದವರಿಗೆ ಇವೆಲ್ಲ ಯಾಕೆ ’ ಎಂದು ಮಠಾಧೀಶರು/ ಸನ್ಯಾಸಿಗಳನ್ನು ಪ್ರಶ್ನಿಸುವುದು ಎಷ್ಟು ಸರಿ ? ಅವರು ಅರಿಷಡ್ವರ್ಗಗಳಿಂದ ಮುಕ್ತರಾಗಲು ಸರ್ವಸಂಗ ಪರಿತ್ಯಾಗ ಮಾಡಿದ್ದಾರೆಯೇ ವಿನಾ, ದೇಶಪ್ರೇಮ ಹಾಗೂ ಧರ್ಮದ ತ್ಯಾಗ ಮಾಡಿಲ್ಲ. ಸಾಮಾಜಿಕ ಏಕತೆ, ಸಾಮರಸ್ಯ, ಸುಖ-ಶಾಂತಿ ಬಯಸುತ್ತಿರುವ ಮಠಾಶರನ್ನು ಅವಹೇಳನ ಮಾಡಿರುವುದು ಅವರಿಗೆ ಮಾತ್ರವಲ್ಲ, ಕೋಟ್ಯಂತರ ಜನರ ಮನಸ್ಸಿಗೆ ಅಪಾರ ನೋವನ್ನುಂಟುಮಾಡಿದೆ ಎನ್ನುತ್ತಾರೆ ಘನತೆವೆತ್ತ ನ್ಯಾ. ಡಾ.ಎಂ.ರಾಮಾಜೋಯಿಸ್.

ಮತಾಂತರ ಚಟುವಟಿಕೆ ಹಾಗೂ ಹಿಂದು ದೇವತೆಗಳ /ಋಷಿಮುನಿಗಳ ಅವಹೇಳನಕಾರಿ ಪ್ರಕಟಣೆಯ ವಿರುದ್ಧ ಸ್ವರ ಎತ್ತಿರುವ ಮಠಾಶರನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಾರೆಂದು ತೆಗಳಿರುವುದು ಕೃತಘ್ನತೆಯ ಪರಮಾವ.ಶತಮಾನಗಳ ಕಾಲ ಪರಕೀಯರ ರಾಜಕೀಯ ಹಾಗೂ ಮತೀಯ ಆಕ್ರಮಣದ ನಂತರವೂ ಭಾರತವನ್ನು, ಭಾರತವಾಗಿ ಉಳಿಸಿರುವುದರ ಕೀರ್ತಿಯಲ್ಲಿ ಸಿಂಹಪಾಲು ಮಠಾಶರಿಗೆ ಹಾಗೂ ಸನ್ಯಾಸಿಗಳಿಗೆ ಸೇರುತ್ತದೆ ಎಂಬುದು ಐತಿಹಾಸಿಕ ಸತ್ಯ. ಇವರೆಲ್ಲರೂ ಪರಕೀಯ, ಮತೀಯ ಹಾಗೂ ಸಾಂಸ್ಕೃತಿಕ ಆಕ್ರಮಣಗಳ ವಿರುದ್ಧ ಭದ್ರಕೋಟೆಯಾಗಿದ್ದರು ಎಂಬುದನ್ನು ನಾವು ಮರೆಯಬಾರದು.


ಮತಾಂತರ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ಇದರಿಂದಾಗಿ ಸಮಾಜ, ಕುಟಂಬ ಹಾಗೂ ಸಾರ್ವಜನಿಕ ಶಾಂತಿ ನಾಶವಾಗುತ್ತದೆ. ಜತೆಗೆ, ಕೋಮುವಾರು ಭಾವನೆಯನ್ನೂ ಪ್ರಚೋದಿಸುತ್ತದೆ. ಅಂದಹಾಗೆ, ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮತದ ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆಯೇ ವಿನಾ, ಮತಾಂತರ ಮಾಡುವ ಹಕ್ಕು ನೀಡಿಲ್ಲ. ಈ ಹಿನ್ನೆಲೆಯಲ್ಲೇ ಮಧ್ಯ ಪ್ರದೇಶ ಮತ್ತು ಒರಿಸ್ಸಾ ಸರಕಾರ ಜಾರಿಗೊಳಿಸಿರುವ ಮತಾಂತರ ನಿಷೇಧ ಕಾನೂನು ಸಂವಿಧಾನ ಬದ್ಧ ಎಂದು ಶ್ರೇಷ್ಠ ನ್ಯಾಯಾಲಯದ ಸಂವಿಧಾನ ಪೀಠ ೧೯೭೭ರಲ್ಲಿ ತೀರ್ಪು ನೀಡಿದೆ.


ಇದೇ ರೀತಿಯ ಕಾನೂನು ಕರ್ನಾಟಕದಲ್ಲೂ ಆಗಬೇಕು ಎಂಬುದು ಮಠಾಧೀಶರ ಬೇಡಿಕೆ. ಅದು ಸಂವಿಧಾನಬದ್ಧ ಬೇಡಿಕೆಯೂ ಹೌದು. ಇದನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಅಥವಾ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ಎಂದು ಟೀಕಿಸುವುದು ಸರಿಯಲ್ಲ. ಎಲ್ಲ ಮಠಾಧೀಶರೂ ಚರ್ಚ್‌ಗಳ ಮೇಲೆ ನಡೆದ ಅಕ್ರಮಣವನ್ನು ಕಟುವಾಗಿ ಖಂಡಿಸಿದ್ದಾರೆ. ಕ್ರೈಸ್ತರು ಮತ್ತು ಹಿಂದುಗಳು ಸಾಮರಸ್ಯದಿಂದ ಬಾಳಬೇಕೇ ಹೊರತು ಕೆಲವು ಮತಾಂಧ ಕ್ರೈಸ್ತರ ಗುಂಪಿನ ಚಟುವಟಿಕೆಗಳಿಂದ ಸಮಾಜದಲ್ಲಿ ಸುಖ-ಶಾಂತಿ ಹಾಳಾಗಬಾರದು ಎನ್ನುವುದಷ್ಟೇ ಅವರ ಕಳಕಳಿ.


ನಮ್ಮ ದೇಶದ ಇತಿಹಾಸದಲ್ಲಿ ಮಠಾಧೀಶರ, ಸಾಧು-ಸನ್ಯಾಸಿಗಳ ಪಾತ್ರ ಅವಿಸ್ಮರಣೀಯ. ೧೪ನೇ ಶತಮಾನದಲ್ಲಿ ಮತೀಯ ಹಾಗೂ ರಾಜಕೀಯ ಆಕ್ರಮಣಕ್ಕೆ ತುತ್ತಾಗಿ ನಮ್ಮ ದೇಶ ಕಾರ್ಗತ್ತಲೆಯಲ್ಲಿ ಮುಳುಗಿ ತತ್ತರಿಸುತ್ತಿದ್ದಾಗ, ಶೃಂಗೇರಿ ಮಠಾಧೀಶರಾಗಿದ್ದ ವಿದ್ಯಾರಣ್ಯರು, ಹಕ್ಕ-ಬುಕ್ಕರಿಗೆ ಸೂರ್ತಿ, ಮಾರ್ಗದರ್ಶನ ನೀಡಿ ಅತ್ಯಂತ ಪ್ರಬಲವಾದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು.


ಅದು ಮುಂದಿನ ಎರಡು ಶತಮಾನಗಳ ಕಾಲ ರಾಷ್ಟ್ರದ ರಕ್ಷಣೆ ಮಾಡಿತು. ದುರದೃಷ್ಟವಶಾತ್, ಸಾಮ್ರಾಜ್ಯ ನಾಶವಾದ ನಂತರ ಜನರು ಭಯಭೀತರಾಗಿದ್ದರು. ಅಂತಹ ಸಮಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಮೊಘಲ್ ಸಾಮ್ರಾಜ್ಯದ ವಿರುದ್ಧ ಸಾಮ್ರಾಜ್ಯವನ್ನು ಕಟ್ಟಲು ಛತ್ರಪತಿ ಶಿವಾಜಿಗೆ ಸೂರ್ತಿ, ಮಾರ್ಗದರ್ಶನ ನೀಡಿದ್ದು ಸನ್ಯಾಸಿಯಾಗಿದ್ದ ಸಮರ್ಥರಾಮದಾಸರು. ಮತಾಂತರಕ್ಕೆ ಒಪ್ಪದೆ ತಮ್ಮನ್ನೇ ರಾಷ್ಟ್ರಕ್ಕಾಗಿ ಬಲಿದಾನ ಮಾಡಿ ರಾಷ್ಟ್ರದ ಗೌರವವನ್ನು ಉಳಿಸಿದವರು ಗುರು ತೇಗ್ ಬಹದ್ದೂರ್‌ರವರು. ಅವರ ಬಲಿದಾನದಿಂದ ಸೂರ್ತಿ ಪಡೆದು ರಾಷ್ಟ್ರದ ರಕ್ಷಣೆ ಮಾಡಿದವರು ಗುರುಗೋವಿಂದ್ ಸಿಂಗ್. ಭಾರತೀಯ ಧರ್ಮ, ಸಂಸ್ಕೃತಿಗಳು ಪಾಶ್ಚಿಮಾತ್ಯರ ಆಕ್ರಮಣದಿಂದಾಗಿ ಅವಹೇಳನಕ್ಕೊಳಗಾಗಿದ್ದಾಗ ಅವುಗಳಿಗೆ ತಕ್ಕ ಉತ್ತರ ಕೊಟ್ಟವರು ಸ್ವಾಮಿ ವಿವೇಕಾನಂದರು. ಮತಾಂತರದ ಆಘಾತಕ್ಕೊಳಗಾಗಿ ತಮ್ಮ ಧರ್ಮ, ಸಂಸ್ಕೃತಿಗಳು ನಾಶವಾಗುವುದನ್ನು ತಪ್ಪಿಸಲು ಶುದ್ಧೀಕರಣದ ದೊಡ್ಡ ಚಳುವಳಿಯನ್ನು ಮಾಡಿದವರು ಸ್ವಾಮಿ ಶ್ರದ್ಧಾನಂದರು ಮತ್ತು ಸ್ವಾಮಿ ದಯಾನಂದ ಸರಸ್ವತಿಯವರು.


ನಂತರ, ಅರವಿಂದ ಘೋಷ್, ನಾರಾಯಣ ಗುರು, ರಮಣ ಮಹರ್ಷಿಗಳು...ಹೀಗೆ ಅಸಂಖ್ಯ ಸಾಧು ಸನ್ಯಾಸಿಗಳು ರಾಷ್ಟ್ರದ ರಕ್ಷಣೆಗಾಗಿ ಸರ್ವತ್ಯಾಗ ಮಾಡಿದ್ದಾರೆ. ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಕಾರವಿದ್ದರೂ, ಸಂವಿಧಾನದ ಆಧಾರ ಶಿಲೆಯ ಚೌಕಟ್ಟನ್ನು ನಾಶಮಾಡುವ ಅಕಾರವಿಲ್ಲ ಎಂದು ಶ್ರೇಷ್ಠ ನ್ಯಾಯಾಲಯದಲ್ಲಿ ವಾದಿಸಿ, ಸಂವಿಧಾನವನ್ನು ರಕ್ಷಿಸಿದವರು ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರು. ಸಂವಿಧಾನದಲ್ಲಿ ಮದ್ಯಪಾನ ಮತ್ತು ಗೋಹತ್ಯೆ ನಿಷೇಧವಾಗಲೇಬೇಕು ಎಂದಿದ್ದರೂ, ಸಂವಿಧಾನಕ್ಕೆ ಬದ್ಧರಾಗಿರುತ್ತೇವೆಂದು ಪ್ರಮಾಣವಚನ ತೆಗೆದುಕೊಂಡ ಶಾಸಕರು, ಕರ್ತವ್ಯ ಚ್ಯುತರಾಗಿರುವುದನ್ನು ಕಂಡು ಅದರ ವಿರುದ್ಧ ಚಳುವಳಿ ನಡೆಸಿದವರು, ನಡೆಸುತ್ತಿರುವವರು ತರಳಬಾಳು ಜಗದ್ಗುರುಗಳು.
ಸಂವಿಧಾನದ ನಿರ್ದೇಶನದಂತೆ ಗೋಹತ್ಯೆ ನಿಷೇಧವಾಗಲೇಬೇಕೆಂದು ಬೃಹತ್ ಚಳುವಳಿ ನಡೆಸುತ್ತಿರುವವರು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು. ಹೀಗೆ ನಾನಾ ರೀತಿಯಲ್ಲಿ ರಾಷ್ಟ್ರವನ್ನು ರಕ್ಷಿಸುತ್ತಿರುವ ಮಠಾಧೀಶರನ್ನು ತೆಗಳುವುದು ಕೃತಘ್ನತೆಯ ಪರಮಾವಧಿ ಅಲ್ಲದೇ ಮತ್ತಿನ್ನೇನು ?.

Tuesday, September 23, 2008

ಶ್ರೀಗಳಲ್ಲಿ ನೇರ ಮಾತುಕತೆ ನಡೆಯಲಿ

ಶ್ರೀರಾಮಚಂದ್ರಾಪುರ ಮಠಕ್ಕೆ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇಗುಲ ಹಸ್ತಾಂತರ ಮಾಡಿದ ರಾಜ್ಯ ಸರಕಾರದ ಕ್ರಮದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಷಯವನ್ನು ವಿವಾದಕ್ಕೆ ಎಳೆಯುವ ಪ್ರಯತ್ನವೂ ಆಗಿದೆ. ನಾಡಿನ ಹಲವು ಮಠಾಶರೂ ಅವರ ನಿಲುವನ್ನು ಬಹಿರಂಗ ಪಡಿಸಿದ್ದಾರೆ. ಶ್ರೀಕ್ಷೇತ್ರ ಗೋಕರ್ಣ ಇರುವುದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಎಂಬುದು ತಿಳಿದಿರುವ ಸಂಗತಿ. ಇದೇ ಜಿಲ್ಲೆಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಗೋಕರ್ಣದೊಟ್ಟಿಗೆ ಅತ್ಯಂತ ಮಧುರ ಬಾಂಧವ್ಯವಿದೆ. ಶ್ರೀಮಠವು ಗೋಕರ್ಣಕ್ಕೆ ಸನಿಹದಲ್ಲೇ ಇರುವುದೂ ಗಮನಾರ್ಹ. ಒಂದರ್ಥದಲ್ಲಿ ಪ್ರಾದೇಶಿಕ ಹಾಗೂ ಮಾನಸಿಕವಾಗಿಯೂ ಸ್ವರ್ಣವಲ್ಲೀ ಸಂಸ್ಥಾನವು ಗೋಕರ್ಣಕ್ಕೆ ಸಾಮೀಪ್ಯದಲ್ಲಿದೆ.

ಗೋಕರ್ಣದಲ್ಲಿ ನಡೆಯುವ ಯಾವತ್ತೂ ಧಾರ್ಮಿಕ ವಿ, ವಿಧಾನಗಳಿಗೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಾರ್ಗದರ್ಶನ, ಸಹಕಾರವಿದೆ. ಜತೆಗೆ ಶ್ರೀಮಠದಲ್ಲಿ ವಿದ್ವತ್ ಸಮ್ಮೇಳನ, ಯಜ್ಞ, ಯಾಗಾದಿಗಳಲ್ಲಿ ಗೋಕರ್ಣದ ವಿದ್ವಜ್ಜನರು, ಪಂಡಿತರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸ್ವರ್ಣವಲ್ಲೀ ಮಠ ಹಾಗೂ ಗೋಕರ್ಣದ ಬಾಂಧವ್ಯ ಏನೆಂಬುದು ಅರ್ಥ ಮಾಡಿಕೊಳ್ಳಲು ಸಾಧ್ಯ. ಹೀಗಾಗಿಯೇ ಗೋಕರ್ಣ ದೇಗುಲ ಹಸ್ತಾಂತರ ಸಂಬಂಧವಾಗಿ ಸ್ವರ್ಣವಲ್ಲೀ ಮಠದ ಪೀಠಾಪತಿಗಳಾದ ಶ್ರೀ ಗಂಗಾಧರೇಂದ್ರ ಸ್ವರಸ್ವತೀ ಶ್ರೀಗಳು ವ್ಯಕ್ತ ಪಡಿಸುವ ಅಭಿಪ್ರಾಯಕ್ಕೆ ಮಹತ್ವವಿದೆ. ಪ್ರಾಯಶಃ ಮಿಕ್ಕ ಧಾರ್ಮಿಕ ಮುಖಂಡರ ಒಲವು, ನಿಲುವುಗಳಿಗಿಂತ ಸ್ವರ್ಣವಲ್ಲೀ ಶ್ರೀಗಳು ಆಡುವ ಮಾತಿಗೆ ಶ್ರೀರಾಮಚಂದ್ರಾಪುರ ಮಠ, ಸರಕಾರ ಸರಿಯಾಗಿ ಸ್ಪಂದಿಸುವ ಅವಶ್ಯಕತೆಯಿದೆ.

ಶ್ರೀ ಸ್ವರ್ಣವಲ್ಲೀ ಮಠ ಹಾಗೂ ಶ್ರೀರಾಮಚಂದ್ರಾಪುರ ಮಠಗಳೆರಡೂ ಪ್ರಧಾನವಾಗಿ ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವು. ಗೋಕರ್ಣ ಹಸ್ತಾಂತರ ಅನಂತರದ ಬೆಳವಣಿಗೆ, ಎರಡೂ ಮಠಗಳ ನಡುವೆ ಕಂದಕ ಸೃಷ್ಟಿಸುವಂತಾಗಿದೆ. ಹವ್ಯಕರಷ್ಟೇ ಎಂದಲ್ಲ ; ಉತ್ತರ ಕನ್ನಡದ ಸಮಸ್ತ ಜನಾಂಗಳ ಮಧ್ಯೆ ಸ್ವರ್ಣವಲ್ಲೀ ಮಠ ಮತ್ತು ರಾಮಚಂದ್ರಾಪುರ ಮಠದ ಬೆಂಬಲಿಗರು ಎಂಬ ‘ದ್ವಿಪಂಥ’ ಮೂಡುವುದಕ್ಕೂ ಕಾರಣವಾಗುತ್ತಿದೆ. ಈ ಒಡಕು, ಬಿರುಕನ್ನು ಶಮನಗೊಳಿಸುವ ಕಾರ್ಯ ತುರ್ತಾಗಿ ಆಗಬೇಕು. ಇಲ್ಲದಿದ್ದರೆ ಧಾರ್ಮಿಕ ಬಿಕ್ಕಟ್ಟು ಉಂಟಾಗುವ ಆತಂಕ ಎದುರಾಗಿದೆ. ಈ ಪ್ರತಿಕೂಲ ವಾತಾವರಣ ತಿಳಿಗೊಳಿಸಲು ಹಾಗೂ ಭಕ್ತ ಸಮುದಾಯದಲ್ಲಿ ಸಮನ್ವಯದ ಬಂಧ ಬೆಸೆಯಲು ಶ್ರೀ ಸ್ವರ್ಣವಲ್ಲೀ ಶ್ರೀಗಳು ಮುಕ್ತ ಮನಸ್ಸು ಹೊಂದಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ಶ್ರೀಗಳೂ ಈ ನೆಲೆಯಲ್ಲಿ ಒಲವಿನ ಹಣತೆ ಹೊತ್ತಿಸುತ್ತಾರೆ ಎಂಬ ಭರವಸೆ, ವಿಶ್ವಾಸವು ಈರ್ವರೂ ಶ್ರೀಗಳನ್ನು ಹತ್ತಿರದಿಂದ ಬಲ್ಲವರಿಗೆ ಇದೆ.

ಸ್ವರ್ಣವಲ್ಲೀ ಶ್ರೀಗಳು ಈ ಸಂಬಂಧವಾಗಿ ಜಯನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯೊಂದನ್ನು ನಡೆಸಿದರು. ಈ ಸಂದರ್ಭದಲ್ಲಿ ಗೋಕರ್ಣ ಹಸ್ತಾಂತರದ ಬಗ್ಗೆ ತಮ್ಮ ಸಾತ್ವಿಕ ಅಸಮಾಧಾನವನ್ನೂ ಒಂದು ರೀತಿಯಲ್ಲಿ ವ್ಯಕ್ತ ಪಡಿಸಿದರು. ಆದರೆ, ಅವರ ಮಾತುಗಳಲ್ಲಿ ಶ್ರೀ ರಾಘವೇಶ್ವರರ ಕುರಿತಾಗಿ ಗೌರವ, ಮೆಚ್ಚುಗೆ ಇದ್ದಿದ್ದು ಸ್ಪಷ್ಟವಾಗಿತ್ತು. ಗೋಕರ್ಣ ವಿವಾದದಿಂದ ರಾಮಚಂದ್ರಾಪುರ ಮಠದ ಶ್ರೀಗಳು ಇಕ್ಕಟ್ಟಿನಲ್ಲಿ ಸಿಲುಕಬಾರದು ಎಂಬ ಕಾಳಜಿಯೂ ಅವರ ಮಾತಿನಲ್ಲಿತ್ತು. ಜತೆಗೆ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ನಡೆದ ಸಭೆಯ ನಿರ್ಣಯಗಳು ಮಾಧ್ಯಮದಲ್ಲಿ ತಪ್ಪಾಗಿ ಬಂದ ಬಗ್ಗೆ ವಿಷಾದವೂ ಇತ್ತು.

ಸುದ್ದಿಗೋಷ್ಠಿಯ ಪೂರ್ಣಪಾಠ ಹೀಗಿದೆ
ಗೋಕರ್ಣ ಹಸ್ತಾಂತರ ವಿವಾದಕ್ಕೆ ತೆರೆ ಎಳೆಯಲು ಶೃಂಗೇರಿ ಶ್ರೀಗಳ ಮಾರ್ಗದರ್ಶನ ಪಡೆಯಬೇಕು. ಅಲ್ಲದೆ ಯತಿವರೇಣ್ಯರ ಸಮಿತಿ ರಚಿಸಿ ಸಂಧಾನ ಪ್ರಕ್ರಿಯೆ ಮಾಡಬೇಕು. ನ್ಯಾಯಾಲಯದ ಮೂಲಕ ಇದನ್ನು ಇತ್ಯರ್ಥ ಪಡಿಸುವುದು ಅಷ್ಟೊಂದು ಉಚಿತವಲ್ಲ. ಯಾಕೆಂದರೆ ಇದಕ್ಕೆ ವಿಳಂಬವಾಗುತ್ತದೆ. ಆ ಅವಯಲ್ಲಿ ಮತ್ತಷ್ಟು ಗೊಂದಲಕ್ಕೆ ಎಡೆಯಾದೀತು.

ರಾಘವೇಶ್ವರರಿಗೂ ನಮಗೂ ಆತ್ಮೀಯ ಸಂಬಂಧವಿದೆ. ಅನೇಕ ಕಾರ್ಯಕ್ರಮದಲ್ಲಿ ಒಂದಾಗಿ ಭಾಗವಹಿಸಿ ಯತಿಗಳ ಸಮನ್ವಯ ಹೇಗಿರಬೇಕು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಆದರೆ, ಗೋಕರ್ಣದ ವಿಚಾರದಲ್ಲಿ ರಾಮಚಂದ್ರಾಪುರ ಮಠವನ್ನು ಸಂಪರ್ಕಿಸಿ ಮಾತುಕತೆ ಆಡುವ ಪ್ರಯತ್ನ ಫಲಕಾರಿಯಾಗಿಲ್ಲ. ಈಗಲೂ ಈ ಪ್ರಯತ್ನ ಮುಂದುವರಿದಿದೆ. ಮಾತುಕತೆ ಏರ್ಪಡುವ ವಿಶ್ವಾಸವೂ ನಮಗಿದೆ. ಈ ವಿಷಯದಲ್ಲಿ ರಾಜ್ಯ ಸರಕಾರವೂ ವಿವೇಚನೆ ಮಾಡಬೇಕು. ಗೋಕರ್ಣ ಕ್ಷೇತ್ರ ರಾಮಚಂದ್ರಾಪುರ ಮಠಕ್ಕೆ ಸೇರಿದ ಬಗ್ಗೆ ದಾಖಲೆ ಇದೆ ಎನ್ನುತ್ತಾರೆ. ಆದರೆ, ನಮ್ಮ ದೃಷ್ಟಿಯಲ್ಲಿ ಆ ದಾಖಲೆಗಳು ಅಷ್ಟು ಗಟ್ಟಿಯಾಗಿವೆ ಎನ್ನಿಸುವುದಿಲ್ಲ. ಮುಂದೆ ಕೋರ್ಟ್‌ನಲ್ಲಿ ಆ ಸಾಕ್ಷ್ಯಾಧಾರಗಳು ಸಿಂಧು ಆಗದೇ ಹೋದರೆ ತೊಂದರೆಯಾದೀತು. ಪರ್ಯಾಯವಾಗಿ ಸರಕಾರಕ್ಕೂ, ರಾಮಚಂದ್ರಾಪುರ ಮಠಕ್ಕೂ ಮುಖಭಂಗವಾದೀತು. ಅಂತಹ ಸಂದರ್ಭ ಬರಬಾರದು ಎಂಬುದು ನಮ್ಮ ಕಳಕಳಿ.
ಹೀಗಾಗಿ ನಮ್ಮವರಿಗೆ ತೊಂದರೆ ಬರಬಾರದು ಎಂಬ ನೆಲೆಯಲ್ಲಿ ಯೋಚಿಸಿ ಶೃಂಗೇರಿ ಶ್ರೀಗಳನ್ನೂ ನಾವು ಸಂಪರ್ಕ ಮಾಡಿದ್ದೇವೆ. ಈ ಗೊಂದಲ ಪರಿಹಾರಕ್ಕೆ ಸಂಧಾನ ಮಾಡುವಂತೆ ಕೇಳಿಕೊಳ್ಳಲಾಗಿದೆ. ಅವರ ಮಾರ್ಗದರ್ಶನವನ್ನೂ ಬಯಸಲಾಗಿದೆ. ಪೇಜಾವರ ಶ್ರೀಗಳೂ ಈ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದಾರೆ.

ಮುಖ್ಯಮಂತ್ರಿಗೆ ಪತ್ರ
ಗೋಕರ್ಣ ಹಸ್ತಾಂತರ ವಿಷಯವಾಗಿ ನಮ್ಮ ಮಠದಲ್ಲಿ ನಡೆದ ಸಭೆಯ ನಿರ್ಣಯದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿ ಕೊಡಲಾಗಿದೆ. ಸುಧರ್ಮ ಸಭಾಭವನದಲ್ಲಿ ನಡೆದ ಅಂದಿನ ಸಭೆಯಲ್ಲಿ ಗೋಕರ್ಣಕ್ಕೆ ಪ್ರತ್ಯಕ್ಷ ಯಾ ಪರೋಕ್ಷ ಸಂಬಂಧ ಪಟ್ಟ ವಿವಿಧ ಮಠಾಪತಿಗಳು, ಗೌರವ ಪ್ರತಿನಿಗಳು ಹಾಗೂ ಬೇರೆ ಬೇರೆ ವರ್ಗ ಸಮುದಾಯಗಳ ಜನರೂ ಸಮಾವೇಶಗೊಂಡಿದ್ದರು. ಮುಖ್ಯವಾಗಿ ಗೋಕರ್ಣದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಮಹತ್ವ, ಕಾನೂನು ದೃಷ್ಟಿಕೋನ, ಸಾಮಾಜಿಕ ದೃಷ್ಟಿ ವಿಷಯವಾಗಿ ಚರ್ಚೆ ಚಿಂತನೆ ಮಾಡಲಾಯಿತು.

ಕಾನೂನು ದೃಷ್ಟಿಕೋನ
ಗೋಕರ್ಣವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಾಗ ಕಾನೂನಿನ ಅಂಶಗಳನ್ನು ಕೂಲಂಕಷವಾಗಿ ನೋಡಿಲ್ಲ ಎಂಬುದು ನಮ್ಮ ಅಭಿಪ್ರಾಯ. ಇದರಲ್ಲಿ ಸಾಕಷ್ಟು ತೊಡಕು ಇರುವ ಬಗ್ಗೆ ಕಾನೂನು ತಜ್ಞರು ಹಾಗೂ ಇತಿಹಾಸಕಾರರೂ ಹೇಳಿದ್ದಾರೆ. ಈ ಹಿಂದೆ ಗೋಕರ್ಣ ದೇಗುಲವನ್ನು ಧಾರ್ಮಿಕ ದತ್ತಿ ಇಲಾಖೆಯ ಅಸೂಚಿತ ಪಟ್ಟಿಯಿಂದ ಕೈಬಿಡಬೇಕು ಎನ್ನುವ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದೂ ಇಲ್ಲಿ ಉಲ್ಲೇಕಾರ್ಹ. ಒಂದು ವೇಳೆ ಇದಕ್ಕೆ ಅವಕಾಶವಿದ್ದರೂ ಗೋಕರ್ಣವನ್ನು ಯಾವುದೇ ವ್ಯಕ್ತಿ, ಸಂಸ್ಥೆಗೆ ಕೊಡಲು ಬರುವುದಿಲ್ಲ ಎಂಬುದನ್ನು ಅಂದಿನ ಮಹಾಸಭೆಯಲ್ಲಿ ಗಮನಿಸಲಾಗಿದೆ. ಕಾನೂನು ಸಂಬಂತ ಎಲ್ಲ ವಿಷಯವನ್ನು ದಾಖಲೆ ಸಹಿತಿ ಮುಖ್ಯಮಂತ್ರಿಗೆ ಕಳುಹಲಾಗಿದೆ.

ಧಾರ್ಮಿಕ ಅಂಶ
ಗೋಕರ್ಣವು ರಾಮಚಂದ್ರಾಪುರ ಮಠದ ವಶವಾದ್ದರಿಂದ ಮಹಾಬಲೇಶ್ವರ ದೇಗುಲದೊಂದಿಗೆ ಧಾರ್ಮಿಕ ಸಂಬಂಧವಿರುವ ಇತರ ಮಠಾಶರಿಗೆ ಸಹಜವಾಗಿ ಮುಜುಗರ ಉಂಟಾಗುವಂತಾಗಿದೆ. ಮಹಾಬಲೇಶ್ವರ ದೇವರನ್ನು ಪೂಜಿಸಲು ರಾಮಚಂದ್ರಾಪುರ ಮಠದ ಅನುಮತಿಗೆ ಕಾಯುವ ಸನ್ನಿವೇಶ ಎದುರಾಗುವಂತಾಗಿದೆ. ಗೋಕರ್ಣ ರಥೋತ್ಸವದಲ್ಲಿ ಗೌರವ ಸೂಚಕವಾಗಿ ಇತರ ಮಠಗಳನ್ನು ರಥಗಾಣಿಕೆಗೆ ಕರೆಯುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದರಲ್ಲಿ ಸ್ವರ್ಣವಲ್ಲೀ ಮಠಕ್ಕೆ ವಿಶೇಷ ಸ್ಥಾನವಿದ್ದು, ನಮ್ಮ ೧೬ ಸೀಮೆಯನ್ನು ಪ್ರತ್ಯೇಕವಾಗಿ ಕರೆಯುವ ಸಂಪ್ರದಾಯವಿದೆ. ಹಸ್ತಾಂತರದಿಂದಾಗಿ ಇಂಥ ಅನೇಕ ಸತ್ಸಂಪ್ರದಾಯಗಳು ಮೊಟಕಾಗುತ್ತವೆಯೇ ? ಎಂಬ ಪ್ರಶ್ನೆ ಎದ್ದಿದೆ.

ಐತಿಹಾಸಿಕ ಹಿನ್ನೆಲೆ
ಶ್ರೀಕ್ಷೇತ್ರದ ಬಗ್ಗೆ ರಾಮಾಯಣದಲ್ಲೇ ಉಲ್ಲೇಖವಿದೆ. ರಾವಣನು ಕೈಲಾಸದಿಂದ ತಂದ ಆತ್ಮಲಿಂಗವನ್ನು ಗಣಪತಿಯು ಗೋಕರ್ಣದಲ್ಲಿ ಪ್ರತಿಷ್ಠಾಪಿಸಿದ್ದು ಸಕಲರಿಗೂ ತಿಳಿದ ವಿಷಯ. ಮುಂದೆ ಇತಿಹಾಸ ಕಾಲದಲ್ಲಿಯೂ ಕದಂಬ ಮಯೂರವರ್ಮ ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಮಹಾಬಲೇಶ್ವರ ದೇವರ ಧಾರ್ಮಿಕ ಕೈಂಕರ್ಯಕ್ಕೆ ವ್ಯವಸ್ಥೆ ಮಾಡಿದ್ದು ಇದೆ. ಅನಂತರ ವಿವಿಧ ರಾಜಮನೆತನಗಳು ಇಲ್ಲಿಗೆ ನಡೆದುಕೊಂಡಿದ್ದು, ವಿಜಯನಗರದ ಬುಕ್ಕನು ದೇಗುಲದ ಪೂಜೆಗೆ ಸೌಕರ್ಯ ಒದಗಿಸಿದ್ದು, ಬ್ರಿಟೀಷ್ ಅಕಾರಿಗಳೂ ದತ್ತಿ ನೀಡಿ ಪೋಷಿಸಿದ್ದು, ಸರಕಾರವೇ ಮುದ್ರಿಸಿದ ಕರ್ನಾಟಕ ಗೆಜೆಟಿಯರ್‌ನಲ್ಲಿ ದಾಖಲಾಗಿದೆ.

ಸಾಮಾಜಿಕ ದೃಷ್ಟಿ
ಗೋಕರ್ಣ ಹಸ್ತಾಂತರದಿಂದ ಅನೇಕ ವಿಧವಾದ ಸಾಮಾಜಿಕ ಕೋಲಾಹಲವಾಗಿದೆ. ಸರಕಾರದ ನಿರ್ಣಯ ಅನುಸರಿಸಿ ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜ್ಯದ ೩೬ ದೇವಾಲಯದ ಆಡಳಿತವನ್ನು ತಮಗೆ ಬಿಟ್ಟು ಕೊಡುವಂತೆ ಕೇಳಿದ್ದಾರೆ. ಗದಗ-ಡಂಬಳದ ಶ್ರೀ ತೋಂಟದಾರ್ಯ ಮಠದ ಸ್ವಾಮಿಗಳು ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ದೇಗುಲವನ್ನು ತಮಗೆ ಕೊಡುವಂತೆ ವಾದ ಮಂಡಿಸಿದ್ದಾರೆ. ಹೀಗೆ ಹಲವು ಮಠಾಶರು ಇನ್ನೂ ಅನೇಕ ದೇವಸ್ಥಾನಗಳನ್ನು ತಮಗೆ ವಹಿಸುವಂತೆ ಕೇಳಲು ಮುಂದಾಗಿದ್ದಾರೆ. ಇದರಿಂದಾಗಿ ವಿವಿಧ ಜಾತಿ, ಸಮುದಾಯದವರು ಗೋಕರ್ಣ ಹಸ್ತಾಂತರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಸಾಮಾಜಿಕ ವೈಮನಸ್ಯ ಸೃಷ್ಟಿಯಾಗಿದೆ.

ಕೂಡಲೇ ಆಗಬೇಕಾದ್ದು...
ದಿನ ಕಳೆದಂತೆ ಈ ಗೊಂದಲ ಜಟಿಲವಾಗುವ ಲಕ್ಷಣ ಕಾಣುತ್ತಿದೆ. ಹೀಗಾಗಿ ಗೋಕರ್ಣ ಹಸ್ತಾಂತರಕ್ಕೆ ಸರಕಾರ ಹೊರಡಿಸಿರುವ ಅಸೂಚನೆಯನ್ನು ತಕ್ಷಣ ಮರು ಪರಿಶೀಲನೆಗೆ ಒಳಪಡಿಸಬೇಕು. ಸ್ವರ್ಣವಲ್ಲೀ ಮಠದ ಮಹಾಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ನಿರ್ಣಯಗಳನ್ನು ಆಧರಿಸಿ ಸರಕಾರವೇ ಇದಕ್ಕೊಂದು ಪರಿಹಾರ ಸೂತ್ರ ಕಂಡು ಹಡಿಯಬೇಕು. ಯತಿಗಳ ನಡುವೆ ಸಮನ್ವಯ, ಸಂಧಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಸ್ಪಷ್ಟೀಕರಣ
ಸ್ವರ್ಣವಲ್ಲೀ ಮಹಾಸಭೆಯಲ್ಲಿ ಗೋಕರ್ಣ ಹಸ್ತಾಂತರ ವಿರುದ್ಧ ನಾವು ಹೋರಾಡುವುದಾಗಿ ಹೇಳಿರುವುದಾಗಿ ಪತ್ರಿಕೆಗಳಲ್ಲಿ ತಪ್ಪು ಅಭಿಪ್ರಾಯ ಬಂದಿದೆ. ಹಾಗಂತ ನಾವು ಹೇಳಿಲ್ಲ. ಈ ಸಂಬಂಧವಾಗಿ ಈಗಾಗಲೇ ಹೋರಾಟ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲಿ ನಮ್ಮ ಪಾತ್ರವಿಲ್ಲ. ಆದರೆ, ಅದನ್ನು ತಡೆಯುವುದು ಕಷ್ಟ ಎಂಬ ಆತಂಕ ವ್ಯಕ್ತ ಪಡಿಸಲಾಗಿದೆ.

- ಪತ್ರೆಮನೆ
ganeshhalkani@gmail.com

ಅಷ್ಟರಿಗಿಂತ ಕನಿಷ್ಠರಾಗುವುದು ಬೇಡ...!

ಮಠ ಮಂದಿರಗಳ ಸಮರಕ್ಕೊಂದು ಉತ್ತಮ ಉದಾಹರಣೆ ಕೊಡಿ... ಹಾಗೊಂದು ಪ್ರಶ್ನೆ ಕೇಳಿದರೆ ಚಿಕ್ಕ ಮಗುವೂ ಉಡುಪಿಯ ಅಷ್ಟ ಮಠದತ್ತ ಕೈ ಮಾಡಿ ತೋರಿಸುತ್ತದೆ!


ಸಮಾಜದಲ್ಲಿರುವ ಎರಡು ಹವ್ಯಕ ಮಠಗಳು ಅಂತಹದ್ದೊಂದು ಕದನಕ್ಕೆ ಸಜ್ಜಾಗಿ ನಿಂತಿವೆಯಾ ? ಗೋಕರ್ಣ ವಿವಾದವೆಂಬುದು ಕದನಕ್ಕೊಂದು ನೆವವಾಯಿತಾ ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿಗಳು ಬಹಿರಂಗ ಕಹಳೆ ಊದಿರುವುದೇ ಇಂತಹದ್ದೊಂದು ಆಂತಕಕ್ಕೆ ಕಾರಣ ಎನ್ನಬಹುದು.


‘ಹಸ್ತಾಂತರಕ್ಕೆ ಹವ್ಯಕ ಮಠದಿಂದಲೇ ವಿರೋಧ’ ಕೆಲ ದಿನಗಳ ಹಿಂದೆ ದಿನಪತ್ರಿಕೆಗಳಲ್ಲಿ ರಾರಾಜಿಸಿದ ಸಾಲಿದು. ರೋಗಿ ಬಯಸಿದ್ದು ಅದೇ, ವೈದ್ಯ ಕೊಟ್ಟಿದ್ದೂ ಅದೇ ಎಂಬಂತಾಯಿತು ಕೆಲ ಸಮುದಾಯದವರಿಗೆ, ಸ್ವರ್ಣವಲ್ಲಿ ಶ್ರೀಗಳ ಹೇಳಿಕೆ. ಹಾಗಂತ ಅವರು ತಮ್ಮ ವಿರೋಧಕ್ಕೆ ಇಂತಹದ್ದೇ ಎನ್ನಬಹುದಾದ ನಿರ್ದಿಷ್ಟ ಕಾರಣ ಕೊಡಲಿಲ್ಲ! ಗೋಕರ್ಣ ಉತ್ತರ ಕನ್ನಡ ಜಿಲ್ಲೆಯದ್ದು. ಅಲ್ಲಿ ರಾಮಚಂದ್ರಾಪುರ ಮಠದ ಸವಾರಿ ಬರಬಾರದೆಂಬ ಉದ್ದೇಶವಿರಬಹುದು! ಅದೇನೆ ಇರಬಹುದು, ಈಗ ಗೋಕರ್ಣ ವಿಚಾರಕ್ಕೆ ಪ್ರವೇಶಿಸಿರುವ ಸ್ವರ್ಣವಲ್ಲಿ ಶ್ರೀಗಳು, ಕಾಲುಬುಡದಲ್ಲೇ ಇರುವ ಗೋಕರ್ಣದಲ್ಲಿ ನಡೆಯಬಾರದ ಕೃತ್ಯಗಳು ನಡೆಯುತ್ತಾ ಇದ್ದರೂ ಇಷ್ಟು ದಿನಗಳ ಕಾಲ ನೋಡಿಕೊಂಡು ಸುಮ್ಮನಿದ್ದರೇಕೆ ? ಇದ್ದಕ್ಕಿದ್ದ ಹಾಗೆ ಅವರಿಗೆ ಗೋಕರ್ಣದ ಕುರಿತು ಕಾಳಜಿ ಮೂಡಿರುವುದೇಕೆ? ಎಂಬೆಲ್ಲ ಪ್ರಶ್ನೆಗಳು ಅವರ ಹೇಳಿಕೆಯ ಹಿಂದೆಯೇ ಹಬ್ಬಿದೆ.


ಪೀಠಾಪತಿಗಳು ಒಂದು ವಿವಾದವನ್ನು ಪ್ರತಿಷ್ಠೆಯ ವಿಚಾರವನ್ನಾಗಿ ತೆಗೆದುಕೊಂಡು ಗುದ್ದಾಟ ಮಾಡುತ್ತಾರೆ ಎಂಬುದು ನಿಜಕ್ಕೂ ಖೇದಕರ ವಿಚಾರ. ಎರಡು ಕೈ ಸೇರಿದಾಗ ಮಾತ್ರ ಚಪ್ಪಾಳೆಯ ಸದ್ದು ಕೇಳುವುದು ಅನ್ನುತ್ತಾರೆ ಬಲ್ಲವರು. ಅಥವಾ ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಧೋರಣೆಯಡಿಯಲ್ಲಾದರೂ ಸರಿ, ಇಲ್ಲಿಯವರೆಗೂ ಒಂದು ಘನತೆ, ಗಂಭೀರತೆಯನ್ನು ಕಾಯ್ದುಕೊಂಡು ಬಂದಿರುವ ರಾಮಚಂದ್ರಾಪುರ ಮಠ ಸ್ವರ್ಣವಲ್ಲಿಯವರ ಮಾತಿಗೆ ಕಿವಿಗೊಡದೇ ಈ ವಿವಾದವನ್ನು ಇಲ್ಲಿಗೆ ಮುಗಿಸಲಿ. ಅಭಿವೃದ್ಧಿಯ ಮಂತ್ರವನ್ನು ಮಾತ್ರ ಪಠಿಸಲಿ. ಹವ್ಯಕ ಸಮುದಾಯದ ಕಲಹ ಬಸ್ ನಿಲ್ದಾಣದಲ್ಲಿ ಜನ ಆಡಿಕೊಳ್ಳುವ ವಸ್ತುವಾಗದಿರಲಿ ಎಂಬುದು ನನ್ನ ಕಳಕಳಿಯ ವಿನಂತಿ.

-ವಿನಾಯಕ
payaniga2005@gmail.com

Monday, September 22, 2008

ಗೋಕರ್ಣ ನೋಂದಣಿ : ದುರುದ್ದೇಶಪೂರ್ವಕ ವದಂತಿ


ಆತ್ಮಿಯ ಶಾಸ್ತ್ರೀ ಅವರೇ ಮತ್ತು ಓದುಗರೇ,
ಶ್ರೀ ಸಂಸ್ಥಾನ ಗೋಕರ್ಣ ದೇವಾಲಯದ ನೋಂದಣಿ ಶ್ರೀ ಮಹಾಬಲೇಶ್ವರ ದೇವರ ಹೆಸರಿನಲ್ಲೇ ಇದ್ದು, ಯಾರಿಗೂ ಬದಲಾಗಿಲ್ಲ ಎಂದು ಶ್ರೀರಾಮಚಂದ್ರಾಪುರಮಠ ಸ್ಪಷ್ಟಪಡಿಸಿದೆ ಎಂದು ನಿನ್ನೆಯ ಬಹಳಷ್ಟು ಪತ್ರಿಕೆಯಲ್ಲಿ ಬಂದಿದೆ ಅದನ್ನು ತಾವು ಗಮನಿಸಿಲ್ಲ ಎಂದು ಕಾಣಿಸುತ್ತದೆ. ದೇವಾಲಯ ಹಾಗೂ ಅದರ ಆಸ್ತಿ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಹೆಸರಿಗೆ ಬದಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಸತ್ಯಕ್ಕೆ ದೂರವಾದದ್ದು, ದೇಗುಲ ಮೊದಲಿನಂತೆಯೇ ‘ಶ್ರೀ ಮಹಾಬಲೇಶ್ವರ ದೇವ’ ಎಂಬ ಹೆಸರಿನಲ್ಲಿಯೇ ಇದೆ.
 
ದೇವಾಲಯದ ನಿರ್ವಹಣೆ, ಕೊನೆಯ ಟ್ರಸ್ಟಿ ವಿ.ಡಿ. ದೀಕ್ಷಿತರ ಹೆಸರಿನಲ್ಲಿತ್ತು. ಅವರು ತೀರಿಕೊಂಡ ಅನಂತರವೂ ಅದು ಬದಲಾಗಿರಲಿಲ್ಲ. ಇದೀಗ ಮರು ಅಧಿಸೂಚನೆಯ ಮೂಲಕ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿ.ಡಿ. ದೀಕ್ಷಿತರ ಹೆಸರಿದ್ದ ಜಾಗದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಹೆಸರು ಸಹಜವಾಗಿ ಬದಲಾಗಿದೆ ಎಂದು ಮಾಧ್ಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
 
ಹಸ್ತಾಂತರವನ್ನು ವಿರೋಧಿಸುತ್ತಿರುವ ಕೆಲ ಶಕ್ತಿಗಳು ಕೆಲವೊದ್ದು ಪತ್ರಿಕೆಗಳ ಜೊತೆ ಸೇರಿ ದುರುದ್ದೇಶಪೂರ್ವಕ ಇಂಥ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಮೂಲಕ ಗೋಕರ್ಣದಲ್ಲಿ ಅನಪೇಕ್ಷಿತ ಬೆಳವಣಿಗೆಗಳಾಗುತ್ತಿವೆ ಎಂಬಂರ್ಥದಲ್ಲಿ ವದಂತಿಗಳ ವೈಭವೀಕರಣದಲ್ಲಿ ತೊಡಗಿವೆ. ಸ್ವಾರ್ಥ ಸಾಧನೆಗಾಗಿ ವಿಘ್ನ ಸಂತೋಷಿಗಳು ನಡೆಸುತ್ತಿರುವ ಇಂಥ ಕೃತ್ಯಕ್ಕೆ ಕಿವಿಗೊಡಬಾರದು.
 
ಈಗಾಗಲೇ ಕ್ಷೇತ್ರದ ಪುನರುತ್ಥಾನಕ್ಕೆ ಸಹಸ್ರಾರು ಮಂದಿ ಮಹಾಸಂಕಲ್ಪ ಕೈಗೊಂಡಿದ್ದು, ದೇವಾಲಯದ ಸಮಗ್ರ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಇಂಥ ಸನ್ನಿವೇಶದಲ್ಲಿ ಹತಾಶ ಮನಸ್ಸುಗಳು ಅನಗತ್ಯ ವದಂತಿಗಳ ಮೂಲಕ ಅಭಿವೃದ್ಧಿಗೆ ಅಡ್ಡಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದು, ಯಾವುದೇ ಬೆದರಿಕೆಗಳಿಗೆ ಮಣಿಯದೇ ಕ್ಷೇತ್ರದಲ್ಲಿ ವ್ಯವಸ್ಥೆಯೊಂದರ ಸ್ಥಾಪನೆಗೆ ಶ್ರೀಮಠ ಬದ್ಧವಾಗಿರುತ್ತದೆ ಮತ್ತು ನಾಡಿನ ಜನರ ನಿರೀಕ್ಷೆಗಳು ಖಂಡಿತಾ ಈಡೇರುತ್ತವೆ ಎಂದು ನನ್ನ ಸ್ಪಟ್ಟ ಭಾವನೆ.
ಧನ್ಯವಾದಗಳೊಂದಿಗೆ,
ನವೀನ್ ಹೆಗಡೆ.

ಗೋಕರ್ಣ ಸತ್ಯಾಸತ್ಯತೆ ತಿಳಿಯಲಿ

ಎಚ್. ಆನಂದರಾಮ ಶಾಸ್ತ್ರೀಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಸಂಪೂರ್ಣ ಸ್ಥಿರಾಸ್ತಿಯನ್ನು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರಸ್ವಾಮಿಯವರು ಗೋಕರ್ಣ ಗ್ರಾಮದ ಎಂ.ಆರ್.ನಂಬರ್ 69/2008-09, ತಾ.2/9/08ರಂತೆ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆಂದು ವರದಿಯಾಗಿದೆ. ನಾನಿಲ್ಲಿ ಯಾರ ಪಕ್ಷಪಾತಿಯೂ ಅಲ್ಲ. ಧರ್ಮಕ್ಷೇತ್ರಗಳು ಮನುಷ್ಯನ ಜೀವನದಲ್ಲಿ ನಂಬಿಕೆಯ ಒಂದು ಆಧಾರ.ಆದ್ದರಿಂದ, ನಮ್ಮೆಲ್ಲ ಧರ್ಮಕ್ಷೇತ್ರಗಳೂ ಸಕಲ ಜನಕೋಟಿಯ ಬಾಳಿನ ನಂಬಿಕೆಯನ್ನು ಸದಾಕಾಲ ಕಾಪಾಡುತ್ತಲಿರಬೇಕೆಂಬ ಸದುದ್ದೇಶದಿಂದ ಕೆಲ ಪ್ರಶ್ನೆಗಳನ್ನು ಇಲ್ಲಿ ಮಂಡಿಸಿ ಆರೋಗ್ಯಕರ ಚರ್ಚೆಯನ್ನು ಬಯಸುತ್ತೇನೆ. ಈ ವಿಷಯದಲ್ಲಿ ನಾನು ಯಾವುದೇ ಪೂರ್ವಗ್ರಹವನ್ನಾಗಲೀ, ಸ್ವಾರ್ಥವನ್ನಾಗಲೀ ಹೊಂದಿಲ್ಲ. ವಾಸ್ತವದ ಹಿನ್ನೆಲೆಯಲ್ಲಿ ಭವಿಷ್ಯತ್ತಿನ ಚಿಂತನೆ ಮಾತ್ರ ನನ್ನ ಉದ್ದೇಶ. ನನಗೂ ಎಲ್ಲರಂತೆ ಈ ಪ್ರಕರಣದ ಹಿನ್ನೆಲೆಯಲ್ಲಿ ತಿಳಿವಿನ ಅವಶ್ಯಕತೆ ಇದೆ. ಆದ್ದರಿಂದ ಈ ಚರ್ಚೆಯಲ್ಲಿ ನಾನು ಓದುಗನಾಗಿ ಎಲ್ಲರಂತೆ ನನ್ನ ತಿಳಿವನ್ನು ಹೆಚ್ಚಿಸಿಕೊಳ್ಳಲಿಚ್ಛಿಸುತ್ತೇನೆ. ಬಲ್ಲವರು ದಯೆಯಿಟ್ಟು ಸ್ಪಂದಿಸಿ.ರಾಮಚಂದ್ರಾಪುರ ಮಠದ ಸಮೀಪವೇ ನನ್ನ ತಾಯಿಯ ಮತ್ತು ನನ್ನ ಹೆಂಡತಿಯ ಊರು-ಮನೆಗಳನ್ನು ಹೊಂದಿರುವ ನನಗೆ ಆ ಮಠದ ಬಗ್ಗೆ ತಕ್ಕಮಟ್ಟಿಗೆ ಗೊತ್ತು; ಅದೇವೇಳೆ ಗೋಕರ್ಣ ಕ್ಷೇತ್ರದ ಬಗ್ಗೆಯು ಒಂದಷ್ಟು ಗೊತ್ತು ಮತ್ತು ನಮ್ಮ ರಾಜಕಾರಣಿಗಳ ಬಗ್ಗೆ ಸಾಕಷ್ಟು ಗೊತ್ತು. ಇಷ್ಟು ಮಾತ್ರ ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.ಮಹಾಬಲೇಶ್ವರ ಮಂದಿರದ ಸ್ಥಿರಾಸ್ತಿ ವರ್ಗಾವಣೆ ನಿಜವೆ? ಸುಳ್ಳಾದರೆ ನೋಂದಣಿ ಕ್ರಮಸಂಖ್ಯೆ ವಿವರ ಸಹಿತ ಸುದ್ದಿಯೇಕೆ ಹೊರಟಿತು?ದೇವಸ್ಥಾನ ಹಸ್ತಾಂತರವಂತೂ ನಿಜವಷ್ಟೆ. ಈ ರೀತಿಯ ಹಸ್ತಾಂತರ ಮತ್ತು ವರ್ಗಾವಣೆ ಕಾಲಕ್ರಮದಲ್ಲಿ ಇತರ ಧರ್ಮಕ್ಷೇತ್ರಗಳಿಗೂ ವಿಸ್ತರಿಸಲ್ಪಡುವುದು ನಿರೀಕ್ಷಿತ ತಾನೆ? ಇಲ್ಲದಿದ್ದಲ್ಲಿ ಇತರರು ಹಕ್ಕೊತ್ತಾಯ ಮಾಡುವುದಿಲ್ಲವೆ? ಈಗಾಗಲೇ ಅಂಥ ಹಕ್ಕೊತ್ತಾಯಗಳು ನಡೆಯುತ್ತಿವೆಯಷ್ಟೆ. ಪರಿಣಾಮ, ಧಾರ್ಮಿಕ ಅಶಾಂತಿಯ ವಾತಾವರಣ ಸೃಷ್ಟಿಯಾಗುವುದಿಲ್ಲವೆ?ಒಂದೊಂದಾಗಿ ದೇವಸ್ಥಾನ, ಕ್ಷೇತ್ರಗಳನ್ನು ಮಠಗಳಿಗೆ ಧಾರೆಯೆರೆದು ಕೊಡತೊಡಗಿದರೆ ಆಗ ಧಾರ್ಮಿಕ ವಲಯದಲ್ಲಿ ಗುಂಪುಗಾರಿಕೆ, ಪಂಗಡಗಳು, ಸ್ವಾರ್ಥ, ಮೇಲಾಟ ಮೊದಲಾದ ಅನಾರೋಗ್ಯಕರ ಸನ್ನಿವೇಶಗಳು ಉದ್ಭವಿಸುವುದಿಲ್ಲವೆ? ಧರ್ಮದ ಒಟ್ಟು ಬಲಕ್ಕೆ ಇದರಿಂದ ಧಕ್ಕೆಯಲ್ಲವೆ?ಹಾಗೆಂದು, ತನ್ನ ಅಧೀನದ ದೇವಾಲಯಗಳನ್ನೆಲ್ಲ ಸರ್ಕಾರವೇ, ಅಂದರೆ, ಮುಜರಾಯಿ ಇಲಾಖೆಯೇ ನೋಡಿಕೊಳ್ಳುವುದೆಂದರೆ ಅದಕ್ಕಿಂತ ಅಧ್ವಾನ ಇನ್ನೊಂದುಂಟೆ? ಗೋಕರ್ಣದ ಇದುವರೆಗಿನ ಸರ್ಕಾರಿ ಅನಾಡಳಿತವೇ ಇದಕ್ಕೆ ಸಾಕ್ಷಿಯಲ್ಲವೆ?ಜೊತೆಗೆ, ಹಿಂದು ಭಕ್ತರು ತಮ್ಮ ದೇವರಿಗೆಂದು ನೀಡಿದ ಕಾಣಿಕೆ ಹಣವನ್ನು (ಭಾಗಶಃವಾದರೂ ಮತ್ತು ಪರೋಕ್ಷವಾಗಿಯದರೂ) ಹಜ್ ಯಾತ್ರೆಗೆ ಸರ್ಕಾರ ನೀಡಲಿಕ್ಕಾಗಿ ಹಿಂದು ದೇವಾಲಯಗಳು ಸರ್ಕಾರದ ವಶದಲ್ಲಿರಬೇಕೆ?ಹಾಗಾದರೆ ಜಾತ್ಯತೀತ ರಾಷ್ಟ್ರವಾದ ಈ ದೇಶದಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಮೊದಲಾದವರ ಧರ್ಮಕ್ಷೇತ್ರಗಳ ಧಾರ್ಮಿಕ ಆಡಳಿತವನ್ನೂ ಸರ್ಕಾರ ಏಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬಾರದು?ಇಷ್ಟಕ್ಕೂ ದೇವಮಂದಿರಗಳನ್ನು ತಾನು ವಶಪಡಿಸಿಕೊಳ್ಳಲು ಸರ್ಕಾರ ಯಾರು? ಅದಕ್ಕೇನು ಹಕ್ಕು? ಯಾವ ಧರ್ಮಗ್ರಂಥ ಅಂಥ ಹಕ್ಕು ನೀಡಿದೆ? ಅಂಥ ಯೋಗ್ಯತೆಯಾದರೂ ನಮ್ಮ ಸರ್ಕಾರಗಳಿಗಿದೆಯೆ?ಸರ್ಕಾರಕ್ಕೂ ಬೇಡ, ಮಠಗಳಿಗೂ ಬೇಡ ಅಂತಾದರೆ ಮತ್ತೆ ಯಾರು ನೋಡಿಕೊಳ್ಳುವುದುಚಿತ?ಟ್ರಸ್ಟ್? ಸಾರ್ವಜನಿಕ ಸಮಿತಿ? ಸದ್ಯದ ಪದ್ಧತಿ? ಅಥವಾ ಯಥಾಸ್ಥಿತಿ? ಅಥವಾ......? ಆರೋಗ್ಯಪೂರ್ಣ ಚರ್ಚೆ ನಡೆಯಲಿ.---

Sunday, September 21, 2008

ಸ್ವಾಮೀಜಿಯವರನ್ನು ಜರೆಯುವುದು ಯೋಗ್ಯವಲ್ಲ

ನಮ್ಮ ದೇಶದಲ್ಲಿ ಹಿಂದೂಗಳೇ ಹಿಂದೂಗಳ ಕಾಲು ಜಗ್ಗುತ್ತಾರೆ. ಹಾಗೆಯೇ ನಮ್ಮ ಹವ್ಯಕ ಸಮಾಜದಲ್ಲಿಯೂ ಸಮಾಜ ಬಾಂಧವರೇ (ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬಂತೆ) ನಮ್ಮವರ ಕಾಲೆಳೆಯುತ್ತಾರೆ. ಅದಕ್ಕೇ ಈ ಸಮಾಜ ನಿರೀಕ್ಷಿತ ಪ್ರಗತಿ ಸಾಧಿಸಲಿಕ್ಕಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ, ಪ್ರಜಾವಾಣಿಯಲ್ಲಿ ಪ್ರಕಟವಾದ ರಾಮಚಂದ್ರ ಹೆಗಡೆ (ಹುಬ್ಬಳ್ಳಿ)ಯವರ ಪತ್ರ. (ಸ್ವಾಮೀಜಿಯ ಕ್ರಮ ಸರಿಯೇ? - ತಾ. ೨.೯.೦೮). "ಹವ್ಯಕ... ಹವ್ಯಕ..." ಎಂದು ಹಾವು ಮೆಟ್ಟಿದವರಂತೆ ಜರೆಯುವ ಮೊದಲು ಇವರು ಬೇರೆ ಸಮಾಜದವರ (ಉದಾ. ಉಡುಪಿ ಅಷ್ಟಮಠಗಳು : ಇಲ್ಲಿ ಬೇರೆ ಬ್ರಾಹ್ಮಣರಿಗೆ ಆಡಳಿತಾತ್ಮಕ ಅವಕಾಶವಿದೆಯೇ?... ಅಥವಾ ಲಿಂಗಾಯಿತ ಮಠ, ಇತ್ಯಾದಿ) ಮಠಗಳನ್ನು ನೋಡಲಿ. ಎಲ್ಲರೂ ತಮ್ಮ ತಮ್ಮ ಸಮಾಜ ಸಂಘಟನೆಗಳನ್ನು ಮಾಡಿಕೊಳ್ಳುತ್ತಿರುವಾಗ, ಹವ್ಯಕರು ಸಂಘಟಿತರಾಗುವುದು ಮಾತ್ರ ಅಪರಾಧವೇ? ನಾವು ಮಾತ್ರ ’ಜಾತ್ಯತೀತ’ ಎಂದು ಹಣೆಪಟ್ಟಿ ಹಚ್ಚಿಕೊಂಡು ಚೂರುಚೂರಾಗಿ ಹೋಗಬೇಕೇ? ಸಂಘಟಿತರಾಗಲು ಮನಸ್ಸಿಲ್ಲದಿದ್ದರೆ, ಕನಿಷ್ಠ ತಮ್ಮದೇ ಮನೆಯನ್ನು ಒಡೆಯುವ, ಒಡೆಸುವ ಕೆಲಸವನ್ನಾದರೂ ಮಾಡಬಾರದು.

ರಾಘವೇಶ್ವರಭಾರತೀ ಸ್ವಾಮಿಗಳು ಅತ್ಯಂತ ಸರಳ ಹೃದಯವಂತ, ಹಿಂದೂಧರ್ಮ ಕಳಕಳಿಯುಳ್ಳವರಾಗಿದ್ದು, ತಮ್ಮ ಪರಿಮಿತಿಯಲ್ಲಿ ಗೋ ಸಂರಕ್ಷಣೆ, ಶಿಕ್ಷಣವನ್ನೂ (ನಮ್ಮ ಮಕ್ಕಳಿಗೆ) ಸಂಯೋಜಿಸುತ್ತಿದ್ದಾರೆ. ಅಂತಹ ಗೌರವಾನ್ವಿತರನ್ನು ಲಾಭಬಡುಕ, ಖಳನಾಯಕನಂತೆ ಬಿಂಬಿಸುತ್ತಿರುವುದು ಸುಸಂಸ್ಕೃತರು ಒಪ್ಪತಕ್ಕ ವಿಚಾರವಲ್ಲ.

ಗೋಕರ್ಣದ ಅಭಿವೃದ್ಧಿಗೆ ಮಠದ ಆದಾಯ ಮೂಲಗಳನ್ನೂ ವಿನಿಯೋಗಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ. ಗೋಕರ್ಣದಲ್ಲಿ ಗೊಂದಲ ಎಬ್ಬಿಸುತ್ತಿರುವವರು ಪಟ್ಟಭದ್ರ (ಹವ್ಯಕರೇ) ಹಿತಾಸಕ್ತಿಯವರು ಎಂಬುದನ್ನು ನಾವು ಗಮನಿಸಬೇಕು. ಇವರಿಗೆ ಸಾರ್ವತ್ರಿಕ ಬೆಂಬಲ ಇಲ್ಲ. ಇನ್ನು, ಧರ್ಮಸ್ಥಳಕ್ಕೆ ಕೊಡಿ... ಬೇರೆಯವರಿಗೆ ಕೊಡಿ... ಎಂಬುದು ವಿತಂಡವಾದವಾಗುತ್ತದೆ. ಗೋಕರ್ಣದಲ್ಲಿ ರಾ.ಮಠದ (ಐತಿಹಾಸಿಕ) ಪುರಾವೆಯೂ ಸಿಕ್ಕಿದೆ. ಎಲ್ಲವನ್ನೂ ಇಲ್ಲಿ ವಿವರಿಸಲು ಆಗುವುದಿಲ್ಲ.

ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ
೯೪೪೮೮೬೯೦೯೧೨

Saturday, September 20, 2008

ಸ್ವರ್ಣವಲ್ಲಿ ಶ್ರೀಗಳೇ, ಇದು ಹೀಗೇಕೆ ?

ಎಂದಿನಂತೆಯೀ ಕೆಲ ಮಾದ್ಯಮಗಳು ಗೋಕರ್ಣ ದೇಗುಲ ಹಸ್ತಾಂತರ ವಿಚಾರವನ್ನು ‘ವಿವಾದ’ ಮಾಡಿವೆ. ಸಮಾಜಕ್ಕೆ ಸನ್ಮಾರ್ಗ ತೋರಬೇಕಿದ್ದ ಧರ್ಮ ಪೀಠಗಳು ಇದರ ಕಿಡಿ ಹೊತ್ತಿಸಿದವು. ತಮ್ಮ ಕೀಳು ಅಭಿರುಚಿಯ ಅಭಿವ್ಯಕ್ತಿಗೆ ಈ ವಿಷಯವನ್ನು ಕೆಲ ಮಾದ್ಯಮದ ಮಂದಿ ಅದರಲ್ಲೂ ಎಲೆಕ್ಟ್ರಾನಿಕ್ಸ್ ಮೀಡಿಯಾದವರು ಆಹಾರ ಮಾಡಿಕೊಂಡ ಪರಿ ನೋಡಿದಾಗ ನಮ್ಮ ಭಾರತೀಯ ಮಾಧ್ಯಮ
ಎತ್ತ ಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಬಗೆಗಿನ ಚರ್ಚೆ ಬೇರೆಯದೇ ಆದ ಅಧ್ಯಾಯ. ಅದು ಒತ್ತೊಟ್ಟಿಗಿರಲಿ.

ಅಸಲಿ ವಿಷಯ ನಮ್ಮ ಪೀಠಾಧಿಪತಿಗಳು ಎನಿಸಿಕೊಂಡವರ ವರ್ತನೆಯ ಬಗೆಗಿನದ್ದು. ಅತ್ಯಂತ ಸಂಕೀರ್ಣ ಸನ್ನಿವೇಶದಲ್ಲಿ ನಾವಿದನ್ನು ಚರ್ಚಿಸಬೇಕಿದೆ. ಒಂದೆಡೆ ಭಾರತೀಯತೆಯ ಮೇಲಿನ ದಾಳಿ ‘ಮತಾಂತರ’ದ ರೂಪದಲ್ಲಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಸಹ ಇದನ್ನು ತಂತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳಲು ಹವಣಿಸುತ್ತಿವೆ. ಇಂಥ ಸಂದರ್ಭದಲ್ಲಿ ನಮ್ಮ ಪೀಠಾಧೀಶರಲ್ಲಿ ಕಾಣಬೇಕಿದ್ದ ಒಗ್ಗಟ್ಟು (ಮೊದಲು, ಯಾವತ್ತು ಇತ್ತು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು) ಗೋಕರ್ಣದಂಥ ವಿಷಯದಲ್ಲೇ ಮರೆಯಾಗಿರುವುದು ಖಂಡಿತಾ ಅನಪೇಕ್ಷಣೀಯ. ಗೊಕರ್ಣ ದೇಗುಲ ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರವಾಗುತ್ತಿದ್ದಂತೆಯೇ ನಾಡಿನ ಎಲ್ಲ ಮಠಾಧೀಶರು ಇದನ್ನು ಸ್ವಾಗತಿಸುತ್ತಾರೆಂದೇ ಜನತೆ ಭಾವಿಸಿತ್ತು. ಶಂಕರಾಚಾರ್ಯರಂತೂ ಎಲ್ಲರೂ ಶ್ರೀ ರಾಘವೇಶ್ವರರ ಜತೆಗೆ ನಿಲ್ಲುತ್ತಾರೆಂದು ನಿರೀಕ್ಷಿಸಲಾಗಿತ್ತು. ಇನ್ನು ಹವ್ಯಕ ಪೀಠಗಳಲ್ಲೇ ಒಂದಾದ ಸ್ವರ್ಣವಲ್ಲಿ ಶ್ರೀಗಳಂತೂ ಇದನ್ನು ವಿರೋಧಿಸುತ್ತಾರೆಂಬುದನ್ನು ಕನಸು ಮನಸಿನಲ್ಲೂ ಎಣಿಸಿರಲಿಕ್ಕಿಲ್ಲ.
ದುರಂತವೆಂದರೆ ಆದದ್ದೇ ಬೇರೆ. ಕೆಲವರಷ್ಟೇ ಸ್ವಾಗತಿಸಿದರು. ಬಹುತೇಕ ಪೀಠಾಧಿಪತಿಗಳು ಪ್ರತಿಕ್ರಿಯೆಯ ಗೋಜಿಗೇ ಹೋಗಲಿಲ್ಲ. ಧರ್ಮಾಧಿಕಾರಿಗಳೆನಿಸಿಕೊಂಡವರು ಮುಗುಮ್ಮಾಗುಳಿದರು. ಇನ್ನು ಕೆಲವರು ಆರಂಭದಲ್ಲಿ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರೂ ನಂತರದ ದಿನಗಳಲ್ಲಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಕೆಲ ಪೀಠಾಧಿಪತಿಗಳಂತೂ ತೊಡೆತಟ್ಟಿ ನಿಂತಂತೆ ಮಾತನಾಡುತ್ತಿದ್ದಾರೆ !

ಇದು ಹೀಗೇಕೆ ? ವಿರೋಧಕ್ಕೆ ಕಾರಣವಾದರೂ ಏನು ? ದ್ವೇಶವೇ ? ಮತ್ಸರವೇ ? ಅಸೂಯೆಯೇ ? ಬಲ ಪ್ರದರ್ಶನವೇ ? ಪೈಪೋಟಿಯೇ ? ....ಅದೂ ಎಲ್ಲ ರಾಗ ದ್ವೇಷಗಳಿಂದ ಅತೀತರಾದ ಸಂನ್ಯಾಸಿಗಳಲ್ಲಿ ! ವಿಪರ್‍ಯಾಸವೆಂದರೆ ಇದೇ ಏನು ?
ಗೋಕರ್ಣದಲ್ಲಿ ಒಂದಷ್ಟು ಅರ್ಚಕರು, ಸ್ಥಳೀಯ ಬೆರಳೆಣಿಕೆಯ ಮಂದಿ, ಹಿಂದೆ ಆಡಳಿತದಲ್ಲಿದ್ದವರ ಕಡೆಯವರು ವಿರೋಧಿಸುವುದಕ್ಕೆ ಅವರದ್ದೇ ಆದ ಕಾರಣಗಳಿರಬಹುದು. ಗೋಕರ್ಣದ ಇಂದಿನ ಪರಿಸ್ಥಿತಿ ಬದಲಾಗುವುದು ಅಂಥವರಿಗೆ ಬೇಕಿಲ್ಲ. ಅನಾಯಾಸವಾಗಿ ಕೂಡಿ ಬರುತ್ತಿದ್ದ ಹಲವು ಲಾಭಗಳನ್ನು ಕಳೆದುಕೊಳ್ಳಲು ಅವರು ಸಿದ್ಧರಿಲ್ಲ. ಆದರೆ ಧರ್ಮಧಿಪತಿಗಳೆನಿಸಿಕೊಂಡವರ ವಿರೋಧ ಏಕೆ ?

ವಿರೋಧಿಗಳೆಂದು ಗುರಿತಿಸಿಕೊಂಡ ಪೂಜ್ಯರನ್ನೆಲ್ಲ ಒಂದು ಪ್ರಶ್ನೆ ಕೇಳಬಹುದಾದರೆ ಇಂಥದ್ದೇ ಒಂದು ಕೆಚ್ಚನ್ನು ಗೋಕರ್ಣದ ಅಭಿವೃದ್ಧಿಯ ಬಗೆಗೆ ಈವರೆಗೆ ತೋರಿದ್ದಿದೆಯೇ ? ಯಾಕೆ ಅದು ಅಗತ್ಯವೆಂದು ಅನ್ನಿಸಲಿಲ್ಲವೇ ? ಎಲ್ಲರಿಗೆ ಸೇರಬೇಕಾದ ದೇಗುಲ ಯಾವುದೇ ಒಂದು ಮಠಕ್ಕೆ ಹಸ್ತಾಂತಗೊಳ್ಳುತ್ತಿದೆ ಎಂದು ಆಕ್ಷೇಪವೆತ್ತುತ್ತಿರುವ ತಾವು, ಈವರೆಗೆ ದುಂದುಕೋರರ, ದಂಧೆಕೋರರ ಕೈಗೆ ಗೋಕರ್ಣ ಕ್ಷಣಕ್ಷಣವೂ ಹಸ್ತಾಂತರಗೊಳ್ಳುತ್ತಿದ್ದಾಗ ಅದನ್ನು ತಡೆದು ರಕ್ಷಿಸಬೇಕೆಂದು ಅನ್ನಿಸಿಯೇ ಇರಲಿಲ್ಲವೇ ? ಎಲ್ಲಕ್ಕಿಂಥ ಹೆಚ್ಚಾಗಿ ಹಿಂದು ಸಮಾಜವನ್ನು, ಸಮುದಾಯವನ್ನು ಸಂಘಟಿಸಿ ಭಾರತೀಯ ಧರ್ಮ ರಕ್ಷಣೆ ಮಾಡಬೇಕಿದ್ದ ಉದ್ದೇಶಕ್ಕೆ ನಿಯುಕ್ತಿಗೊಂಡಿರುವ ಸಂತರು ತಾವೇ ಸ್ವತಃ ಲೌಖಿಕರಂತೆ ಸಂಘರ್ಷಕ್ಕಿಳಿದರೆ ಅದೇ ವಿಘಟನೆಗೆ ಮೂಲ ಕಾರಣವಾದೀತು ಎಂಬ ಕನಿಷ್ಠ ವಿಚಾರವೂ ಅವರಲ್ಲಿ ಸುಳಿದು ಹೋಗದುಳಿಯಿತೇ ?

ಹಿಂದೆಲ್ಲ ಮಠ ಮಾನ್ಯಗಳಿಗೆ ಬೇರೆ ಬೇರೆ ಸರಕಾರಗಳ ಅವಧಿಯಲ್ಲಿ ಬೇರೆ ಬೇರೆ ರೀತಿಯ ‘ಹಸ್ತಾಂತರ’ಗಳಾಗಿರುವ ಉದಾಹರಣೆಗಳನ್ನು ಮತ್ತೆ ನೆನೆಪಿಸಿಕೊಳ್ಳುವ ಅಗತ್ಯವಿದೆಯೇ ? ಆಗೆಲ್ಲ ಇದೇ ತೆರನಾದ ವಿರೋಧ ಉದ್ಭವಿಸಿತ್ತೇ ? ಇಲ್ಲವೆಂದಾದರೆ ಈಗ ಮಾತ್ರ ಏಕೆ ? ಮಠಾಧಿಪತಿಗಳಲ್ಲೂ ಮತ್ಸರವೇ ?

ಅಷ್ಟಕ್ಕೂ ಹಾಗಾಗಿ ಬಿಡುತ್ತದೆ, ಹೀಗಾಗಿ ಬಿಡುತ್ತದೆ ಎಂದೆಲ್ಲ ಕಾಲ್ಪನಿಕ ಆತಂಕ ಮುಂದೊಡ್ಡುವ ಅಗತ್ಯವಾದರೂ ಏಕೆ ? ಮತಾಂತರದ ದೌರ್ಜನ್ಯ ನಿರಂತರ ಎನ್ನವಂತಾಗಿರುವಾಗ, ಅಲ್ಪಸಂಖ್ಯಾತರನೆನ್ನುವವರನ್ನು ‘ಬಂಧುಗಳು’ ಎಂಬ ಸೋಗಲಾಡಿ ಸಂಬಂಧ ಸೂಚಕ ಪದದಲ್ಲೇ ಗುರುತಿಸಬೇಕು; ಅದಿಲ್ಲದಿದ್ದರೆ ಅಪಚಾರ ಎಂಬ ಮನೋಭಾವವನ್ನು ನಿರಂತರ ಬಿತ್ತಿ ರಾಜಕೀಯ ಲಾಭದ ಫಸಲು ಪಡೆಯಲು ಹೊರಟಿರುವಾಗ ಒಮ್ಮೆಯೂ ಒಂದಾಗಿ ನಿಂತು ಸನಾತನ ಧರ್ಮವನ್ನು ರಕ್ಷಿಸಲು ‘ಬೀದಿಗಿಳಿಯಬೇಕು’ ಎಂಬ ಭಾವ ಮೂಡಿಲ್ಲವೇ ?

ಸ್ವಾಮೀಜಿಗಳೇ, ಸಮಾಜದಲ್ಲಿ ತಮ್ಮಗಳ ಬಗ್ಗೆ ಎಂಥ ಭಾವನೆಗಳು ಮೂಡಿವೆ ಎಂಬುದನ್ನು ತುಸು ಪೀಠದಿಂದ ಕೆಲಗಿಳಿದು ಬಂದು ನೋಡಿ. ನಿಮ್ಮ ಸುತ್ತಲೂ ಕೋಟೆ ಕಟ್ಟಿಕೊಂಡು ಸ್ವಲಾಭಕ್ಕಾಗಿ ನಿಂತಿರುವವರನ್ನು ಪಕ್ಕಕ್ಕೆ ಸರಿಸಿ ಇಣುಕಿ. ಬಹುಶಃ ವಿದ್ಯಾವಂತರೆನಿಸಿಕೊಂಡವರು ಇಂದಿನ ಮಠಗಳ ಬಗ್ಗೆ ಮಾತನಾಡಲೂ ಹೇಸುತ್ತಿದ್ದಾರೆ. ನಿರೋದ್ಯೋಗಿಗಳ ಅಂತಿಮ ತಾಣ ಮಠಗಳು ಎಂಬುದು ನಿತ್ಯ ಭಾವವಾಗಿದೆ. ಸುಲಭದಲ್ಲಿ, ಅನಾಯಾಸವಾಗಿ ಹಣಮಾಡುವ ಮಾರ್ಗ ಎಂದರೆ ಪೀಠಾರೋಹಣ ಮಾಡುವುದು ಎಂಬ ವ್ಯಂಗ್ಯ ಸಮಾಜದಲ್ಲಿ ಮನೆ ಮಾಡಿದೆ. ಕಾವಿಯ ಮರೆಯಲ್ಲಿ ಎಲ್ಲ ಸುಖಗಳನ್ನೂ ಅನುಭವಿಸುವ, ಹಾಗಿದ್ದೂ ಸಂಪನ್ನತೆಯ ಮುಖವಾಡ ತೊಟ್ಟು ಮೆರೆಯುವ ಏಕೈಕ ಸೌಲಭ್ಯವಿದ್ದರೆ ಅದು ಸಂನ್ಯಾಸದಲ್ಲಿ ಮಾತ್ರ ಎಂಬ ಕುಹಕ ಬಹಿರಂಗವಾಗಿಯೇ ಕೇಳಿಬರುತ್ತಿದೆ.

ಇಷ್ಟಾದರೂ, ಇಂಥ ಕ್ಷುಲ್ಲಕ ವಿಚಾರಗಳನ್ನು ಬದಿಗಿಟ್ಟು ಮೌಲ್ಯಗಳ ಪುನರ್‌ಸ್ಥಾಪನೆಯತ್ತ ಹೊರಳಬೇಕೆನಿಸದಿರುವುದು ಖಂಡಿತಾ ಧರ್ಮದ ಅವನತಿಯ ಭಾಗ. ಇಂದು ಚಲನ ಚಿತ್ರಗಳಲ್ಲಿ ಬಹುಶಃ ಪೊಲೀಸ್ ಪೇದೆ, ರಾಜಕಾರಣಿಯ ಬಳಿಕ ಅತಿ ಹೆಚ್ಚು ವ್ಯಂಗ್ಯಕ್ಕೆ ಒಳಗಾಗುತ್ತಿದ್ದರೆ ಅದು ಮಠಾಧೀಶರೇ. ಅಂಥ ಸನ್ನಿವೇಶದಲ್ಲಿ ಸ್ವರ್ಣವಳ್ಳಿ ಶ್ರೀಗಳಂಥ ವಿವೇಚನಾಶೀಲ ಸಂನ್ಯಾಸಿಯೊಬ್ಬರು ಗೋಕರ್ಣ ವಿಚಾರದಲ್ಲಿ ವಿರೋಧಿಗಳ ಸಮಾವೇಶ ನಡೆಸುತ್ತಾರೆ. ಅಂಥ ಸಭೆಯಲ್ಲಿ ತಮ್ಮಂಥದೇ ಇನ್ನೊಂದು ಉನ್ನತ ಸ್ಥಾನದಲ್ಲಿರುವವರನ್ನು ‘ಕಲಿ’ ಎಂದು ಸಂಬೋಧಿಸುತ್ತಾರೆ ಎಂದರೆ.... ಪೂಜ್ಯ ಗುರುಗಳೇ , ಅತ್ಯಂತ ವಿನೀತನಾಗಿ ತಮ್ಮಲ್ಲಿ ಪ್ರಶ್ನಿಸುತ್ತೇನೆ ತಮ್ಮಂಥವರಿಗೆ ಇದು ಉಚಿತವೇ ? ಪರಿಸರ ಉಳಿವಿಗೆ ಬೃಹತ್ ಹೋರಾಟ ಸಂಘಟಿಸಿ ವಿಭಿನ್ನ ಛಾಪೊಂದನ್ನು ಮೂಡಿಸಿದ್ದ, ಆ ಮೂಲಕ ಚಿಂತನಶೀಲ ಪೀಠಾಧಿಪತಿಗಳು ಎಂದೇ ಮಾನ್ಯರಾಗಿದ್ದ ತಾವು ಈ ಸಮಾಜಕ್ಕೆ ನೀಡಲು ಹೊರಟ ಸಂದೇಶವಾದರೂ ಏನು ? ಭಗವದ್ಗೀತೆಯ ಬಗೆಗಿನ ಜಾಗೃತಿಗೆ ಬಹುದೊಡ್ಡ ಆಂದೋಲನವನ್ನೇ ಹುಟ್ಟುಹಾಕಿ ಹೊರಟಿರುವ ತಾವು ಗೀತಾ ಸಾರವನ್ನೂ ಈ ಮೂಲಕ ಉಪೇಕ್ಷಿಸಿದಿರೇ ?

ಯಾರೋ ಶ್ರಿ ಪ್ರಸನ್ನನಾಥರಂಥವರು ಹುಡುಗಾಟಿಕೆಗೆ ಹೊರಟರೆ ಅದು ದೊಡ್ಡದಲ್ಲ. ಏಕೆಂದರೆ ಪರಮಪೂಜ್ಯ ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕೈ ಮೀರಿ ಅವರು ಅಂಥ ದುಸ್ಸಾಹಸಗಳನ್ನು ಮಾಡುತ್ತಿದ್ದಾರೆ ಎಂಬ ಮನೋಭಾವ ಈಗಾಗಲೇ ನೆಲೆಯೂರಿದೆ. ಅದಿಲ್ಲದಿದ್ದರೆ ಶ್ರೀ ರಾಘವೇಶ್ವರರ ಜತೆಗಿನ ಭೇಟಿಯ ಭಾವಚಿತ್ರ ಪತ್ರಿಕೆಗಳಲ್ಲಿ ಅಚ್ಚಾಗಿದೆ. ಅವರು ಹಸ್ತಾಂತರವನ್ನು ಸ್ವಾಗತಿಸಿದ ಸುದ್ದಿ ಜತೆಯಲ್ಲೇ ಪ್ರಕಟಗೊಂಡಿದೆ. ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಪುನರುತ್ಥಾನ ಸಂಕಲ್ಪ ಸಭೆಯ ಆಹ್ವಾನಿತರ ಪಟ್ಟಿಯಲ್ಲಿ ಅವರ ಹೆಸರೂ ಮುದ್ರಣಗೊಂಡಿತ್ತು. ಹೀಗಿದ್ದೂ, ಅವರದೇ ಶಾಖಾ ಮಠದ ಸ್ವಾಮೀಜಿಯಾಗಿ ಪ್ರಸನ್ನನಾಥರು ಸಾಮಾನ್ಯರನ್ನೂ ನಾಚಿಸುವ ರೀತಿಯಲ್ಲಿ ಗೋಕರ್ಣ ವಿಷಯದಲ್ಲಿ ಕದನಕುತೂಹಲಿಯಾಗಿ ವರ್ತಿಸುತ್ತಿದ್ದಾರೆಂದರೆ ಅದು ಪರಿಸ್ಥಿತಿಯ ವಿಕೋಪ. ಆದರೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಆ ಮಟ್ಟಕ್ಕೆ ಇಳಿಯುತ್ತಾರೆಂದರೆ ಇದಕ್ಕೇನರ್ಥ ?

ಇಂಥ ಬೆಳವಣಿಗೆಗಳಾಗುತ್ತಿರುವವರೆಗೆ ಮತಾಂತರಿಗಳ ಕಾರ್ಯ ಅಬಾಧಿತ, ರಾಜಕೀಯ ಕುತಂತ್ರಿಗಳ ನೆಮ್ಮದಿ ಸುಸ್ಥಿರ.....ಸ್ವಾಭಿಮಾನ ಮಾತ್ರ ನಮ್ಮ ಪಾಲಿಗೆ ಭಂಗ...ಅಲ್ಲವೇ ?
-ಶ್ರೀವತ್ಸ
(ಶ್ರೀವತ್ಸ ಅವರ ಅಭಿಪ್ರಾಯ )
ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು
media4cow@gmail.com


Website Hit Counters
Web Counters

Friday, September 19, 2008

ಆಚಾರವಿಲ್ಲದ ನಾಲಿಗೆ..ನಿನ್ನ

ಆಚಾರವಿಲ್ಲದ ನಾಲಿಗೆ..ನಿನ್ನ

ಗೋಕರ್ಣದಲ್ಲಿ ಸಪ್ಟೆಂಬರ್ ಹದಿನೈದರಂದು ಸರಿ ಸುಮಾರು ಮೂವತ್ತು ಸಾವಿರ ಜನರು ಸೇರಿದ್ದ ಮಹಾಸಂಕಲ್ಪ ಕಾರ್ಯಕ್ರಮ ನಡೆಯಿತು. ದೂರದರ್ಶನದ ಚಂದನ ವಾಹಿನಿ ನೇರಪ್ರಸಾರ ಮಾಡಿದ್ದರೆ ಸುವರ್ಣ ಸಹಿತ ಈಟಿವಿ ಮೊದಲಾದವುಗಳು ತಮ್ಮ ವಾರ್ತೆಯಲ್ಲಿ ಪ್ರಸಾರ ಮಾಡಿದವು. ಆದರೆ ರಾಮಚಂದ್ರಾಪುರ ಮಠದ ವಿರುದ್ದ ಹಾದಿಯಲ್ಲಿ ಹೋಗುವವರು ಮಾತನಾಡಿದರೂ ಅವರ ಮುಖಕ್ಕೆ ಮೈಕ್ ಹಿಡಿದು " ಅಲ್ಲಾ ನೀವು ವಿರೋಧ ಮಾಡ್ತೀರಾ ಅಂತ" ಎಂದು ತಮಗೆ ಬೇಕಾದ ರೀತಿಯಲ್ಲಿ ಉತ್ತರ ಹೊರಡಿಸಲು ಯತ್ನಿಸುವ ಉತ್ತಮ ಸಮಾಜಕ್ಕಾಗಿ ಎಂಬ ಸ್ಲೋಗನ್ ನೊಡನೆ ಮೂಡಿಬರುವ ಟಿವಿ ನೈನ್ ಚಾನಲ್ ಗೆ ಇದೊಂದು ಕಾರ್ಯಕ್ರಮ ಅಂತ ಅನ್ನಿಸದೇ ಇದ್ದುದು ಪರಮಾಶ್ಚರ್ಯ. ಅದೇ ದಿನ ಸ್ವರ್ಣವಲ್ಲಿಯಲ್ಲಿ ಕಾಂಜಿಪೀಂಜಿಗಳಿಗೂ ಮೈಕ್ ತಗುಲಿಸುತ್ತಿದ್ದ ಪರಿ ಆಶ್ಚ್ರಯ ಹುಟ್ಟಿಸುವಂತಿತ್ತು. ಪೇಜಾವರ ಶ್ರೀಗಳ ಬಳಿ ಫೋನ್ ಮಾಡಿ ಅವರಿಂದ ಹೇಗಾದರೂ ಮಾಡಿ ನಾನು ರಾಮಚಂದ್ರಾ ಪುರಮಠದ ವಿರೋಧಿ ಅಂತ ಹೇಳಿಸಬೇಕೆಂಬ ರಂ,ಭಾ ನ ಹರ ಸಾಹಸ ನೋಡಿದರೆ ಇದು ಮಾಹಿತಿ ನೀಡುವ ಚಾನಲ್ಲೋ ಅಥವಾ ಕಡ್ದಿಗೀರುವ ಚಾನಲ್ಲೋ ಎಂಬುದನ್ನ ಯಾವುದೇ ಅನುಮಾನ ಇಲ್ಲದೇ ಕ್ಷಣಮಾತ್ರದಲ್ಲಿ ಹೇಳಿಬಿಡಬಹುದಿತ್ತು. ಆಶ್ಚ್ರರ್ಯವಾಗುವುದು ಇಲ್ಲೆ.

ನಮ್ಮ ದೇಶದಲ್ಲಿ ಯಾವುದೇ ಕೆಲಸ ಹಿಂದುವಿನಿಂದ ನಡೆದರೂ ಅದಕ್ಕೆ ಪ್ರಭಲವಾಗಿ ಅರ್ಥವಿಲ್ಲದೆ ವಿರೋದ ವ್ಯಕ್ತಪಡಿಸುವ ಒಂದು ಗುಂಪು ಇದೆ. ಅವರು ಅಪ್ಪಿತಪ್ಪಿಯೂ ಬಾಂಬ್ ಬ್ಲಾಸ್ಟ್ ಮಾಡಿ ಮಾರಣ ಹೋಮ ಮಾಡಿರುವವರ ಕುರಿತು ಮಾತನಾಡುವುದಿಲ್ಲ. ವಕ್ಫ್ ಮಂಡಳಿ ಕುರಿತು ಮಾತನಾಡುವುದಿಲ್ಲ. ಮತಾಂತರದ ಬಗ್ಗೆ ಚಕಾರ ವೆತ್ತುವುದಿಲ್ಲ. ಅವರೆಲ್ಲಾ ಸಾಚಾಗಳು ಹಿಂದೂ ಮಠಾಧೀಶರು ಅನ್ಯಾಯ ಮಾಡುವ ಜನ ಎಂದು ಲಂಕೇಶ್ ಪತ್ರಿಕೆಯಿಂದ ಪ್ರಾರಂಭ ಗೊಂಡು ಹಾಯ್ ಬೆಂಗಳೂರು ಸೇರಿದಂತೆ ಟಿ.ವಿ. ನೈನ್ ವರೆಗೂ ಮುಂದುವರೆಯುತ್ತದೆ. ಹಾಯ್ ನ ಬೆಳೆಗೆರೆ ರಾಮಚಂದ್ರಾ ಪುರಮಠದ ಶ್ರೀಗಳಿಗೆ ಬಳಸಿದ ಬಾಷೆ ಮುಲ್ಲಾಗಳಿಗೆ ಬಳಸಲಾಗುತ್ತದಯೇ?. ಆದರೆ ಅದೇ ಹಿಂದೂಗಳಿಗೆ ಇವರದ್ದು ಕೀಳುಮಟ್ಟದ ಭಾಷೆ. ಅರ್ತವಿಲ್ಲದ ಕುತರ್ಕ. ಮಾದ್ಯಮಗಳೆಂದರೆ ನಿಷ್ಪಕ್ಷಪಾತವಾಗಿರಬೇಕು. ಧೈರ್ಯದ ಮಾತನ್ನಾಡಿದರೆ ಎಲ್ಲರಿಗೂ ಮಾತನ್ನಾಡಬೇಕು. ಸಾಧು ಸಜ್ಜನರು ಸಿಕ್ಕಿದರೆ ರಂಭಾ ,ರಬೆ, ಗೌಲಂ, ಅಶ್ರೀ, ಮುಂತಾದ ನೂರಾರು ಜನರು ತಮ್ಮ ಲೇಖನಿ ಹರಿಬಿಡುತ್ತಾರೆ. ಉತ್ತರನ ಪೌರುಷ ಒಲೆಯ ಮುಂದೆ ಎಂದಂತೆ ಇವರ ಕತೆ. ಇದೇಕೆ ಹೀಗೆ ಎಂದೇ ಅರ್ಥವಾಗದು. ಬಹುಶಃ ಇವರಿಗೆಲ್ಲಾ ಹಿಂದೂ ಗಳಿಂದ ಪೇಮೆಂಟ್ ಹೋಗದೇನೋ ಹಾಗಾಗಿ ಹೀಗೆ ಅಂತ ಒಂದೇ ಒಂದು ಉತ್ತರ ಸಿಗಬಹುದು.
-ರಘು

Ramesh said...

ನನಗೂ ಅದೇ ಅನಿಸಿದ್ದು.

ಸ್ವರ್ಣವಲ್ಲಿ ಸ್ವಾಮಿಗಳು ಗೋಕರ್ಣ ಹಸ್ತಾಂತರವನ್ನು ವಿರೋಧಿಸುತ್ತಿರುವುದ್ದೇಕೆ ಎಂದು.ಗೋಕರ್ಣ ದೇವಸ್ಥಾನವೇನಾದ್ರು ಅವರ ಮಠಕ್ಕೆ ಸೇರಿತ್ತಾ? ಹೋಗಲಿ ಸ್ವರ್ಣವಲ್ಲಿಯ ಮಠವೇನಾದರೂ ಗೋಕರ್ಣದಲ್ಲಿ ಇದೆಯಾ?ರಾಜಕಾರಣದಲ್ಲಾದರೇ ವಿರೋದ ಪಕ್ಷದವರು ಆಡಳಿತ ಪಕ್ಷವನ್ನು ವಿನಾಕಾರಣ ವಿರೋದಿಸುವುದನ್ನು ನಾವಿಂದು ಕಾಣುತ್ತೇವೆ. ಇದು ಮಠಗಳಿಗೂ ಹರಡಿದೆಯೇ? ರಾಮಚಂದ್ರಾಪುರ ಮಠ ಎಂದೂ ಸ್ವರ್ಣವಲ್ಲಿ ಮಠವನ್ನು ವಿರೋದಿಸಿದ್ದು ನಾವ್ಯಾರು ಕೇಳಿಲ್ಲ. ಹಾಗಿದ್ದರೂ ಸ್ವರ್ಣವಲ್ಲಿಯ ಗುರುಗಳಿಗೆ ರಾಮಚಂದ್ರಾಪುರ ಮಠದ ಮೇಲೆ ವಿರೋದವೇಕೆ?

ಇತ್ತೀಚಿನ ದಿನಗಳಲ್ಲಿ ರಾಮಚಂದ್ರಾಪುರ ಮಠ ಬಹಳ ಪ್ರಸಿದ್ದಿಗೆ ಬರುತ್ತಾಯಿದೆ. ಅದನ್ನು ಇವರಿಗೆ ಸಹಿಸಲಾಗದೇ ವಿರೋದ ವ್ಯಕ್ತಪಡಿಸಿರಬಹುದೇ? ಒಂದು ವ್ಯಕ್ತಿ/ಸಂಸ್ಥೆ ಮೇಲೆ ಬಂದ ಹಾಗೆ ಅದರ ಏಳ್ಗೆ ಸಹಿಸದವರು ಅದನ್ನು ಎಳೆಯುವುದನ್ನು ನಾವು ಇಂದಿನ ಸಮಾಜದಲ್ಲಿ ಹೆಚ್ಚಾಗಿ ಕಾಣುತ್ತೇವೆ. ನಾವು ಅವರು ಏರಿದ ಎತ್ತರಕ್ಕೆ ಏರೋಣ ಅಂತ ಅವರ ಮನಸ್ಸಲ್ಲಿ ಇರೋದಿಲ್ಲ. ಅವರು ನಾವಿರುವ ಜಾಗಕ್ಕೆ ಬರಲಿ ಅನ್ನೋ ಮನಸ್ಥಿತಿ. ಸ್ವರ್ಣವಲ್ಲಿ ಗುರುಗಳುೀ ಈ ರೀತಿ ಯಾಕೆ ಯೋಚಿಸುತ್ತಿದ್ದಾರೆ. ಅವರನ್ನು ಯಾರೋ ದಿಕ್ಕು ತಪ್ಪಿಸುತ್ತಿದ್ದಾರಾ?

ಒಂದು ಉತ್ತಮ ಸ್ಪರ್ದೆಯಿದ್ದರೆ ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಆದರೆ ಅದು ಇಲ್ಲದಿದ್ದರೆ ಸಮಾಜ ಹಾಳಾಗುತ್ತದೆ. ಒಂದು ಸಮಾಜದ ಉನ್ನತ ಸ್ಥಾನದಲ್ಲಿರುವ ಮಠಾದೀಶರೇ ಹೀಗೆ ಮಾಡಿದರೆ ಅವರನ್ನು ನಂಬಿರುವ ಜನಗಳು ಹೇಗೆ ಮಾಡಿಯಾರು. ಅದರಿಂದ ಸಮಾಜ ಉದ್ದಾರವಾಗುತ್ತದೆಯೇ?

ನನ್ನ ಗೊಂದಲಗಳಿಗೆ ಯಾರಾದರು ಉತ್ತರಿಸುವಿರಾ? ನಾನು ಹೇಳಿದ್ದು ನನ್ನ ವಯಕ್ತಿಕ ಅಭಿಪ್ರಾಯ. ತಪ್ಪಿದ್ದರೆ ತಿದ್ದಿ. ಆದರೆ ತಿದ್ದುವ ಮುನ್ನ ನಿಮ್ಮಲ್ಲಿ ಸರಿಯಾದ ಸಾಕ್ಷ್ಯ ಅಥವಾ ಮಾಹಿತಿಯಿದೆಯಾ ಎಂದು ಒಮ್ಮೆ ನೋಡಿಕೊಳ್ಳಿ.

Wednesday, September 17, 2008

ಹೀಗೊಂದು ಸಲಹೆ
ಗೆ
Media4cow@gmail.com

ಶ್ರೀ ಮಠದಿಂದ ಹೀಗೊಂದು ಬ್ಲಾಗ್ ತೆರೆದು ಅದರಲ್ಲಿ ಸಾರ್ವಜನಿಕರಿಗೆ ಬರೆಯಲು ಆಹ್ವಾನಿಸಿದ್ದು ತುಂಬಾ ಸಂತೋಷದ ವಿಚಾರ.
ಅದೇ ರೀತಿ ಬರಹಗಳು ಶ್ರೀ ಮಠದ ಪರ ಅಥವಾ ವಿರೋದ ಎಂದು ಪರಿಗಣಿಸದೆ ಕತ್ತರಿ ಪ್ರಯೋಗ ಮಾಡದೆ ಯಥಾವತ್ತಾಗಿ ಪ್ರಕಟಿಸುವ ಕೆಲಸವೂ ಆಗಬೇಕಿದೆ. ಈ ವೇದಿಕೆ ಕೇವಲ ಶ್ರೀ ಮಠದ ಪರವಾದ ಮುಖವಾಣಿ ಆಗಬಾರದು. ಹೇಳುವವರು ಎಲ್ಲಾ ಹೇಳಲಿ ಅದಕ್ಕೆ ಮುಕ್ತ ಅವಕಾಶ ಒದಗಿಸಿಕೊಡಿ. ಅವಾಚ್ಯ ಶಭ್ದಗಳು ಇದ್ದರೆ ಮಾತ್ರಾ ಕತ್ತರಿಸಿ. ಮಠದ ಆಡಳಿತಕ್ಕೆ ಗೊತ್ತಿಲ್ಲದಂತಯೇ ತಪ್ಪುಗಳು ಸಂಭವಿಸಬಹುದು. ಅಂತಹ ತಪ್ಪುಗಳು ಅಥವಾ ಸಲಹೆಗಳು ಮಠದ ಹೊರಗೆನಿಂತು ನೋಡುವ ಭಕ್ತರಿಗೆ ಸುಲಭವಾಗಿ ಗೋಚರಿಸುತ್ತವೆ. ಅವುಗಳನ್ನು ಸರಿಪಡಿಸಲು ಸಹಾಯವಾಗುತ್ತದೆ. ಸಲಹೆಕಾರರು ಸಾವಿರಾರು ಇರುತ್ತಾರೆ ಆದೇರೀತಿ ನೈಜ ಕಳಕಳಿಯ ಸಲಹೆಕಾರರೂ ಇರುತ್ತಾರೆ . ಅವರಿಗೆ ಶ್ರೀಗಳನ್ನು ಭೇಟಿ ಮಾಡಲು ಅವಕಾಶ ಅನುಕೂಲ ಇರುವುದಿಲ್ಲ. ಅಂತಹ ಯೋಗ್ಯ ಸಲಹಾಕಾರರಿಗೆ ಇದು ಉತ್ತಮ ವೇದಿಕೆಯಾಗಲಿ.

ಸಲಹೆ ಸಾಧು ಎಂದಾದಲ್ಲಿ ಬ್ಲಾಗ್ ನ ಮುದ್ರಿಸಿ ಗುರುಗಳ ಗಮನಕ್ಕೆ ತರುವ ಕೆಲಸ ಈ ಬ್ಲಾಗ್ ನ ನಿರ್ವಾಹಕರಿಂದ ಆಗಬೇಕಿದೆ ಎಂಬುದು ನನ್ನ ಮೊದಲ ಸಲಹೆ.

ಗೋಕರ್ಣ ಶ್ರೀ ಮಠದ ಆಡಳಿತಕ್ಕೆ ಬಂದಿರುವುದು ಸರಿ. ಆದರೆ ಅಲ್ಲಿ ಬದಲಾವಣೆ ಬಹಳಷ್ಟು ಆಗಬೇಕಿದೆ. ನಾನು ಗುಜರಾತ್ ನ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಭಕ್ತರು ತನ್ನಿಂದ ತಾನೆ ಪಾಲಿಸುವ ಒಂದು ಅಘೋಷಿತ ನಿಯಮವನು ಗಮನಿಸಿದೆ. ಅದು ದೇವಸ್ಥಾನದ ಆವರಣದೊಳಕ್ಕೆ ಪ್ರವೇಶಿಸಿದಾಕ್ಷಣ ಭಕ್ತರು ಮಾತನಾಡುವುದನ್ನು ನಿಲ್ಲಿಸುತ್ತಾರೆ. ಸಾವಿರಾರು ಭಕ್ತರು ನಾನು ಹೋಗಿದ್ದ ದಿವಸ ಇದ್ದರು. ಆದರೆ ಮಾತು ಗಲಾಟೆ ಮಾತ್ರಾ ಇರಲಿಲ್ಲ. ನಂತರ ಅಲ್ಲಿ ವಿಚಾರಿಸಿದಾಗ ತಿಳಿದದ್ದು. ಆರಂಭದಲ್ಲಿ ಒಳಬರುವ ಭಕ್ತರಿಗೆ ಇಲ್ಲಿ ಮಾತನಾಡಬಾರದು ಎಂದರಂತೆ. ಈಗ ಭಕ್ತರು ತನ್ನಿಂದ ತಾನೆ ಅದನ್ನು ಪಾಲಿಸುತ್ತಾ ಬಂದಿದ್ದಾರೆ. ಅದೇ ರೀತಿ ಗೋಕರ್ಣದ ದೇವಸ್ಥಾನದ ಆವರಣದೊಳಗೆ ಪ್ರವೇಶಿಸಿದ ತಕ್ಷಣ ಮೌನ ಅಂತ ನಿಯಮ ಆರಂಭದಲ್ಲಿ ಮಾಡಿದರೆ ಅದು ದೈವತ್ವದ ಅನುಭೂತಿಗೆ ಉತ್ತಮ ಮಾರ್ಗ ಆಗಬಲ್ಲದು.

ಇಸ್ಕಾನ್ ನ ದೇವಸ್ಥಾನಕ್ಕೆ ಭೇಟಿಕೊಟ್ಟವರಿಗೆ ಗೊತ್ತು. ಅಲ್ಲಿ ಎಲ್ಲಾಕಡೆ ಸ್ಪೀಕರ್ರಿನಲ್ಲಿ ಹರೇ ರಾಮ ಹರೆ ಕೃಷ್ಣ ಎಂಬ ಹಾಡನ್ನು ಕೇಳುವಂತೆ ಸಂಯೋಜಿಸಿದ್ದಾರೆ. ಅದು ನಮ್ಮ ಮನಸ್ಸು ಬೇರೆಡೆ ಹೋಗದಂತೆ ತಡೆಯುವಲ್ಲಿ ಒಳ್ಳೆಯ ಮಾರ್ಗ. ಗೋಕರ್ಣದ ದೇವಸ್ಥಾನದಲ್ಲಿ ಸಣ್ಣದಾಗಿ ವೇದಘೋಷ ಯಾವಾಗಲೂ ಭಕ್ತರಿಗೆ ಕೇಳುವಂತೆ ಮಾಡಿದರೆ ಅದ್ಬುತ ಅನುಭವ ಭಕ್ತರಿಗೆ ನೀಡಬಲ್ಲದು.

ಸಧ್ಯಕ್ಕೆ ಈ ನನ್ನ ಮೂರು ಸಲಹೆಗಳ ಪ್ರಿಂಟ್ ಔಟ್ ಶ್ರೀಗಳ ಆವಾಗಾಹನೆಗೆ ನಿರ್ವಾಹಕರು ತಲುಪಿಸುತ್ತಾರೆ ಎಂಬ ಭರವಸೆಯೊಂದಿಗೆ ಈ ನನ್ನ ಪತ್ರ ಮುಗಿಸುತ್ತೇನೆ

-ಸುಮಂತ (krsumantha@gmail.com)

ಬಿಂಬ ಪ್ರತಿಬಿಂಬದಿಂದ





ಶ್ರೀರಾಮಚಂದ್ರಾಪುರ ಮಠ v/s ಸ್ವರ್ಣವಲ್ಲಿ ಮಠ

ಮತ್ತೆ ಆರಂಭವಾಗಿದೆ ಕದನ..
ಪ್ರಾಬಲ್ಯಕ್ಕೆ ಜಿದ್ದಜಿದ್ದಿ
ಬುದ್ದಿ ಹೇಳಿದ ಪೇಜಾವರರು
ಗೋಕರ್ಣ ಅಭಿವ್ರದ್ದಿಗೆ ರಾಮಚಂದ್ರಾಪುರ ಮಠ ಶ್ರೀಗಳ ಸಾರಥ್ಯ
ವಿರೋಧಿಗಳ ಗುಂಪಿಗೆ ಸ್ವರ್ಣವಲ್ಲಿ ಶ್ರೀ ಸಾರಥ್ಯ

ಕೊನೆಗೂ ಬೂದಿ ಮುಚ್ಚಿದ ಕೆಂಡ ಸ್ಪೋಟಗೊಂಡಿದೆ. ಗೋಕರ್ಣದಲ್ಲಿ ಸೆ.೧೫ ರಂದು ಅಲ್ಲಿಯ ಮಹಾಬಲೇಶ್ವರ ದೇವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಪುನ: ಬಂದಿರುವುದಕ್ಕೆ "ಮಹಾಸಂಕಲ್ಪ " ಸಭೆ ನಡೆಸುತ್ತಿದ್ದಾರೆ, ಹವ್ಯಕ ಸಮಾಜದ ಮತ್ತೊಂದು ಮಠವಾದ ಸ್ವರ್ಣವಲ್ಲಿಯಲ್ಲಿ ಇದನ್ನು ವಿರೋಧಿಸುವ ಸಭೆ ನಡೆಯುತ್ತಿತ್ತು!! ಗೋಕರ್ಣ ದೇವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂತರದ ನಂತರ ಉಂಟಾಗಿರುವ ವಾದ-ವಿವಾದದ ನಂತರ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಮೊದಲಬಾರಿಗೆ ಗೊಕರ್ಣ ಕ್ಕೆ ಭೇಟಿ ನೀಡಿ ಅದರ ಪುನರುತ್ಥಾನಕ್ಕೆ ಕಂಕಣ ಬದ್ಧರಾಗಿ "ಮಹಾಸಂಕಲ್ಪ" ಕ್ಕೆ ಕರೆ ನೀಡಿದ್ದರೆ ಹವ್ಯಕ ಸಮಾಜದ ಮತ್ತೊಂದು ಮಠ (ಸ್ವರ್ಣವಲ್ಲಿ ಮಠ) ಇದನ್ನು ಸ್ವಾಗತಿಸುವುದನ್ನು ಬಿಟ್ಟು ಸರಕಾರ ಗೋಕರ್ಣವನ್ನು ಹಿಂಪಡೆಯಬೇಕು ಎನ್ನುವ ವಿರೊಧಿಗಳನ್ನು ಕರೆಸಿಕೊಂಡು ಸಭೆ ನಡೆಸಿ ಇಷ್ಟುದಿನ ಮನಸ್ಸಿನೊಳಗಿದ್ದ ನೋವನ್ನು ಹೋರಹಾಕಿತು.

ಶ್ರೀರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಲಿ ಮಠದ ನಡುವೆ ಪ್ರಾಬಲ್ಯಕ್ಕೆ ಜಿದ್ದಜಿದ್ದಿ ಮೊದಲಿನಿಂದಲೂ ಇದ್ದರೂ ಶ್ರೀರಾಮಚಂದ್ರಾಪುರ ಮಠದಷ್ಟು ಪ್ರಾಭಲ್ಯವನ್ನು ಧಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶ್ರೀರಾಮಚಂದ್ರಾಪುರಮಠ ಈಗಿನ ಶ್ರೀಗಳ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ದಿ ಕಂಡರೆ ಸ್ವರ್ಣವಲ್ಲಿ ಮಠದಲ್ಲಿ ಶ್ರೀಗಳನ್ನು ಮತ್ತು ಮಠವನ್ನು ನಿಯಂತ್ರಿಸುವ "ಭಟ್ಟಂಗಿಗಳು " ಮಾತ್ರ ಅಭಿವೃದ್ಧಿಯಾದರು.
ಹವ್ಯಕ ಜನಾಂಗದ ೨ ಕಣ್ಣುಗಳು:
ರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಳಿ ಮಠಗಳು ಹವ್ಯಕ ಸಮಾಜದ ಎರಡು ಕಣ್ಣು ಗಳು ಇದ್ದಂತೆ. ಇವು ಹವ್ಯಕ ಸಮಾಜದ ಮಠಗಳು. ರಾಮಚಂದ್ರಾಪುರ ಮಠ ಹವ್ಯಕ ಸಮುದಾಯದ ಜೊತೆ ಇತರ 18 ಜಾತಿಯನ್ನು ಒಳಗೊಂಡಿದೆ. ಆದರೆ ಸ್ವರ್ಣವಲ್ಲಿ ಮಠ ಕೇವಲ ಹವ್ಯಕರು ಅದರಲ್ಲೂ ಸೀರಸಿ ಮತ್ತು ಯಲ್ಲಾಪುರ ಭಾಗದ ಜನರು ಮಾತ್ರ ಹೆಚ್ಚಿಗೆ ನಡೆದು ಕೊಳ್ಳುತ್ತಾರೆ. ಹೆಚ್ಚಿನ ಹವ್ಯಕರು ರಾಮಚಂದ್ರಾಪುರ ಮಠಕ್ಕೆ ನಡೆದು ಕೊಳ್ಳುವುದರಿಂದ ಸ್ವರ್ಣವಲ್ಲಿಮಠ ಪ್ರಾಭಲ್ಯವನ್ನು ಸಾಧಿಸುವ ಕನಸು ಕನಸಾಗೇ ಉಳಿಯಿತು. ಕಳೆದ ವರ್ಷವಷ್ಟೇ ಒಂದೇ ವೇದಿಕೆಯಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದ ಉಭಯ ಶ್ರೀಗಳು ಎರಡು ಮಠಗಳು ಎರಡು ಕಣ್ಣು ಇದ್ದಂತೆ ಎಂದು ನುಡಿದಿದ್ದರು. ಆದರೆ ಅದನ್ನು ಮರೆತ ಸ್ವರ್ಣವಲ್ಲಿ ಶ್ರೀಗಳು ಸ್ವಾರ್ಥಸಾಧನೆಗೆ ಟೊಂಕಕಟ್ಟಿ ನಿಂತಿದ್ದಾರೆ, ತಾವು ಒಬ್ಬ ಹವ್ಯಕ ಮಠಾಧೀಶ ಎಂಬುದನ್ನು ಮರೆತು!
ಶ್ರೀರಾಮಚಂದ್ರಾಪುರ ಮಠ ಗೋಕರ್ಣ ದೇವಾಲಯ ಬಂದ ಮೇಲೆ ಹವ್ಯಕ ಸಮುದಾಯದ ಮಠಕ್ಕೆ ಬಂತು ಎಂದು ಖುಷಿಪಡುವ ಬದಲು ೪ ದಿನದಲ್ಲಿ ಸರಕಾರದ ಕ್ರಮವನ್ನು ವಿರೋಧಿಸಿ ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಕೊಡಬಾರದು ಎಂದು ಪತ್ರಿಕಾ ಹೇಳಿಕೆ ನೀಡಿದರು. ಆಮೇಲೆ ವಿರೋಧಿಗಳ ಸಭೆ ಕರೆದು ಅವರಿಗೆ ಸಹಾಯ ಹಸ್ತವನ್ನು ನೀಡಿದರು. ಆದರೆ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಪಡಲಿಲ್ಲ. ವಿವಿಧ ಮಥಾಧೀಶರು ರಾಮಚಂದ್ರಾಪುರ ಮಠ ಕ್ಕೆ ಬೆಂಬಲ ವ್ಯಕ್ತಪಡಿಸಿದರೆ ಹವ್ಯಕ ಸಮಾಜದ ಶ್ರೀಗಳೇ ಬೆಂಬಲಿಸದೇ ಹವ್ಯಕರನ್ನು ವಿಭಾಗಿಸಲು ಕಾರ್ಯ ತಂತ್ರ ರೂಪಿಸಿದ್ದಾರೆ ಎನ್ನುವುದು ಕೇಳಿಬರುತ್ತಿರುವ ಮಾತು.
ಶ್ರೀರಾಮಚಂದ್ರಾಪುರ ಮಠ ಈಗಾಗಲೇ ಗೋಕರ್ಣ ದೇವಾಲಯ ಈ ಹಿಂದೆ ತನ್ನ ಸುಪರ್ಧಿಯಲ್ಲಿತ್ತು ಎಂದು ದಾಖಲೆಗಳನ್ನು ಸಲ್ಲಿಸಿದೆ. ಕೋರ್ಟನಲ್ಲೂ ಸಧ್ಯವೇ ವಿಚಾರಣೆಗೂ ಬರಲಿದೆ. ಒಂದು ವೇಳೆ ದಾಖಲೆಗಳು ಸರಿ ಇಲ್ಲ ಎಂದರೆ ಪುನ: ಸರಕಾರಕ್ಕೆ ದೇವಾಲಯ ಹೋಗುವುದರಲ್ಲಿ ಅನುಮಾನವಿಲ್ಲ. ಪುರಾತನ ,ಜಗದ್ವಿಖ್ಯಾತ ದೇವಸ್ಥಾನವನ್ನು ಯಾವ ಸರಕಾರವಾದರೂ ದಾಖಲೆಗಳೆ ಇಲ್ಲದೇ ಹಾಗೆ ಸುಮ್ಮನೇ ವಹಿಸಿಕೊಡುತ್ತದೆಯೇ? ಸರಕಾರ ಏನಾದರೂ ಶ್ರೀ ರಾಮಚಂದ್ರಾಪುರ ಮಠದ ಆಸ್ತಿಯೇ?.

ಸ್ವರ್ಣವಲ್ಲಿ ಶ್ರೀಗಳು ಬುದ್ದಿವಂತರಾಗಿದ್ದಾರೆ ರಾಮಚಂದ್ರಾಪುರ ಮಠಕ್ಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಹವ್ಯಕ ಸಮಾಜ ಒಂದಾಗಿದೆ ಎಂಬ ಸಂದೇಶವನ್ನು ರವಾನಿಸುತ್ತಿದ್ದರು. ಜನರಿಗೆ ಒಳ್ಳೆಯದನ್ನು ಮಾಡಿ ಎಂದು ಉಪದೇಶಿಸುವ ಶ್ರೀಗಳೇ ಶಿಷ್ಯರಲ್ಲಿ ಮತ್ಸರದ ಭಾವನೆಗಳನ್ನು ಬಿತ್ತುತ್ತಿರುವುದು ಸಾಮಾನ್ಯ ಜನತೆಗೂ ಒಬ್ಬ ಶ್ರೀಗಳಿಗೂ ಏನು ವ್ಯತ್ಯಾಸ ವೇನೆಂದು ಪ್ರಜ್ಞಾವಂತ ಜನತೆಯೇ ಮಾತಡಿಕೊಳ್ಳುತ್ತಿದ್ದಾರೆ. ಇದೆಲ್ಲ ಬೇಕಿತ್ತ ಸ್ವರ್ಣವಲ್ಲಿ ಶ್ರೀಗಳಿಗೆ ? ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದುಕೊಳ್ಳುತ್ತದೆ.

ಮಠದ ಆಸ್ತಿ ಮರಳಿ ಬಂದರೆ ಅದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದು ಸಾಧುವಲ್ಲ. ಯಾವುದೋ ಕಾಲಘಟ್ಟದಲ್ಲಿ ಶ್ರೀಮಠದ ಕೊಂಡಿಯಿಂದ ಕಳಚಿದ್ದ ಕೆಲವು ಕೊಂಡಿಗಳು ಈಗ ಮರಳಿ ಸೇರಿದರೆ ಉಳಿದವರಿಗೆ ಸಹಿಸಲು ಸಾಧ್ಯವಾಗುವುದಾದರೂ ಹೇಗೆ??!!.
ಬುದ್ದಿ ಹೇಳಿದ ಪೇಜಾವರರು !
ಸ್ವರ್ಣವಲ್ಲಿ ಶ್ರೀಗಳ ವಿರೋಧವನ್ನು ಕೇಳಿದ ಪೇಜಾವರರು ಸ್ವರ್ಣವಲ್ಲಿ ಶ್ರೀಗಳಿಗೆ ಬುದ್ದಿವಾದವನ್ನು ಹೇಳಿದ ಪ್ರಸಂಗ ನಡೆದಿರುವುದು ಸ್ವರ್ಣವಲ್ಲಿ ಶ್ರೀಗಳ ಮೊಂಡು ಹಟಕ್ಕೊಂದು ಉದಾಹರಣೆ. "ನಿಮ್ಮ ಒಳಗಿನ ಅಸಮಾಧಾನವನ್ನು ಹೊರಗೆ ಹಾಕಬೇಡಿ.ಧಾರ್ಮಿಕ ಮುಖಂಡರಲ್ಲೇ ಒಗ್ಗಟ್ಟಿಲ್ಲದಿದ್ದರೆ ಬೇರೆಯವರು ಕವಡೆ ಕಿಮ್ಮತ್ತು ಕೊಡುವುದಿಲ್ಲ ಧಾರ್ಮಿಕ ಕ್ಷೇತ್ರದಲ್ಲಿ "ರಾಜಕೀಯ " ಮಾಡಿ "ಹಸ್ತಕ್ಷೇಪ"ವನ್ನು ಕೈ ಬಿಡುವಂತೆ ಹೇಳಿರುವುದು ಹೊಸ ಸುದ್ದಿ.
ನಿಮ್ಮ ಅಭಿಪ್ರಾಯವನ್ನೂ ಬರೆಯಬಹುದು... media4cow@gmail.com

Tuesday, September 16, 2008

ಶ್ರೀ ರಾಘವೇಶ್ವರರೊಂದಿಗೆ ದೇಶದ ಎಲ್ಲ ಸಂತರಿದ್ದಾರೆ



(ಆತ್ಮಲಿಂಗವೇದಿಕೆ)ಗೋಕರ್ಣ : ದೇವಸ್ಥಾನಗಳು ಭಾರತದ ಆತ್ಮ, ಗೋಕರ್ಣ ಭಾರತದ ಆತ್ಮಸಾಕ್ಷಿ. ಇಂಥ ಪುಣ್ಯಕ್ಷೇತ್ರದ ಧಾರ್ಮಿಕ ಪುನರುತ್ಥಾನ ಕಾರ್ಯದಲ್ಲಿ ಇಡೀ ದೇಶದ ಸಾಧು ಸಂತರು ಶ್ರೀ ರಾಘವೇಶ್ವರರೊಂದಿಗೆ ಇದ್ದಾರೆ ಎಂದು ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಘೋಷಿಸಿದರು. ಅವರು ಸೋಮವಾರ ಇಲ್ಲಿನ ಭದ್ರಕಾಳಿ ಕಾಲೇಜ್ ಮೈದಾನದ ಆತ್ಮಲಿಂಗವೇದಿಕೆಯಲ್ಲಿ ನಡೆದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾಸಂಕಲ್ಪ ಹಾಗೂ ಶ್ರೀ ರಾಘವೇಶ್ವರ ಶ್ರೀಗಳ ಸೀಮೋಲ್ಲಘನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೋಕರ್ಣದ ಕ್ಷೇತ್ರದ ಪುನರುತ್ಥಾನದ ಮಹಾಸಂಕಲ್ಪ ಕೇವಲ ಗೋಕರ್ಣದ ಅಭಿವೃದ್ಧಿ ಸಂಕಲ್ಪವಲ್ಲ, ಇದು ಸಂಪೂರ್ಣ ದೇಶದ ಅಭಿವೃದ್ಧಿ ಮಹಾಸಂಕಲ್ಪ. ಯಾವುದೇ ಮಂತ್ರಕ್ಕೆ ಒಬ್ಬ ಋಷಿ ಅಪತಿಯಾಗಿರುತ್ತಾನೆ.ಅದೇ ರೀತಿ ಇಲ್ಲಿ ಗೋಕರ್ಣದ ಅಭಿವೃದ್ಧಿ ಮಂತ್ರದ ಅಪತಿ ರಾಘವೇಶ್ವರ ಶ್ರೀಗಳು. ಇದು ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಭೌತಿಕ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವಿದೆ. ಇದಕ್ಕೆ ಸಾಧು ಸಂತರಾದ ನಾವೆಲ್ಲರೂ ಕೈ ಜೋಡಿಸೋಣ ಎಂದರು. ಭಾರತದ ತಾಯಿ ಬೇರುಗಳೆಂದರೆ ಪುಣ್ಯಕ್ಷೇತ್ರಗಳು. ಇಂಥ ಪುಣ್ಯಕ್ಷೇತ್ರಗಳಿಗೆ ನೀರೆರೆದು ಬೆಳೆಸಿದರೆ ಮಾತ್ರ ಧಾರ್ಮಿಕ ಪುನರುತ್ಥಾನ,ಆ ಮೂಲಕ ಭಾರತದ ಪುನರುತ್ಥಾನವಾಗಲಿದೆ ಎಂದರು. ಹಿಂದೂ ಧರ್ಮಗಳನ್ನು ಯಾರಿಂದಲೂ ಕಿತ್ತೊಗೆಯಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿನ ದೇಗುಲಗಳು ನಮ್ಮ ದೇಶದ ಮೇಲಿನ ಎಲ್ಲ ಆಕ್ರಮಣಗಳನ್ನು ಎದುರಿಸಿ ನಿಂತಿವೆ, ಮುಂದೆಯೂ ನಿಲ್ಲುತ್ತ. ಸರಕಾರ, ಸಮಾಜ ಹಾಗೂ ಸನ್ಯಾಸಿಗಳು ಪರಸ್ಪರ ಒಗ್ಗೂಡಿದರೆ ದೇಶಕ್ಕೆ ಯಾವುದೇ ಆಪತ್ತು ಬರುವುದೇ ಇಲ್ಲ. ಇಲ್ಲಿ ಅಂಥದ್ದು ನಡೆದಿದೆ. ಇದಕ್ಕೆ ಸಾಧು ಸಂತರು ಬೆಂಬಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವದೆಲ್ಲೆಡೆ ಗೋಧ್ವಜ ಹಾರಿಸುವ ಸಂಕಲ್ಪತೊಟ್ಟಿರುವ ಶ್ರೀ ರಾಘವೇಶ್ವರ ಶ್ರೀಗಳು ಇಲ್ಲಿ ಎಲ್ಲರಿಗೂ ಗೋಕರ್ಣ ಕ್ಷೇತ್ರದ ಪುನರುತ್ಥಾನದ ಮಹಾಸಂಕಲ್ಪದ ದೀಕ್ಷೆ ಬೋಸಿದ್ದಾರೆ. ಅವರು ಗೋವಿನ ವಿಷಯದಲ್ಲಿ ಇದನ್ನು ಮಾಡುತ್ತಿದ್ದಾರೆ. ಖಂಡಿತಕ್ಕೂ ಗೋಕರ್ಣದ ವಿಷಯದಲ್ಲಿಯೂ ಹೀಗೆಯೇ ಆಗಲಿದೆ ಎಂದರು. ರಾಘವೇಶ್ವರ ಶ್ರೀಗಳು ಗೋವಿಗೇ ಜಗದ್ಗುರು ಪಟ್ಟ ನೀಡಿದ ಸಂತರು.ಅಂಥವರು ಈಗ ಗೋಕರ್ಣ ಪುನರುತ್ಥಾನದ ಸಂಕಲ್ಪ ತೊಟಿದ್ದಾರೆ. ಇದಕ್ಕೆ ಸಾಧು ಸಂತರಾದ ನಾವೆಲ್ಲ ಕೈಜೋಡಿಸೋಣ ಎಂದರು. ಸಚಿವ ಹರತಾಳ ಹಾಲಪ್ಪ ಮಾತನಾಡಿ, ಸರಕಾರ ಗೋಕರ್ಣವನ್ನು ರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿರುವುದನ್ನು ವಿರೋಸುವವರು ಈ ಬಗ್ಗೆ ಸರಕಾgದೊಂದಿಗೆ ಮಾತಾಡಲಿ, ಶ್ರೀಮಠದೊಟ್ಟಿಗೆ ಮಾತಾಡಿ ಬಗೆ ಹರಿಸಿಕೊಳ್ಳಬೇಕು ಎಂಬುದು ನನ್ನ ಸಲಹೆ. ಗೋಕರ್ಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವುದರ ಬಗ್ಗೆ ಈಗ ಯೋಚಿಸಬೇಕಾಗಿದೆ.ಗಣಪತಿ ರಾವಣನಿಂದ ಗುದ್ದು ತಿಂದು ಇಡೀ ಜಗತ್ತಿಗೇ ಮಂಗಲ ಮಾಡಿದ್ದಾನೆ. ಹಾಗೆಯೇ ನಾವು ಕೂಡ ಯಾರಾದರೂ ಗುದ್ದು ನೀಡಿದರೆ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಗೋಕರ್ಣದ ಅಭಿವೃದ್ಧಿ ಮಾಡೋಣ ಎಂದರು. ಸಚಿವ ವಿಶ್ವೇಶ್ವ ಹೆಗಡೆ ಕಾಗೇರಿ ಸರಕಾರ ಯೋಚಿಸಿಯೇ ತೀರ್ಮಾನ ಮಾಡಿದೆ.ಇದಕ್ಕಾಗಿ ಸರಕಾರವನ್ನು ಅಭಿನಂದಿಸುತ್ತೇನೆ ಎಂದರು. ಜೇವರ್ಗಿಯ ಶ್ರೀ ಸೋಪಾನನಾಥ ಸ್ವಾಮೀಜಿ, ಶ್ರೀ ರಮಾನಂದ ಸ್ವಾಮೀಜಿ, ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ, ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಶಿವಾನಂದ ನಾಯ್ಕ, ಶಾಸಕರಾದ ಜೆ.ಡಿ.ನಾಯ್ಕ, ಜೇವರ್ಗಿ ಶಾಸಕ ದೊಡ್ಡನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕುಮಟಾ ಶಾಸಕ ದಿನಕರ ಶೆಟ್ಟಿ ಸ್ವಾಗತಿಸಿದರು. ಪ್ರಮೋದ ಹೆಗಡೆ ಸಭಾ ಪೂಜೆ ನೆರವೇರಿಸಿದರು. ಮಹಾಸಂಕಲ್ಪ ಬೋಧನೆ: ಸೇರಿದ್ದ ಐವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ರಾಘವೇಶ್ವರ ಶ್ರೀಗಳು ಗೋಕರ್ಣ ಕ್ಷೇತ್ರದ ಪುನರುತ್ಥಾನದ ಮಹಾಸಂಕಲ್ಪ ಬೋಸಿದರು. ಶ್ರೀಗಳ ಧ್ವನಿಗೆ ಎಲ್ಲರೂ ಧ್ವನಿ ಗೂಡಿಸಿದರು. ಇದಕ್ಕೂ ಮೊದಲು ಹವ್ಯಕ, ನಾಮಧಾರಿ, ಹಾಲಕ್ಕಿ, ನಾಡೋರ, ಗೌಡ ಸಾರಸ್ವತ, ಸಾರಸ್ವತ, ದೈವಜ್ಞ, ದೇಶಭಂಡಾರಿ, ಭಂಡಾರಿ,ಮಡಿವಾಳ, ಗಾಣಿಗ, ಮೊಗೇರ, ಅಂಬಿಗ, ಹರಿಕಂತ್ರ, ವಾಲ್ಮೀಕಿ, ಗಾಡಿಗ, ಗಾವಿತ, ಪಟಗಾರ ಒಕ್ಕಲಿಗ, ಗಾವಡಿ ಮುಂತಾದ ಅನೇಕ ಸಮುದಾಯದ ಮುಖಂಡರು ರಾಘವೇಶ್ವರ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು.




COMMENTS:
At 16 September, 2008 , Ramesh said...
ನಿಮ್ಮ ಲೇಖನವನ್ನು ಓದಿದರೇ ನಾವೇ ಗೋಕರ್ಣಕ್ಕೆ ಹೋಗಿ ಬಂದ ಹಾಗಿದೆ. ವಸ್ತುಸ್ತಿತಿಯನ್ನು ನೀವಿಲ್ಲಿ ತುಂಬಾ ಸುಂದರವಾಗಿ ವಿವರಿಸಿದ್ದೀರ. ಧನ್ಯವಾದಗಳು.

ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದರೆ ಅದು ಶ್ರೀರಾಘವೇಶ್ವರರಿಗೆ ಎಷ್ಟು ಸಂಘಟನಾ ಶಕ್ತಿಯಿದೆ ಎಂಬುದನ್ನು ತೋರಿಸುತ್ತದೆ. ಜನರಿಗೆ ರಾಘವೇಶ್ವರರ ಮೇಲೆ ಎಷ್ಟು ಪ್ರೀತಿ, ನಂಬಿಕೆ, ಭಕ್ತಿಯಿದೆ ಎನ್ನುವುದನ್ನು ತೋರಿಸುತ್ತದೆ.

ಇಂದಿನ ಜನರಲ್ಲಿ ಜೀವನವೆಂದರೆ ಬರಿ ದುಡ್ಡು ಅಂತ ಮನಸ್ಸಲ್ಲಿ ಬೆಳೆದು ಬಂದಿದೆ. ದುಡ್ಡಿದ್ದರೆ ಮಾತ್ರ ನಾವು ಸುಖವಾಗಿ ಇರಬಬುದು ಎನ್ನುವ ಹುಚ್ಚು ಕಲ್ಪನೆ ಬಂದಿದೆ. ದುಡ್ಡು ಮಾಡಲು ಎಂತ ಹೇಯ ಕೆಲಸಕ್ಕೂ ಮನಸ್ಸು ಮಾಡುವರು. ಯಾವು ಸತ್ಯ, ಯಾವುದು ಮಿಥ್ಯ ಎನ್ನುವ ಅರಿವೇ ಇರುವುದಿಲ್ಲ. ಇದನ್ನು ನಾವು ಎಲ್ಲ ರಂಗದಲ್ಲಿಯೂ ಕಾಣಬಹುದು. ಸಮಾಜಕ್ಕೆ ನೈಜ ಸ್ಥಿತಿಯನ್ನು ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾದುದು. ಒಂದು ಘಟನೆಯನ್ನು ಎಲ್ಲ ರೀತಿಯಿಂದ ಅವಲೋಕಿಸಿ ಅದನ್ನು ಮಾಧ್ಯಮದಲ್ಲಿ ಪ್ರಕಟಿಸಬೇಕು. ಏಕಮುಖವಾಗಿರಬಾರದು.

ಇದನ್ನು ಇಲ್ಲಿ ಯಾಕೆ ಪ್ರಸ್ಥಾಪ ಮಾಡುತ್ತಿದ್ದೇನೆಂದರೇ, ನಿನ್ನೆ ನಾನು ಡಿ.ಡಿ. ಚಂದನದಲ್ಲಿ ಗೋಕರ್ಣದ ನೇರ ಪ್ರಸಾರವನ್ನು ವೀಕ್ಷಿಸುತ್ತಿದೆ. ಒಮ್ಮೆ ಟಿ.ವಿ.೯ ರಲ್ಲಿ ಗೋಕರ್ಣದ ಬಗ್ಗೆ ಎನು ಬರುತ್ತಿರಬಹುದೆಂದು ನೋಡಿದೆ. ಅಲ್ಲಿಯ ವರದಿ ನೋಡಿ ಆಶ್ಚರ್ಯವಾಯಿತು. ಅಲ್ಲಿ ಗೋಕರ್ಣದ ಬಗ್ಗೆ ಎನೂ ಬರುತ್ತಿರಲಿಲ್ಲ. ಒಂದು ಸ್ಥಳದಲ್ಲಿ ಸಾವಿರ ಸಾವಿರ ಸಂಖ್ಯೆಯ ಜನರು ಸೇರಿದ್ದು ಒಂದು ಮಹಾಸಂಕಲ್ಪವಾಗುತ್ತಿದ್ದುದರ ಸುಳಿವಿರಲಿಲ್ಲ. ಅದರ ಬದಲು "ಗೋಕರ್ಣ ಹಸ್ತಾಂತರ ವಿವಾದ" ಸ್ವರ್ಣವಲ್ಲಿಯಲ್ಲಿ ವಿವಿಧ ಮಠಾದೀಶರ ಸಭೆ. ಸಭೆಯಲ್ಲಿ ಪೇಜಾವರ ಶ್ರೀಗಳು ಅಂತಿತ್ತು. ಅತ್ತ ಚಂದನದಲ್ಲಿ ಪೇಜಾವರ ಶ್ರೀಗಳು ಗೋಕರ್ಣದ ಆತ್ಮಲಿಂಗ ವೇದಿಕೆಯಲ್ಲಿದ್ದು, ಇದು ಸರಿಯಾದ ನಿರ್ದಾರ ಅಂತ ಹೇಳುತ್ತಿದ್ದರೆ ಇಲ್ಲಿ ವರದಿಯನ್ನು ತಿರುಚಲಾಗಿತ್ತು.

ನಿಜವಾದ ಘಟನೆಯೇನೆಂದರೇ, ಪೇಜಾವರ ಶ್ರೀಗಳು ಗೋಕರ್ಣಕ್ಕೆ ಬರುವ ಮಾರ್ಗ ಮದ್ಯೆ ಸ್ವರ್ಣವಲ್ಲಿಗೆ ಹೋಗಿ ಎಲ್ಲರೂ ಸೇರಿ ಬಗೆಹರಿಸೋಣವೆಂದು ಬುದ್ದಿಮಾತು ಹೇಳಿಬಂದಿದ್ದರು. ಆದರೆ ಅದು ಟಿ.ವಿ.೯ ನಲ್ಲಿ ಪ್ರಕಟವಾಗಲೇ ಇಲ್ಲ. ಕೊನೆಗೆ ಟಿ.ವಿ.೯ ರವರು ಪೇಜಾವರ ಶ್ರೀಗಳವರ ಹತ್ತಿರ ದೂರವಾಣಿಯೊಂದಿಗೆ ಮಾತನಾಡಿದಾಗ ಅವರು ಮತ್ತೆ ಹೇಳಿದ್ದು ಗೋಕರ್ಣ ರಾಘವೇಶ್ವರರಿಂದ ಉನ್ನತ ಸ್ಥಿತಿಯತ್ತ ತಲುಪುತ್ತದೆ. ನಮ್ಮದು ಯಾವುದೇ ವಿರೋದವಿಲ್ಲ. ನಾವು ಪರವಾಗಿದ್ದೇವೆ ಎಂದು. ಅಷ್ಟಾದರೂ ಟಿ.ವಿ.೯ ನಲ್ಲಿ ಗೋಕರ್ಣ ಹಸ್ತಾಂತರದ ಬಗ್ಗೆ ಬರುತ್ತಾಯಿತ್ತು. ಬಹುಶಃ ಅಲ್ಲಿ ಕಾಣದ ವ್ಯಕ್ತಿಗಳ ಕೈವಾಡವಿರಬಹುದು.

ಎಲ್ಲಿಯೇ ತಪ್ಪಿದ್ದರೂ ಅದನ್ನು ಸರಿಪಡಿಸಬೇಕು. ಆಗಲೇ ಸಮಾಜ ಉದ್ದಾರವಾಗುತ್ತದೆ. ಆದರೆ ಆ ಘಟನೆಯನ್ನು ಏಕಮುಖವಾಗಿ ನೋಡಬಾರದು. ಎಲ್ಲ ರೀತಿಯಿಂದ ಅವಲೋಕಿಸಿ, ಸಂಬಂದಪಟ್ಟ ವ್ಯಕ್ತಿಗಳ ಹತ್ತಿರ ಚರ್ಚಿಸಿ ಅದನ್ನು ಸರಿಪಡಿಸಲು ಪ್ರಯತ್ಸಿಸಬೇಕು. ಮನಸ್ಸಿಗೆ ಬಂದಂತೆ ಪ್ರಕಟಿಸುವುದಲ್ಲ. ಪ್ರಜ್ಞಾವಂತ ಓದುಗ/ವೀಕ್ಷಕ ಎಲ್ಲವನ್ನೂ ಗಮನಿಸುತ್ತಿರುತ್ತಾನೆ.


At 17 September, 2008 , Ramesh said...
ಆತ್ಮೀಯರೇ,

"ಗೋ ಕರಣ" ಹಸ್ತಾಂತರವನ್ನು ಸ್ವರ್ಣವಲ್ಲಿ ಶ್ರೀಗಳು ಯಾಕೆ ವಿರೋದಿಸುತ್ತಿದ್ದಾರೆ ಎನ್ನುವುದು ನಿಗೂಡವಾಗಿದ್ದು ಅದರ ಬಗ್ಗೆ ಹುಡುಕಿದಾಗ ಸಿಕ್ಕಿದ್ದು http://bimbapratibimba.blogspot.com/ ಬ್ಲಾಗ್.

ಇಲ್ಲಿ ನೀವೂ ಬ್ಲಾಗಿಸಿ

ಜನ ಶಕ್ತಿಯ ಸಂಕಲ್ಪ ತಡೆಯಲು ಅಸಾಧ್ಯ

ಆತ್ಮಲಿಂಗವೇದಿಕೆ : ಗೋಕರ್ಣ ಕ್ಷೇತ್ರದ ಪುನರುತ್ಥಾನ ಸಂಕಲ್ಪ ದೃಢ ಸಂಕಲ್ಪವಾಗಲಿ ಎಂದು ನ್ಯಾಯಮೂರ್ತಿ ಶಿವರಾಜ್ ಪಾಟೀಲ ಅಭಿಪ್ರಾಯಪಟ್ಟರು. ಗೋಕರ್ಣದ ಭದ್ರಕಾಳಿ ಕಾಲೇಜಿನ ಆತ್ಮಲಿಂಗ ವೇದಿಕೆಯಲ್ಲಿ ಸೋಮವಾರ ನಡೆದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾ ಸಂಕಲ್ಪಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನ ಶಕ್ತಿಗೆ ಬಲ. ಜನ ದೃಢ ಸಂಕಲ್ಪ ಮಾಡಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗೋಕರ್ಣ ಕ್ಷೇತ್ರದ ಧಾರ್ಮಿಕ ಪುನರುತ್ಥಾನ ಕಾರ್ಯದಲ್ಲಿ ಇದು ಹೀಗೆಯೇ ಆಗಲಿ. ಇಂದು ಯತಿವರೇಣ್ಯರ ಸಮ್ಮುಖದಲ್ಲಿ ತೆಗೆದುಕೊಂಡ ಗೋಕರ್ಣ ಕ್ಷೇತ್ರ ಧಾರ್ಮಿಕ ಪುನರುತ್ಥಾನ ಮಹಾಸಂಕಲ್ಪ ಜನಶಕ್ತಿಯಾಗಿ ಗೋಕರ್ಣ ಕ್ಷೇತ್ರ ಅಭಿವೃದ್ಧಿಯಾಗಲಿ ಎಂದರು. ‘ನನ್ನ ದೃಷ್ಟಿಯಲ್ಲಿ ಇದು ಕೇವಲ ಧಾರ್ಮಿಕ ಕ್ಷೇತ್ರದ ಪುನರುತ್ಥಾನ ಮಹಾಸಂಕಲ್ಪ ಸಭೆಯಲ್ಲ. ಇದು ಧಾರ್ಮಿಕ ಭಾವನೆಯ, ಸಾಮಾಜಿಕ ಮೌಲ್ಯಗಳ, ಅಧ್ಯಾತ್ಮ ಚಿಂತನೆಯ ಪುನರುತ್ಥಾನದ ಸಂಕಲ್ಪ. ಗೋಕರ್ಣ ಕ್ಷೇತ್ರ ಹಾಗೆಯೇ ಆಗಲಿದೆ ಎಂಬುದು ನನ್ನ ನಂಬಿಕೆ. ಆ ಮೂಲಕ ಭಾರತಕ್ಕೆ ಎಲ್ಲ ಕ್ಷೇತ್ರದಲ್ಲಿಯೂ ಮಾರ್ಗದರ್ಶನ ಮಾಡಲಿ’ ಎಂದರು.

ಇಡೀ ಸಮುದಾಯಕ್ಕೆ ಗೋಕರ್ಣ ಹಸ್ತಾಂತರ


ಜನಸಾಗರದೆದುರು ರಾಘವೇಶ್ವರ ಶ್ರೀಗಳ ಘೋಷಣೆ *ದೇವರ ದರ್ಶನಕ್ಕೆ ಪ್ರವೇಶ ಶುಲ್ಕ ಇಲ್ಲ *ಮುಟ್ಟಿ ಪೂಜಿಸುವ ಪದ್ಧತಿ ಮುಂದುವರಿಯುತ್ತದೆ *ಭಕ್ತರು, ಅರ್ಚಕರಿಗೆ ಭಯ ಬೇಡ *ದೇವರ ಅಷ್ಟ ಬಂಧಕ್ಕೆ ಯೋಜನೆ *ಹಸ್ತಾಂತರ ಮಹಾಬಲೇಶ್ವರನ ಇಚ್ಛೆ

(ಆತ್ಮಲಿಂಗವೇದಿಕೆ) ಗೋಕರ್ಣ: ‘ಮಹಾಬಲೇಶ್ವರ ದೇವಸ್ಥಾನವನ್ನು ಇಡೀ ಸಮುದಾಯಕ್ಕೆ ಹಸ್ತಾಂತರ ಮಾಡುತ್ತಿದ್ದೇನೆ. ಇದು ಯಾವುದೇ ಜಾತಿ ಹಾಗೂ ಸಮುದಾಯಕ್ಕೆ ಸೀಮಿತವಾಗುವುದಿಲ್ಲ. ಇದು ಇಡೀ ಸಮುದಾಯದ್ದಾಗುತ್ತದೆ. ಇಲ್ಲಿಯ ಎಲ್ಲ ಸಂಪ್ರದಾಯ, ಪದ್ಧತಿಗಳು, ಆಚಾರ ಹಾಗೆಯೇ ಮುಂದುವರಿಯುತ್ತವೆ. ಇದು ಗೋಕರ್ಣ ಮಂಡಲಾಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಘೋಷಣೆ. ಗೋಕರ್ಣದ ಸಾಗರ ತೀರದ ಭದ್ರಕಾಳಿ ಕಾಲೇಜಿನ ಆತ್ಮಲಿಂಗ ವೇದಿಕೆಯಲ್ಲಿ ಸೋಮವಾರ ನೆರೆದಿದ್ದ ಜನಸಾಗರದೆದುರು ಶ್ರೀಗಳಿಂದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾಸಂಕಲ್ಪ ಘೋಷಣೆ ಮೊಳಗುತ್ತಿದ್ದಂತೆಯೇ ಎಲ್ಲರಲ್ಲೂ ರೋಮಾಂಚನ. ‘ಗೋಕರ್ಣದ ಆತ್ಮಲಿಂಗವನ್ನು ಮುಟ್ಟಿಪೂಜೆ ಮಾಡುವ ಪದ್ಧತಿ ಮುಂದುವರಿಯಲಿದೆ. ಮಠ, ಭಕ್ತರು ಹಾಗೂ ಭಗವಂತನ ಮಧ್ಯೆ ದ್ವಾರ ಆಗತ್ತದೆಯೇ ವಿನಃ ಗೋಡೆ ಆಗುವುದಿಲ್ಲ. ಭಕ್ತರ ಪೂಜೆ ಆಗಬೇಕು ಎಂಬುದು ಮಠದ ಅಪೇಕ್ಷೆ ಅಂದರೆ ಇಲ್ಲಿಗೆ ಬಂದ ಭಕ್ತರು ತೃಪ್ತ ಭಾವದಿಂದ ಹೋಗುವಂತಾಗಬೇಕು’ ಎಂದರು. ಇನ್ನು ಮುಂದೆ ದೇವರ ದರ್ಶನಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಘೋಷಿಸಿದ ರಾಘವೇಶ್ವರ ಶ್ರೀಗಳು, ಆತ್ಮ ಲಿಂಗ ಹಾಗೂ ಭಕ್ತರ ಮಧ್ಯೆ ಸಣ್ಣ ತಡೆಯೂ ಇಲ್ಲ ಎಂಬುದು ಇದರ ಸಂಕೇತ. ಅಂದರೆ ಮಠ ಯಾವತ್ತೂ ಭಕ್ತರು ಹಾಗೂ ಭಗವಂತನ ನಡುವಿನ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ ಎಂದರು. ಪೂಜಾ ಪದ್ಧತಿ ಹಾಗೆಯೇ ಮುಂದುವರಿಯಲಿದೆ. ಯಾರದ್ದಾದರೂ ಬಿಟ್ಟು ಹೋಗಿದ್ದರೆ ಇದನ್ನು ಸೇರಿಸುವ ಕೆಲಸವನ್ನು ಮಠ ಮಾಡುತ್ತದೆ. ಭಕ್ತರು, ಅರ್ಚಕರು, ಇತರ ಸಂಬಂಧಪಟ್ಟವರ ಯಾರೂ ಈ ಬಗ್ಗೆ ಭಯಪಡಬೇಕಾಗಿಲ್ಲ ಎಂದರು. ಗೋಕರ್ಣದ ಅಷ್ಟ ಬಂಧವಾಗಿ ೨೫ ವರ್ಷಗಳು ಕಳೆದಿವೆ, ಹೀಗಾಗಿ ಅಷ್ಟಬಂಧ ಕಾರ್ಯಕ್ರಮ ಮಾಡಬೇಕಾಗಿದೆ ಎಂದರು. ಎಷ್ಟೇ ಆಕ್ರಮಣಗಳು ನಡೆದರೂ ಗೋಕರ್ಣ ಮಹಾಬಲೇಶ್ವರ ಅಚಲನಾಗಿಯೇ ಇದ್ದಾನೆ. ಆತನನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ರಾಮಚಂದ್ರಾಪುರ ಮಠ ಸಹ ಅನೇಕ ಆಕ್ರಮಣಗಳನ್ನು ಎದುರಿಸಿಯೂ ಅಚಲವಾಗಿಯೇ ಇದೆ, ಅಚಲವಾಗಿಯೇ ಇರುತ್ತದೆ ಎಂದರು. ಆತ್ಮಲಿಂಗದ ಪೂಜೆಗೆ ದೇಶದ ಯಾವುದೇ ಪೀಠಕ್ಕೆ ಹಾಗೂ ಪೀಠಾಪತಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಎಲ್ಲರಿಗೂ ಸ್ವಾಗತವಿದೆ, ಕೇವಲ ಸ್ವಾಗತವಲ್ಲ, ಅದ್ಧೂರಿ ಸ್ವಾಗತವಿದೆ ಎಂದರು. ಮಹಾಬಲೇಶ್ವರನ ಇಚ್ಛೆ ಇಲ್ಲದಿದ್ದರೆ ಇಲ್ಲಿ ಏನೂ ಆಗುವುದಿಲ್ಲ, ಆತ ಎಷ್ಟೇ ಬಲಶಾಲಿಯಾಗಿದ್ದರೂ ಏನು ಮಾಡಲೂ ಸಾಧ್ಯವಿಲ್ಲ. ಇದಕ್ಕೆ ರಾವಣನೇ ಉದಾಹರಣೆ. ಶ್ರೀ ಮಠಕ್ಕೆ ಮಹಾಬಲೇಶ್ವರನ ದೇವಸ್ಥಾನವನ್ನು ವಹಿಸಲಾಗಿದೆ ಎಂದರೆ ಇದು ಆತನ ಇಚ್ಛೆ ಎಂದರ್ಥ ಎಂದರು. ಗೋಕರ್ಣ ಎಂದರೆ ಗೋವುಗಳ ವಿಚಾರವನ್ನು ಸದಾ ಜನರ ಕಿವಿಯಲ್ಲಿಡಬೇಕು ಎಂದರ್ಥ. ರಾಮಚಂದ್ರಾಪುರ ಮಠ ಇದೇ ಕೆಲಸ ಮಾಡುತ್ತಿದೆ. ಮಠಕ್ಕೆ ಗೋಕರ್ಣ ದೇವಸ್ಥಾನ ವಹಿಸಿದ್ದು ಮಗು ಪುನಃ ಮನೆಗೆ ಬಂದಂತಾಗಿದೆ. ಇಲ್ಲಿ ಮಹಾಬಲೇಶ್ವರ ತಾಯಿ, ರಾಮಚಂದ್ರಾಪುರ ಮಠ ಮಗು. ಮಗು ಈಗ ಮನೆಗೆ ಬಂದಿದೆ, ಇದನ್ನು ಯಾಕೆ ಎಂದು ಕೇಳುತ್ತಾರಾ ಎಂದು ಪ್ರಶ್ನಿಸಿದರು.

Monday, September 15, 2008

‘ಮಹಾಸಂಕಲ್ಪ’ ದಲ್ಲಿ ಮಿಂದೆದ್ದ ಜನತೆ



ಆತ್ಮಲಿಂಗವೇದಿಕೆ (ಗೋಕರ್ಣ): ಕಳೆದೆರಡು ದಿನಗಳಿಂದ ಕರ್ನಾಟಕ ಕರಾವಳಿಯಲ್ಲಿ ಅರಬ್ಬಿ ಸಮುದ್ರ ಉಕ್ಕಿದೆ. ಆದರೆ ಗೋಕರ್ಣದಲ್ಲಿ ಮಾತ್ರ ಸೋಮವಾರ ಜನಸಾಗರ ಉಕ್ಕಿತ್ತು. ಪ್ರವಾಹೋಪಾದಿಯಲ್ಲಿ ಹರಿದು ಬಂದ ಜನಸಾಗರಕ್ಕೆ ಗೋಕರ್ಣದ ಬೀದಿಗಳು ಸಾಲದೆ ಹೋದವು. ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳಿಗೆ ಸರಕಾರ ಗೋಕರ್ಣವನ್ನು ಹಸ್ತಾಂತರಿಸಿದ ನಂತರ ಶ್ರೀಗಳು ಕರೆದಿದ್ದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾಸಂಕಲ್ಪ ಕಾರ್ಯಕ್ರಮ ದಲ್ಲಿ ಮಹಾಸಂಕಲ್ಪ ತೊಡಲು ಸುರಿವ ಮಳೆಯನ್ನೂ ಲೆಕ್ಕಿಸದೆ ಜನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು. ಒಂದೆಡೆ ಮಹಾಸಂಕಲ್ಪದ ಮೆರವಣಿಗೆ ಗೋಕರ್ಣದ ದೇವಸ್ಥಾನದತ್ತ ಸಾಗುತ್ತಿದ್ದರೆ, ಇನ್ನೊಂದೆಡೆ ಜಡಿ ಮಳೆ ಇವರನ್ನು ನೆನೆಸಿತು. ಆದರೆ ಇವರಲ್ಲ ಅದನ್ನು ಲೆಕ್ಕಿಸದೆ ಗೋಕರ್ಣ ಕ್ಷೇತ್ರದ ಮಹಾ ಸಂಕಲ್ಪದ ದಿವ್ಯ ಮಳೆಯಲ್ಲಿ ಮಿಂದೆದ್ದರು. ಅವರಿಗೆ ಇದ್ದದ್ದು ಗೋಕರ್ಣ ಕ್ಷೇತ್ರ ಎಂಬುದು ದೇಶಕ್ಕೇ ಧಾರ್ಮಿಕ ಪುನರುತ್ಥಾನದ ಕೇಂದ್ರವಾಗಬೇಕು ಎಂಬ ದಿವ್ಯ ಸಂಕಲ್ಪ ಮಾತ್ರ. ಮಹಾಬಲೇಶ್ವರನೇ ಕರೆಸಿದ್ದು... ನಮ್ಮನ್ನು ಗೋಕರ್ಣದ ಮಹಾಬಲೇಶ್ವರನೇ ಕರೆಸಿದ್ದು ಸ್ವಾಮಿ, ನಮ್ಮ ದೇನಿದೆ. ಗೋಕರ್ಣ ಕ್ಷೇತ್ರ ಪುನರುತ್ಥಾನಕ್ಕೆ ರಾಘವೇಶ್ವರ ಶ್ರೀಗಳು ಸಂಕಲ್ಪ ತೊಟ್ಟಿದ್ದಾರೆ. ಗೋ ಯಾತ್ರೆ ಮೂಲಕ ಇಡೀ ವಿಶ್ವಕ್ಕೇ ಧಾರ್ಮಿಕ ಪುನರುತ್ಥಾನದ ಸಂದೇಶ ನೀಡಿರುವವರು ಈಗ ಗೋಕರ್ಣ ಕ್ಷೇತ್ರದ ಪುನರುತ್ಥಾನಕ್ಕೆ ಸಂಕಲ್ಪ ತೊಟ್ಟಿರುವಾಗ ಭಕ್ತಾದಿ ಗಳಾದ ನಾವು ಇದಕ್ಕೆ ಕೈ ಜೋಡಿಸದಿದ್ದರೆ ಹೇಗೆ..? ಗೋಕರ್ಣ ಮಹಾಬಲೇಶ್ವರನ ಭಕ್ತರಾಗಿ ಏನು ಪ್ರಯೋಜನ. ನಮ್ಮಲ್ಲೆಲ್ಲ ಮನೆ ಮನೆಗೆ ಗೋಕರ್ಣ ಮಹಾಬಲೇಶ್ವರನ ಹೆಸರು ಕನಿಷ್ಠ ಎರಡ್ಮೂರು ಹೆಸ್ರು ಇಡ್ತಾರೆ. ಗೋಕರ್ಣ ಮಹಾಬಲೇಶ್ವರ ನಮಗೆ ಅಷ್ಟು ಹತ್ತಿರ. ಹೀಗಿರುವಾಗ ಗೋಕರ್ಣದ ಪುನರುತ್ಥಾನದ ಕೆಲಸ ಮಾಡುವಾಗ ಇದಕ್ಕೆ ಬರದೆ ಇರಲಿಕ್ಕೆ ಆಗ್ತದಾ ಎಂದು ನಾಗೇಶ ಗೌಡ ಕೇಳುತ್ತಾರೆ. ಇದು ಪುಷ್ಪವೃಷ್ಟಿ... ಸ್ವಾಮಿ ಗೋಕರ್ಣ ಮಹಾಬಲೇಶ್ವರ ನೀರಲ್ಲೇ ಇರುವುದು. ಅವನ ತಲೆ ಮೇಲೆ ಸದಾ ನೀರು ಬೀಳುತ್ತಿರಬೇಕು. ಆತನಿಗೆ ಜಲಬೇಕೇಬೇಕು. ಗೋಕರ್ಣ ಕ್ಷೇತ್ರದ ಸಂಕಲ್ಪ ತೊಟ್ಟ ಈ ದಿವಸವೇ ಇಷ್ಟೊಂದು ಜಡಿ ಮಳೆಯಾಗಿರುವುದು, ಇದು ಕೇವಲ ಮಳೆಯಲ್ಲ, ಮಹಾಬಲೇಶ್ವರನ ಅಭಿಷೇಕಕ್ಕೆ ಆದ ಪುಷ್ಪ ವೃಷ್ಟಿ ಇದು. ನಮಗೂ ಪುಷ್ಪ ವೃಷ್ಟಿ ಆದಂತಾ ಯಿತು ಎನ್ನುತ್ತಾರೆ ರಾಮು. ಗೋಕರ್ಣದಲ್ಲಿ ಇತಿಹಾಸ... ಗೋಕರ್ಣ ಕ್ಷೇತ್ರದ ಪುನರುತ್ಥಾನದ ಸಂಕಲ್ಪಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ಜನ ಸೇರಿರುವುದು ನಿಜಕ್ಕೂ ಗೋಕರ್ಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಸ್ಥಳೀಕರೊಬ್ಬರು ಅಭಿಪ್ರಾಯಪಡುತ್ತಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಮಳೆ ಬೀಳುತ್ತಿದೆ. ಆದರೂ ನಿರೀಕ್ಷೆಗೆ ಮೀರಿ ಜನ ಬಂದು ಈ ಮಹಾಸಂಕಲ್ಪ ತೊಟ್ಟಿದ್ದಾರೆ ಎನ್ನುತ್ತಾರೆ ಅವರು. ಮಳೆಯಲ್ಲೇ ತೊಯ್ದರು.. ಸಭೆ ಸಂದರ್ಭದಲ್ಲಿ ಜಡಿ ಮಳೆ ಸುರಿಯುತ್ತಿದ್ದರೂ ಜನ ಮಾತ್ರ ಅಲ್ಲಿಂದ ಕದಲಲಿಲ್ಲ. ಕೆಲವರು ಕೊಡೆ ಹಿಡಿದು ರಾತ್ರಿ ೧೦ರ ವರೆಗೂ ಕುಳಿತರೆ, ಇನ್ನು ಕೆಲವರು ಮಳೆಯಲ್ಲಿ ತೊಯ್ದು ಒದ್ದೆ ಬಟ್ಟೆಯಲ್ಲೇ ಕುಳಿತರು. ಅವರೆಲ್ಲರದು ಒಂದೇ ಮಂತ್ರ, ಗೋಕರ್ಣ ಕ್ಷೇತ್ರದ ಅಭಿ ವೃದ್ಧಿ ಮಂತ್ರ, ಒಂದೇ ಸಂಕಲ್ಪ ಅದುವೇ ಗೋಕರ್ಣ ಕ್ಷೇತ್ರದ ಧಾರ್ಮಿಕ ಪುನರುತ್ಥಾನದ ಸಂಕಲ್ಪ. ಇತಿಹಾಸ ನಿರ್ಮಿಸಿದರು ಶ್ರೀ ಕ್ಷೇತ್ರ ಗೋಕರ್ಣ ಪುನರುತ್ಥಾನ ಮಹಾಸಂಕಲ್ಪಕ್ಕೆ ಜನ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿ ಇತಿಹಾಸ ನಿರ್ಮಿಸಿದರು. ಬಂದ ಎಲ್ಲ ಭಕ್ತ ಸಮೂಹಕ್ಕೆ ಪ್ರೀತಿ ಪೂರಕ ಆತಿಥ, ಸಲಹೆ, ಮಾರ್ಗ ದರ್ಶನ ಲಭ್ಯವಿತ್ತು. ಆತ್ಮಲಿಂಗ ವೇದಿಕೆಗೆ ಜನಪ್ರವಾಹವೇ ಹರಿದು ಬಂದರೂ ಗದ್ದಲ, ಗಲಾಟೆ, ಗಲೀಜು ಎಂಬುದು ಕಿಂಚಿತ್ತೂ ಇರಲಿಲ್ಲ. ಕುಡಿಯುವ ನೀರು, ಪಾನೀಯ, ಊಟ, ಉಪಹಾರ, ಸಂಚಾರ ನಿಯಂತ್ರಣ, ಸಂಚಾರಿ ಆಸ್ಪತ್ರೆ, ಹೀಗೆ ಎಲ್ಲದರಲ್ಲೂ ಅಚ್ಚುಕಟ್ಟು ಎದ್ದು ಕಾಣುತ್ತಿತ್ತು. ಆಗಾಗ ಸುರಿಯುತ್ತಿದ್ದ ಜಡಿ ಮಳೆಯ ಮಧ್ಯೆಯೂ ಕಾರ್ಯಕರ್ತರು ವ್ಯವಸ್ಥೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ನೋಡಿ ಕೊಂಡರು. ಗೋಕರ್ಣದ ಇತಿಹಾವನ್ನು ಬಿಂಬಿಸುವ ದೃಶ್ಯವನ್ನೊಳಗೊಂಡ ಸುಂದರ ವೇದಿಕೆ ಸಭೆಗೆ ಮತ್ತಷ್ಟು ಮೆರುಗು ನೀಡಿತು.

ಆತ್ಮಲಿಂಗದ ದಿವ್ಯಸನ್ನಿಧಾನ: ಮಹಾ ಸಂಕಲ್ಪ

ಸೆ.೧೫: ಗೋಕರ್ಣ: ಪರಶಿವನ ಆತ್ಮಲಿಂಗದ ದಿವ್ಯ ಸನ್ನಿಧಾನದ ಪಾವನ ಕ್ಷೇತ್ರ, ಗಜಾನನನ ದಿವ್ಯ ಲೀಲಾವಿಭೂತಿಯ ಆಡುಂಬೊಲ, ಜಗನ್ಮಾತೆ ಪಾರ್ವತಿಯು ದುಷ್ಟನಾಶಕಳಾಗಿ ಭದ್ರಕಾಳಿಯಾದ, ಶಿಷ್ಟ ಪರಿಪಾಲಕಳಾಗಿ ತಾಮ್ರಗೌರಿಯಾದ, ಶಾಂಟ ರೌದ್ರ ಶಕ್ತಿ ಪರಮ್ಯದ ಅದ್ಭುತ ಕ್ಷೇತ್ರ, ದೇವಾನುದೇವತೆಗಳೆಲ್ಲರಿಗೆ ಆಲಯಗಳನ್ನೊದಗಿಸಿದ ಜಗತ್ತಿನ ಏಕೈಕ ದೇವಾಲಯಗಳ ನಗರಿ, ಸುತ್ತ ವಿಶಾಲವಾಗಿ ಹರಡಿರುವ ಸಹ್ಯಪರ್ವತದ ಪ್ರತಿ ನೀರ ಹನಿಯಲ್ಲೂ ಕೋಟಿ ಕೋಟಿ ತೀರ್ಥಗಳನ್ನು ಸಮ್ಮಿಳಿತಗೊಳಿಸಿಕೊಂಡ ವಾಸ್ತವ ತೀರ್ಥಕ್ಷೇತ್ರ, ಸಮುದ್ರರಾಜನ ಓಂಕಾರ ಧ್ವನಿಯನ್ನು ಭೌತಿಕವಾಗಿಯೂ ಅನಾವರಣಗೊಳಿಸಿಕೊಂಡ ವಿಶ್ವದೊಂದು ಅಚ್ಚರಿಯ ತಾಣ, ಸಹಸ್ರಸಹಸ್ರ ಸಂವತ್ಸರಗಳಿಂದ ಸನಾತನ ಭಾರತದ ಸರ್ವವಿದ್ಯೆಕಲೆಗಳಾ ನರ್ತನ ಭೂಮಿ, ಲೆಕ್ಕವಿರಿಸಲಾಗದಷ್ಟು ಶತಮಾನಗಳ ಕಾಲದಿಂದ ಅನುಸ್ಯೂತವಾಗಿ ವೇದದುಂದುಭಿ ಮೊಳಗಿದ; ಮೊಳಗುತ್ತಿರುವ; ಮೊಳಗುತ್ತಲೇ ಇರುವ ವೇದ ಮಂಗಲ ಭೂಮಿ, ಪರಶಿವಮ ಪರಮಾವತಾರ ಶ್ರೀಶಂಕರಭಗವತ್ಪಾದರ ಪಾದಸ್ಪರ್ಶದಿಂದ ಪುನೀತಗೊಂಡ, ಪಾವನ ಪೀಠವೊಂದರ ಆರಂಭ ಮಂಗಳಕ್ಕೂ ಎಡೆಯಾದ ಪೂತಭೂಮಿ, ದಿವಿಯ ಗಂಗೆ ಭುವಿಯ ಗಂಗೆಯಾಗಲು ಭುವಿಯ ಗಂಗೆ ಭವಿಗಳ ಭವವನ್ನು ನಾಶಮಾಡುವಂತಾಗಲು ಹಿನ್ನಲೆಯಾದ ರಾಜಭಗೀರಥನ ಭಗೀರಥ ತಪಸ್ಸಿಗೆ ಒಡಲಿತ್ತ ತಾಣ, ಮಾನವ ಜನಾಂಗದ ತ್ರಿಕಾಲಾಬಾಧಿತ ಆದರ್ಶವನ್ನು ಭುವಿಗಿಳಿಸಲೆಂದೇ ನಡೆದಂತಿರುವ ರಾಮಾಯಣದ ಪರಮಾದರ್ಶಮೂರ್ತಿ ಪರಮೇಶ್ವರನ ಇನ್ನೊಂದು ಅವತಾರ ಆಂಜನೇಯನ ಜನ್ಮಭೂಮಿ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ನೆಲೆನಿಂತ ಮಹಾಬಲ ಪರಶಿವನ ಜಗನ್ಮಂಗಲಕರವಾದ ಪರಮಾದ್ಭುತ ಮಹಿಮೆಯನ್ನು ವಿಶ್ವದ ಚರಾಚರಗಳೆಲ್ಲದರ ಒಳಿತಿಗಾಗಿ, ಪಸರಿಸುವದಕ್ಕಾಗಿ ಪರಿಶುದ್ಧ ಪರಮಸುಂದರ ಪರಮಾಪ್ತರೂಪದಲ್ಲಿ ಶ್ರೀಕ್ಷೇತ್ರ ಗೋಕರ್ಣದ ಪರಿಪೂರ್ಣ ಅಭ್ಯುತ್ಥಾನಕ್ಕಾಗಿ ಮಹಾಸಂಕಲ್ಪಕ್ಕೆ ಬದ್ಧನಾಗುತ್ತೇನೆ.
ಲಕ್ಷ್ಮೀನಾರಾಯಣ ಹೆಗಡೆ ಕಲಗಾರು

ಗಂಟೆ ಹತ್ತಾದರೂ ಏಳದ ಮಾತೆಯರು


ಗಂಟೆ ಹತ್ತಾದರೂ ಏಳದ ಮಾತೆಯರು



Comments:
At 15 September, 2008 , malini said...
adbutta karyakrama. virodigalige ramabana...

At 15 September, 2008 , prasad said...
abbaradindale virodha muchchihakuva sadhane! electronic midia vannu samarthavagi balasikollalagide. good. matada sadasyarige karchu vechchada lekka kodaluu idu balakeyagali....

At 16 September, 2008 , ಮಥನಮ್ said...
ದೂಸರಾ ಮತೇ ಇಲ್ಲ, ಇನ್ನು ಯಾರಿಗೂ ಗೋಕರ್ಣದ ಕುರಿತು ಹಿತ್ತಾಳೆ ಕರ್ಣ ಆಗಬೇಕಾಗಿಲ್ಲ !!

ಗೋಕರ್ಣ ಪುನರುತ್ಥಾನ ಸಂಕಲ್ಪ ಸಮಾರಂಭ






ಗೋಕರ್ಣ :ಭದ್ರಕಾಳಿ ಕಾಲೇಜು ಮೈದಾನದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಪುನರುತ್ಥಾನಕ್ಕೆ ಯೋಗಿವರೇಣ್ಯರ ಸಮ್ಮುಖ ಸುಮಾರು ೬೦ರಿಂದ ೭೦ ಸಾವಿರಕ್ಕೂ ಹೆಚ್ಚಿನ ಭಕ್ತರು ಸೋಮವಾರ ಸಂಜೆ ಪುನರುತ್ಥಾನ ಮಹಾ ಸಂಕಲ್ಪದ ಹೆಜ್ಜೆ ಹಾಕಿದರು. ಭದ್ರಕಾಳಿ ದೇವಸ್ಥಾನದಿಂದ ಸಂಜೆ ೫ಕ್ಕೆ ಆರಂಭವಾದ ಮೆರವಣಿಗೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮೆರವಣಿಗೆಯು ಮಹಾಬಲೇಶ್ವರ ದೇವಸ್ಥಾನದವರೆಗೂ ಸಾಗಿತು. ಜಾನಪದ ಕಲೆಗಳ ಮೆರಗು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಆಸೀನರಾಗಿದ್ದ ‘ಮಹಾನಂದಿ’ ರಥವನ್ನು ಮೆರವಣಿಗೆಯುದ್ದಕ್ಕೂ ಕೊಂಡೊಯ್ಯಲಾಯಿತು. ಕೇರಳದ ಚಂಡೆವಾದನ, ಡೊಳ್ಳುಕುಣಿತ, ಸುಗ್ಗಿ ಕುಣಿತ, ವಾದ್ಯಮೇಳ ಸೇರಿದಂತೆ ಕರಾವಳಿ ಮತ್ತು ಉತ್ತರ ಕರ್ನಾಟಕದ ವೈಶಿಷ್ಟ್ಯ ಬಿಂಬಿಸುವ ಅನೇಕ ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಕೇರಳ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಿಂದಲೂ ನೂರಾರು ವಾಹನಗಳಲ್ಲಿ ಭಕ್ತರು ಆಗಮಿಸಿದ್ದರು. ಭರವಸೆ ನೂರಾರು: ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಹಾಗೂ ಪರಿವಾರ ದೇವತೆಗಳನ್ನು ರಾಜ್ಯ ಸರಕಾರ ಶ್ರೀ ರಾಮಚಂದ್ರಾಪುರ ಮಠಕ್ಕೆ ವಹಿಸಿದ ಬಳಿಕ ನಡೆದ ಈ ಮೊದಲ ಕಾರ್ಯಕ್ರಮ ಭಕ್ತರಲ್ಲಿ ಕ್ಷೇತ್ರ ಪುನರುತ್ಥಾನದ ಭರವಸೆ ಮೂಡಿಸಿತು. ಗೋಕರ್ಣ ಮುಂದೆ ಧಾರ್ಮಿಕ ಮತ್ತು ಪ್ರವಾಸೋದ್ಯಮದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲಿದೆ. ಶ್ರೀ ಕ್ಷೇತ್ರಕ್ಕೆ ಬಂದವರಿಗೆ ಶಾಂತಿ-ಸಮಾಧಾನ ಸಿಗಲಿದೆ. ಗೋಕರ್ಣ ಎಂದರೆ ಕೇವಲ ಬೀಚ್ ಅಥವಾ ವಿಕೃತಿಯ ತಾಣವಲ್ಲ. ಆತ್ಮಲಿಂಗ ಇರುವ ಗೋಕರ್ಣ, ಮಹಾಬಲೇಶ್ವರನ ಸನ್ನಿಧಾನ ಎಂದೇ ಆಗಬೇಕು. ಈ ಆಶಯದಿಂದಲೇ ಪುನರುತ್ಥಾನ ಮಹಾಸಂಕಲ್ಪ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಬೀದರ್‌ನಿಂದ ಬಂದ ಭಕ್ತರೊಬ್ಬರು ಸೇರಿದಂತೆ ಅನೇಕರು ಹೇಳಿದರು. ಕಾರ್ಯಕ್ರಮ ಎಲ್ಲ ರೀತಿಯಿಂದಲೂ ಸುವ್ಯವಸ್ಥಿತವಾಗಿತ್ತು. ಗೋಕರ್ಣ ಕ್ಷೇತ್ರಾದ್ಯಂತ ತಳಿರು ತೋರಣಗಳ ಶೃಂಗಾರ, ಸ್ವಾಗತಕ್ಕೆ ವಿದ್ಯುದ್ದೀಪಗಳ ಅಲಂಕಾರ. ಮನೆಗಳ ಮುಂದೆ ರಂಗೋಲಿ ಕಂಗೊಳಿಸುತ್ತಿತ್ತು. ಇಡೀ ನಗರವೇ ಸ್ವಚ್ಛ , ಸುಂದgವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಹವ್ಯಕರು, ನಾಮಧಾರಿಗಳು, ಗೌಡ ಸಾರಸ್ವತರು, ಸಾರಸ್ವತರು, ದೈವಜ್ಞರು, ಹಾಲಕ್ಕಿಗಳು, ಮೀನುಗಾರರು, ಮಡಿವಾಳರು, ಪಟಗಾರರು, ಪರಿಶಿಷ್ಟರು ಸೇರಿದಂತೆ ಎಲ್ಲ ಸಮುದಾಯಗಳಿಂದಲೂ ಜನ ಆಗಮಿಸಿದ್ದರು. ಎಲ್ಲರೂ ಗೋಕರ್ಣ ಧಾರ್ಮಿಕವಾಗಿಯೇ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಅಧ್ಯಾತ್ಮದ ಮಾರ್ಗದರ್ಶನ ಮಾಡುವಂತಾಗಬೇಕು. ಗೋಕರ್ಣ ದಕ್ಷಿಣ ಕಾಶಿಯಾಗಬೇಕು ಎಂಬ ಭರವಸೆ ಹಾಗೂ ಆಶಯ ವ್ಯಕ್ತಪಡಿಸಿದರು. ಪೇಜಾವರ ಶ್ರೀ ಪೂಜೆ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಮಹಾಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಗೋಪಾಲನಾಥ ಸ್ವಾಮೀಜಿ, ರಮಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
-ರಘುಪತಿ ಯಾಜಿ

ದ್ವಜಾರೋಹಣ ಕಾರ್ಯಕ್ರಮ




ಗೋಕರ್ಣದಲ್ಲಿನ ಮಹಾಸಂಕಲ್ಪಕ್ಕೆ ದ್ವಜಾರೋಹಣ ಕಾರ್ಯಕ್ರಮ ಏಳು ಗಂಟೆಗೆ ಸರಿಯಾಗಿ ನಡೆಯಿತು. ಶ್ರೀ ಪೇಜಾವರ ಶ್ರೀ, ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿ ಮತ್ತು ಇನ್ನಿತರ ಗಣ್ಯರು ಧ್ವಜಾರೋಹಣಕ್ಕೆ ಸಾಕ್ಷೀಭೂತರಾದರು. ನೆರೆದಿದ್ದ ಸರಿ ಸುಮಾರು ಇಪ್ಪತ್ತೈದು ಸಹಸ್ರ ಜನ ಜೈ ಕಾರ ಹಾಕಿದರು .

ಸಮುದ್ರ ತೀರದತ್ತ ಜನಸಾಗರ


ಶ್ರೀಗಳ ಸೀಮೋಲ್ಲಂಘನೆಯ ಸೋಮವಾರ ಸಮುದ್ರ ತೀರದ ಕ್ಷೇತ್ರ ಗೋಕರ್ಣಕ್ಕೆ ಜನಸಾಗರ. ಶ್ರೀಗಳ ಪುರಪ್ರವೇಶದೊಂದಿಗೆ ಭರ್ಜರಿ ವರುಣನೂ ಆಗಮಿಸಿದ. ಆದರೆ ಸಾಗರದತ್ತ ಮುಖಮಾಡಿ ಗುರುವಿನ ಹಿಂದೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರಿಗೆ ಮಳೆ ಹನಿ ಪುಷ್ಪವೃಷ್ಟಿಯಂತೆ ಅನಿಸಿರಬೇಕು. ಯಾರೂ ಚದುರಲಿಲ್ಲ ಬೆದರಲಿಲ್ಲ. ಉಘೇ ಉಘೇ ಘೋಷದೊಂದಿಗೆ ಜನಸಾಗರ ಕ್ಷೇತ್ರದತ್ತ ಮುಖ ಮಾಡಿದ್ದರು. ಆಕಾಶದಲ್ಲಿ ಎಲ್ಲಿ ನೋಡಿದರಲ್ಲಿ ಮೇಘಗಳು, ಭೂಮಿಯಲ್ಲಿ ಎಲ್ಲಿ ನೋಡಿದರಲ್ಲಿ ಜನಗಳು. ಈ ಸುಮಧುರ ಕ್ಷಣದ ಒಂದು ಝಲಕ್ ನಿಮಗಾಗಿ
ನುಡಿ+ಚಿತ್ರ: ಆರ್ಶ

ಮಠದಿಂದ ಹಾಲಕ್ಕಿ ಜನಾಂಗದಲ್ಲಿ ಮಂದಹಾಸ


ಗೋಕರ್ಣದ ಆಸುಪಾಸಿನ ಹಾಲಕ್ಕಿ ಜನಾಂಗದ ಮಹಿಳೆಯರಲ್ಲಿ ಸಡಗರ ಪುಟಿಯುತ್ತಿತ್ತು.ಸುತ್ತ ಹಲವು ಹಳ್ಳಿಗಳಿಂದ ಗೋಕರ್ಣಕ್ಕೆ ಬಂದ ಅವರು ತಮ್ಮ ಕುಲಗುರು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಗೋಕರ್ಣ ಪುನರುತ್ಥಾನದ ಮಹಾ ಸಂಕಲ್ಪ ಕೈಗೊಳ್ಳಲು ಆಗಮಿಸುತ್ತಿರುವ ಗಳಿಗೆಗಾಗಿ ಅವರು ಕಾತರದಿಂದ ಬೆಳೆಗಿನಿಂದಲೇ ಕಾಯುತ್ತಿದ್ದರು. ಪುರಪ್ರವೇಶದ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಂಗೋಲಿ ಹಾಕಿ ತೋರಣ ಕಟ್ಟಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದರು. ಈ ಗುರು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಾಲಕ್ಕಿ ಹೆಂಗಸರು ತಮ್ಮ ಪಟ್ಟಾಂಗದ ಸಮಯವನ್ನು "ಭಟ್ರದಿಕ್ರು ಅವರವ್ರೊಳಗೆ ದುಡ್ಡು ತಿಂತೀರು. ಈಗ ಗುರ್ಗುಳ ಹತ್ರ ದೇತಾನ ಬಂದಿದ್ದು ಚಲೋ ಆತು" ಎಂದು ನೆಲ ಕಾಣುತ್ತಿದ್ದ ಹಾಗೂ ಕಾಣಿಸದಿದ್ದ ಹೆಣ್ಣು ಮಕ್ಕಳನ್ನು ಸುತ್ತ ಕೂರಿಸಿಕೊಂಡು ಎಪ್ಪತ್ತೈದು ವರ್ಷದ ಗಂಗಮ್ಮ ಎಂಬ ಹಾಲಕ್ಕಿ ಮಹಿಳೆ ಭಟ್ರಗಳನ್ನು ಆಡಿಕೊಳ್ಳುತ್ತಿದ್ದುದು ಸ್ವಾರಸ್ಯಕರವಾಗಿತ್ತು.
ನುಡಿ+ಚಿತ್ರ: ದತ್ತಿ ಹೆಗಡೆ
ಕಾಮೆಂಟ್ ಬರೆಯಿರಿ ಹಾಗೆಯೇ ಬ್ಲಾಗಿಗೂ ಬರೆಯಿರಿ. media4cow@gmail.com

G0ಕರ್ಣ COME ಮಠ





  • ಗೋಕರ್ಣದಲ್ಲಿ ಇಂದಿನ ಬೆಳಗು ಎಂದಿನಂತಿರಲಿಲ್ಲ. ಇಲ್ಲಿ ಸ್ಥಾಪಿತವಾಗಿದ್ದ ಶಂಕರಾಚಾರ್ಯ ಪೀಠದ ನಿತ್ಯ ದರ್ಶನದ
    ಮಹಾಬಲೇಶ್ವರ ದೇವಸನ್ನಿಧಿ ಬಹುದೀರ್ಘಕಾಲಾನಂತರ ಶ್ರೀ ಮಠದ ಸುಪರ್ದಿಗೆ ಬಂದು ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಕ್ಷೇತ್ರ ಪುನರುತ್ಥಾನದ ಮಹಾಸಂಕಲ್ಪದ ಗಳಿಗೆಗಾಗಿ ಜನ ಸಾಗರ ಕಾತರದಿಂದ ಕಾಯುತ್ತಿತ್ತು.
    ರಥಬೀದಿ ತಳಿರು ತೋರಣಗಳಿಂದ, ವಿದ್ಯುತ್ ದೀಪಾಲಂಕಾರಗಳಿಂದ ಸಡಗರಗೊಂಡಿತ್ತು. ಬೀದಿಯ ಮನೆಮನೆಯವರು ತಮ್ಮ ನಾಮಾಂಕಿತಗೊಂಡ ಮಹಾಸಂಕಲ್ಪದ ಕಾರ್ಯಕ್ಕಾಗಿ ಆಗಮಿಸುತ್ತಿರುವ ಶ್ರೀಗಳ ಸ್ವಾಗತ ಕಮಾನು ರಚಿಸಿ ಸರ್ಕಾರದ ಹಸ್ತಾಂತರ ನಿರ್ಧಾರವನ್ನು ಪುಷ್ಠಿಕರಿಸಿದಂತಿತ್ತು. ಇವರ ಅಮಿತ ಉತ್ಸಾಹದಲ್ಲಿ ಹಸ್ತಾಂತರದ ಮೊದಲ ದಿನದಲ್ಲಿ ಕಂಡ ಅತೃಪ್ತರ ದನಿ ಮಾಯವಾಗಿತ್ತು. ಪ್ರತ್ಯೇಕ ವೇದಿಕೆಯಲ್ಲಿ ವಿರೋಧಿ ಸಮಾವೇಶ ನಡೆಸಿ ಶ್ರೀ ರಾಮಚಂದ್ರಾಪುರ ಮಠಕ್ಕೆ ಮಹಾಬಲೇಶ್ವರ ದೇವಸ್ಥಾನವನ್ನು ಹಸ್ತಾಂತರಿಸಿದ ಸರ್ಕಾರದ ನಿರ್ಧಾರವನ್ನು ಚೂರು ಚೂರುಗೊಳಿಸುವ ಕೆಚ್ಚೆದೆಯ ಮಾತನ್ನಾಡಿದ್ದ ಉತ್ತರಕುಮಾರರು ಗೋಕರ್ಣದ ಪರಿಧಿಯಿಂದಲೇ ಪಲಾಯನಗೈದಿದ್ದು ಸ್ಥಳೀಯರ ಮೂದಲಿಕೆಯ ಮಾತುಗಳಿಗೆ ಅವಕಾಶ ಒದಗಿಸಿತ್ತು.
    ಬೌದಾಯನೀಯರ ನಿತ್ಯಸಂಕಲ್ಪದ ಗೋಕರ್ಣಮಂಡಲ ಗೋರಾಷ್ಟ್ರ ದೇಶದ ಸಹಸ್ರ ಸಹಸ್ರ ಹೆಜ್ಜೆಗಳು ಮಹಾ ಸಂಕಲ್ಪದ ದಿವ್ಯ ಧ್ವನಿಗೆ ದನಿಗೂಡಿಸಲು ಪುನರುತ್ಥಾನದ ಸಂಕಲ್ಪದ ಸಿದ್ಧಿಗೆ ಕರ ಜೋಡಿಸಲು ಗೋಕರ್ಣದತ್ತ ಪಯಣಿಸಿ ಮಧ್ಯಾಹ್ನದ ಹೊತ್ತಿಗೆ ಜನ ಸಂದಣಿಯಾಗಿದ್ದವು.
    ನುಡಿಚಿತ್ರ: ಕಲಗಾರು ಲಕ್ಷ್ಮೀನಾರಾಯಣ ಹೆಗಡೆ.
    ಈ ಬ್ಲಾಗಿಗೆ ನೀವೂ ಬರೆಯಬೇಕೆ..? ತಕ್ಷಣ ಬರಹ ಯೂನಿಕೋಡ ನಲ್ಲಿ ವರ್ಡಪ್ಯಾಡ್ ನಲ್ಲಿ ಟೈಪ್ ಮಾಡಿ ಕಳುಹಿಸಿ. media4cow@gmail.com

ಸ್ವಚ್ಚ ಊಟ ಸ್ವಚ್ಚ ಪರಿಸರ ನಮ್ಮೆಲ್ಲರ ನೀತಿಯಾಗಲಿ




ಊಟದ ವ್ಯವಸ್ಥೆ ಯಿರುವ ಸಭೆ ಸಮಾರಂಭಗಳಲ್ಲಿ ಸಾರ್ವಜನಿಕರು ಊಟ ಮಾಡಿದಷ್ಟೇ ಅನ್ನ ಚರಂಡಿ ಪಾಲಾಗಿ ಹೋಗುತ್ತದೆ. ಜನರು ಅರ್ದಂಬರ್ದ ಊಟ ಮಾಡಿಯೋ ಅಥವಾ ಹೆಚ್ಚು ಅನ್ನ ಹಾಕಿಸಿಕೊಂಡು ತಟ್ಟೆಯಲ್ಲಿಯೇ ಉಳಿಸಿ ಚೆಲ್ಲಿಬಿಡುತ್ತಾರೆ. ಆದರೆ ಇಲ್ಲಿನ ಸಮಾರಂಭದಲ್ಲಿ ಹಾಗಲ್ಲ ಹೆಚ್ಚಿನ ಊಟವನ್ನು ಕೈ ತೊಳೆಯುವ ಜಾಗದಲ್ಲಿ ಪ್ರತ್ಯೇಕವಾಗಿಟ್ಟ ದೊಡ್ದ ಬಟ್ಟಲಿನಲ್ಲಿ ಹಾಕಿಟ್ಟು ನಂತರ ಅದನ್ನು ಸಮರ್ಪಕವಾಗಿ ವಿಲೆವಾರಿ ಮಾಡಲಾಗುತ್ತದೆ. ಹೀಗೆ ಮಾಡದಿದ್ದಲ್ಲಿ ಸಮಾರಂಭದ ಮಾರನೇ ದಿನ ಆ ಜಾಗ ಪರಿಸರ ಗಬ್ಬೆದ್ದು ಹೋಗುತ್ತದೆ. ಇಪ್ಪತ್ತು ಸಾವಿರ ಜನರು ಊಟಮಾಡುವ ಜಾಗವನ್ನು ಹೀಗೆ ಸಣ್ಣದೊಂದು ಉಪಾಯದ ಮೂಲಕ ಪರಿಸರದ ಶುಚಿತ್ವ ಕಾಪಾಡಬಲ್ಲದು. ಇದು ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣದ ಸಮಾರಂಭದಲ್ಲಿ ಮಾಡಿದ ಸುಲಭೋಪಾಯ. ನಿರ್ವಾಹಕರ ಕ್ರಮ ಜನಮನ್ನಣೆ ಗಳಿಸಿತು.
ನುಡಿಚಿತ್ರ: ಪಿ . ಭಾರತೀಶ ಮೀಡಿಯಾ ಸೆಂಟರ್ ಬೆಂಗಳೂರು.
ನೀವೂ ಈ ಬ್ಲಾಗಿಗೆ ಬರೆಯಬಹುದು, ಅವಾಚ್ಯ ಶಬ್ಧವಿಲ್ಲದಿದ್ದರೆ ಎಲ್ಲವೂ ಪ್ರಕಟನಾಯೋಗ್ಯ......-ನಿರ್ವಾಹಕ media4cow

ಮೆರವಣಿಗೆಯ ರಥ


ಮೆರವಣಿಗೆಯ ರಥ

ಗೋಕರ್ಣದ ರಸ್ತೆಗಳಲ್ಲಿ ಮೆರವಣಿಗೆಗೆ ಸಜ್ಜಾಗಿ ನಿಂತಿರುವ ಮಹಾನಂದಿ ರಥ

ಆತ್ಮಲಿಂಗ ವೇದಿಕೆ ಸಂಪೂರ್ಣ ಸುರಕ್ಷಿತ.


ಆತ್ಮಲಿಂಗ ವೇದಿಕೆ ಸಂಪೂರ್ಣ ಸುರಕ್ಷಿತ.

ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದ ವೇದಿಕೆ ಸಂಪೂರ್ಣ ಸುರಕ್ಷತೆಯನ್ನು ಪರೀಕ್ಷಿಸಿ ಓ ಕೆ ಎಂದ ಪೋಲೀಸ್ ಡಾಗ್ ..

ಶ್ರೀಕ್ಷೇತ್ರ ಗೋಕರ್ಣ ಪುನರುಥ್ಹಾನ ಮಹಾ ಸಂಕಲ್ಪ ಸಭೆ



ಶ್ರೀಕ್ಷೇತ್ರ ಗೋಕರ್ಣ ಪುನರುಥ್ಹಾನ ಮಹಾ ಸಂಕಲ್ಪ ಸಭೆ

ರಂಗೋಲಿಯ ಮೂಲಕ ವೇದಿಕೆಯ ಮುಂಬಾಗಕ್ಕೆ ಕಳೆತರುತ್ತಿರುವ ಹೆಂಗಳೆಯರು. ಶ್ರೀಮತಿ ಮಂಗಳಗೌರಿ, ಶ್ರೀಮತಿ ಕಲ್ಪನಾ, ಶ್ರೀಮತಿ ಶಾಂಭವಿ

9/15/08
2:39 PM





ದಿನಾಂಕ ೧೫-೦೯-೨೦೦೮ ಗೋಕರ್ಣದ ಆತ್ಮಲಿಂಗ ವೇದಿಕೆಯಲ್ಲಿ ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ನಡೆಯುತ್ತಿದೆ. ಸಾಗರ ತಾಲ್ಲೂಕಿನ ಸಿದ್ದನಕೈ ಅಶೋಕ ಶ್ರೀಗಳ ಚಿತ್ರ ರಚನೆಯಲ್ಲಿ ತಲ್ಲೀನರಾಗಿರುವುದು.