Saturday, October 4, 2008

ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ಹೊರಬೇಕು


ಗೋಕರ್ಣ, ಅ.೧ - ಕ್ಷೇತ್ರದ ಉನ್ನತೀಕರಣಕ್ಕೆ ಒಂದೊಂದು ಸಮಾಜದವರು ಒಂದೊಂದು ಜವಾಬ್ದಾರಿಯನ್ನು ಹೊರಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

ನವರಾತ್ರಿ ಎರಡನೇ ದಿನವಾದ ಇಂದು ಅಂಬಿಗ, ಹರಿಕಂತ್ರ, ಗಾಬಿಗ ಮತ್ತು ಖಾರ್ವಿ ಸಮಾಜ ಬಾಂಧವರು ಒಟ್ಟಾಗಿ ಆತ್ಮಲಿಂಗಾರ್ಚನೆ ಹಾಗೂ ನಾಗಾಭರಣ ಪೂಜೆ ನೆರವೇರಿಸಿದರು.

ಆ ಸಂದರ್ಭದಲ್ಲಿ ಅನುಗ್ರಹ ಸಂದೇಶವನ್ನಿತ್ತ ಶ್ರೀಗಳು ನೆರೆದವರೆಲ್ಲರೂ ಕಡಲಿನ ಮಕ್ಕಳು. ದೇವರಿಗೂ ಗುರುಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ಭಾವನೆ ಅಂತೆಯೇ ಮುಂದುವರೆಯಲಿ ಎಂದು ಹಾರೈಸಿದರು.

ನಾಲ್ಕೂ ಸಮಾಜದ ಸುಮಾರು ೫೦೦ ಮಂದಿ ಭಾಗವಹಿಸಿದ್ದರು. ಮುಖಂಡರಾದ ಸದಾನಂದ ಹರಿಕಂತ್ರ, ಸುಬ್ರಾಯ ಹರಿಕಂತ್ರ, ಡಿ.ಎಸ್. ಜೋಡಣಕರ್, ಲಕ್ಷ್ಮಣ ಅಂಬಿಗ, ವಸಂತ ಖಾರ್ವಿ ಮೊದಲಾದವರು ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಕಡತೋಕ ಶಂಭು ಭಟ್ಟರು ಸಭೆಯನ್ನು ನಿರ್ವಹಿಸಿದರು.

No comments: