Saturday, October 11, 2008

ಸ್ವಾಮೀಜಿಗಳೇ ನೀವು ಎಂಥವರನ್ನು ಬೆಂಬಲಿಸುತ್ತಿದ್ದೀರಿ ?

ಗೋಕರ್ಣದಲ್ಲಿ ಕ್ರಿಮಿನಲ್ಗಳದ್ದೇ ಸಾಮ್ರಾಜ್ಯ ಸ್ಥಾಪನೆಯಾಗಿದೆ ಎಂಬುದು ಹೊಸ ಸಂಗತಿಯೇನಲ್ಲ. ಶ್ರೀ ರಾಮಚಂದ್ರಾಪುರ ಮಠಕ್ಕೆ ಮಹಾಬಲೇಶ್ವರ ದೇಗುಲವನ್ನು ವಹಿಸಿಕೊಟ್ಟಿರುವುದಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿರುವವರೂ ಇವರೇ. ತಮ್ಮ ದಂಧೆಗಳಿಗೆ ಇನ್ನು ಅವಕಾಶವಾಗುವುದಿಲ್ಲ ಎಂಬುದೇ ಇಂಥ ಆಕ್ರೋಶಕ್ಕೆ ಕಾರಣ ಎಂಬುದೂ ಗುಟ್ಟಾಗಿ ಉಳಿದಿಲ್ಲ.


ಕಳೆದ ಗುರುವಾರ ನಡೆದ ಘಟನೆಯೊಂದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಒದಗಿಸುತ್ತದೆ. ಮಾತ್ರವಲ್ಲ ವಿದ್ರೋಹಿಗಳ ಅಂಥ ಮನೋಭಾವ, ಹತಾಶೆ ಯಾವ ಮಟ್ಟಕ್ಕೂ ಇಳಿಯಲು ಪ್ರೇರೇಪಿಸುತ್ತಿದೆ ಎಂಬುದು ಸಮಾಜವನ್ನು ವಿಭ್ರಮೆಗೆ ದೂಡುತ್ತದೆ. ಅಂದು ಗೋಕರ್ಣದಲ್ಲಿ ಮರುದಿನದ (ಶುಕ್ರವಾರ) ‘ಸಾವಿರದ ಗೋದಾನ’ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಎಲ್ಲವೂ ತಣ್ಣಗಾಗಿದೆ, ಸುಸೂತ್ರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯುತ್ತಿದೆ. ಗೋಕರ್ಣ ಕೊನೆಗೂ ತನ್ನ ಐತಿಹಾಸಿಕ ಪಾವಿತ್ರ್ಯಕ್ಕೆ ಮರಳುತ್ತಿದೆ ಎಂದು ನಾಡಿನ ಜನತೆ ನಿಟ್ಟುಸಿರು ಬಿಡುತ್ತಿರುವಾಗಲೇ ನಡೆಯಬಾರದ್ದು ನಡದು ಹೋಗುತ್ತಿತ್ತು. ಅಂದು ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರೊಬ್ಬರ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನಿಸಿದರು, ಅದೂ ಭದ್ರಕಾಳಿ ಅಮ್ಮನವರ ದೇಗುಲದೆದುರೇ ಎಂದರೆ ವಿರೋದಿಗಳ ಆಂತರ್ಯದಲ್ಲಿ ಅಡಗಿರುವ ಪೈಶಾಚಿಕ ತನ ಎಂಥದ್ದೆಂಬುದನ್ನು ಊಹಿಸಬಹುದು.


ಶ್ರೀ ಕ್ಷೇತ್ರ ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟಿರುವುದನ್ನು ಸಹಿಸಲಾಗದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರತಿಭಟನೆಯ ಹೆಸರಿನಲ್ಲಿ ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ಉತ್ತರ ಕನ್ನಡ ಜಿಲ್ಲೆ ಸಭ್ಯ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಇಂಥ ದೌರ್ಜನ್ಯ ಇದೇ ಮೊದಲಲ್ಲ. ಎಲ್ಲ ರೀತಿಯ ಅಸ್ತ್ರಗಳನ್ನೂ ಪ್ರಯೋಗಿಸಿ ಏನಾದರೂ ಮಾಡಿ ಮಠದ ಮಂದಿಯಬನ್ನು ಕೆರಳಿಸಬೇಕು, ಅವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಬೇಕು. ಮಠದ ಶಿಷ್ಯರು ಪ್ರತಿದಾಳಿಗಿಳಿಯಬೇಕೆಂಬ ಹುನ್ನಾರದಲ್ಲಿ ಯುದ್ಧಾಹ್ವಾನ ಆರಂಭದ ದಿನದಿಂದಲೂ ಬರುತ್ತಲೇ ಇದೆ.


ದೇಗುಲ ಹಸ್ತಾಂತರದ ದಿನವೇ, ಶ್ರೀ ಮಠದ ಅತ್ಯಂತ ಗೌರವಾರ್ಹ ಮೂವರು ವ್ಯಕ್ತಿಗಳ ಮೇಲೆ ‘ಸೋ ಕಾಲ್ಡ್ ಪಂಡಿತರು’ ಎನಿಸಿಕೊಂಡವರು ಹಲ್ಲೆ ನಡೆಸಿದ್ದು, ಆ ಮೂಲಕ ತಮ್ಮ ಚಾರಿತ್ರ್ಯ ಪ್ರದರ್ಶಿಸಿದ್ದು ಗೊತ್ತೇ ಇದೆ. ಅಂದು ಗರ್ಭ ಗುಡಿಯಲ್ಲೇ ನಿಂತು ಎಂಥೆಂಥಾ ಭಾಷೆ ಬಳಸಲಾಯಿತು ಎಂದರೆ ಬಹುಶಃ ಅಸ್ತಿತ್ವದಲ್ಲಿರುವ ಯಾವ ನಿಘಂಟಿನಲ್ಲೂ ಅದಕ್ಕೆ ಅರ್ಥ ಹುಡುಕಲು ಸಾಧ್ಯವಿಲ್ಲ. ಮಾತ್ರವಲ್ಲ ಅವರೆಲ್ಲರೂ ಯಾವ ಸ್ಥಿತಿಯಲ್ಲಿದ್ದರು, ಮಹಾಬಲೇಶ್ವರನ ಪೂಜೆ ಮಾಡುತ್ತಿರುವ ಆ ಮಂದಿಯ ಬಾಯಿಯಿಂದ ಎಂಥ ‘ಕಮಟು ವಾಸನೆ’ ಹೊರಹೊಮ್ಮುತ್ತಿತ್ತು ಎಂಬುದು ತಿಳಿದರೆ ಈ ನಾಡಿನ ಸಮಸ್ತ ಜನ ಕೋಟಿಯೇ ಅವರನ್ನು ಬೆನ್ನತ್ತಿಕೊಂಡು ಹೋಗಿ ಗಡಿಪಾರು ಮಾಡಿ ಬರುತ್ತಾರೆ. ಆನಂತರವೂ ಅಶ್ಲೀಲ ವಾಗ್ದಾಳಿ ನಡೆಯುತ್ತಲೇ ಇದೆ. ಇದು ಕೇವಲ ಮಠದ ಶಿಷ್ಯರ ಮೇಲಷ್ಟೇ ಅಲ್ಲ. ಸ್ವತಃ ಪೂಜ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರನ್ನು ಅವರ ಸ್ಥಾನ ಗೌರವ ಮರೆತು ವಿರೋ ಗುಂಪಿನ ‘ಪಂಡಿತ ವರ್ಗ’ ಅತ್ಯಂತ ಕೆಳಮಟ್ಟದಲ್ಲಿ ಟೀಕಿಸಿದೆ, ಟೀಕಿಸುತ್ತಿದೆ ಎಂದರೆ ಅವರ ಸಂಸ್ಕೃತಿ ಯಾವ ಮಟ್ಟದ್ದೆಂಬುದನ್ನು ಊಹಿಸಬಹುದು. ಇದೇನೂ ವಿಶೇಷವಲ್ಲ ಬಿಡಿ, ಅವರ ಬೆಂಬಲಕ್ಕೆ ನಿಂತಿರುವ, ಸ್ವತಃ ಮಾರ್ಗದರ್ಶನ ಮಾಡುತ್ತಿರುವ ಒಬ್ಬರು ಯತಿಗಳೇ ರಾಘವೇಶ್ವರರನ್ನು ‘ಕಲಿ’ ಎಂದು ಸಂಬೋಸಿದ್ದರೆ, ಅದೇ ವೇದಿಕೆಯಲ್ಲಿದ್ದ ಇನ್ನೊಬ್ಬ ‘ಯತಿವರೇಣ್ಯ’ ರಾವಣೇಶ್ವರ ಎಂದು ಮೂದಲಿಸಿಲ್ಲವೇ ? ಗುರುವಿನಂತೆ ಶಿಷ್ಯರು...!


ಆದರೆ ಹಲ್ಲೆ ನಡೆಸಿ, ಜೀವಂತ ದಹನಕ್ಕೂ ಮುಂದಾಗುತ್ತಾರೆ ಎಂಬ ನಿರೀಕ್ಷೆಯನ್ನು ಬಹುಶಃ ನಾಡಿನ ಪ್ರಜ್ಞಾವಂತರಾರೂ ಮಾಡಿರಲಿಕ್ಕಿಲ್ಲ. ವಿರೋಧ ಮಾಡಲಿ.ಅದಕ್ಕೊಂದು ವೇದಿಕೆ, ಮಾರ್ಗ, ರೀತಿ, ರಿವಾಜುಗಳಿವೆ. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕಾನೂನು, ನ್ಯಾಯಾಲಯಗಳು ಅದಕ್ಕೆಂದೇ ಇವೆ. ಈಗಾಗಲೇ ಅದರ ಮೊರೆಯನ್ನೂ ವಿರೋಧಿಗಳು ಹೊಕ್ಕಾಗಿದೆ. ಆದರೆ ನ್ಯಾಯ ತಮ್ಮ ಪರ ಇರಲು ಸಾಧ್ಯವೇ ಇಲ್ಲವೆಂಬುದನ್ನು ಚೆನ್ನಾಗಿ ಮನಗಂಡಿರುವ, ಮಾತ್ರವಲ್ಲ ಹೇಗೆ ಮಾಡಿದರೂ ಗೋಕರ್ಣದಲ್ಲಿನ್ನು ಅಭಿವೃದ್ಧಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ತಮ್ಮ ಅಕ್ರಮಗಳನ್ನು ಇನ್ನು ಬಹಳಷ್ಟು ದಿನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿರುವ ಮಂದಿ, ಮುಗ್ಧ ಕಾರ್ಯಕರ್ತರೊಬ್ಬರ ಕೊಲೆ ಯತ್ನಕ್ಕೆ ಮುಂದಾಗಿದ್ದು ಸ್ಪಷ್ಟ.


ಮಠದ ಪರ ಜನಸಂಘಟನೆ ಬಲಗೊಳ್ಳುತ್ತಿದ್ದಂತೇ ವಿಚಲಿತವಾದ ಈ ಗುಂಪು ಇಂತಹ ಕೃತ್ಯಕ್ಕೆ ಕೈ ಹಾಕಿ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಗಿದೆ. ಆದರೆ ಇದಕ್ಕೆ ಕಡಿವಾಣ ಹಾಕಲು ಜನ ಮತ್ತಷ್ಟು ಸಂಘಟಿತರಾಗಿದ್ದಾರೆ. ಈ ಕುಕೃತ್ಯ ಖಂಡಿಸಿ ಗುರುವಾರ ಸಂಜೆ ಸ್ಥಳೀಯ ಪೊಲೀಸ್ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಬಲ ಪ್ರದರ್ಶನ ನಡೆಸಿದ್ದಾರೆ. ಘಟನೆಗೆ ಸಂಬಂಸಿದಂತೆ ಈಗಾಗಲೇ ಪೊಲೀಸ್ ಮೊಕದ್ದಮೆ ದಾಖಲಾಗಿದೆ. ವಿರೋಧಿ ಗುಂಪಿನ ನಾಯಕ ರಾಜಗೋಪಾಲ ಎಂ. ಅಡಿ ಅವರನ್ನು ಪೊಲೀಸರು ಬಂಸಿದ್ದಾರೆ. ಹಲ್ಲೆಯ ಪ್ರಮುಖ ಆರೋಪಿಗಳಾದ ರವಿ ಎಂ. ಅಡಿ, ಮನು ನಾವಡ ಹಾಗೂ ಇನ್ನಿತರರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.


ವಿಷಯ ಅದಷ್ಟೇ ಅಲ್ಲ. ಗೋಕರ್ಣದ ಕೇವಲದಲ್ಲಿ ಕೇವಲರೆನಿಸಿಕೊಂಡವರು ಇಂಥ ಕೃತ್ಯಗಳನ್ನು ನಡೆಸುವುದು ವಿಶೇಷವೇ ಅಲ್ಲ. ದಿನ ಬೆಳಗಾದರೆ, ಗಾಂಜಾ, ಅಫೀಮುಗಳ ಕಳ್ಳಸಾಗಣೆ, ಹೆಂಡ ಸಾರಾಯಿಗಳ ಸಹವಾಸದಲ್ಲೇ ಮುಳುಗಿರುವ, ವಿದೇಶಿ ಹಿಪ್ಪಿಗಳ ನಡುವೆಯೇ ಒಡನಾಡುವ, ಅಲ್ಲಿನ ಪ್ರವಾಸಿಗರಿಗೆ ’ಎಲ್ಲವನ್ನೂ ’ ಪೂರೈಸಲೆಂದೇ ನಿಂತಿರುವ, ಆ ಮೂಲಕ ದೇವರ ಸನ್ನಿಯಲ್ಲಿ ಲಕ್ಷಾಂತರ ರೂ.ಗಳನ್ನು ಕೊಳ್ಳೆಹೊಡೆಯುತ್ತಿರುವ ಈ ಮಂದಿಯನ್ನೇ ತಲೆ ಮೇಲೆ ಹೊತ್ತುಕೊಂಡು ಮೆರೆಯುತ್ತಿರುವ ತಮ್ಮ ಪ್ರತಿಷ್ಠೆ, ಮಾತ್ಸರ್ಯಗಳಿಗೆ ಅವರನ್ನು ಬಳಸಿಕೊಳ್ಳುತ್ತಿರುವ ಪೂಜ್ಯ ಶೃಂಗೇರಿ ಶ್ರೀಗಳೇ, ಮಾನನೀಯ ಸ್ವರ್ಣವಲ್ಲೀ ಶ್ರೀಗಳೇ, ನಿಮ್ಮ ಸ್ಥಾನಕ್ಕೆ ಇದು ಎಂತಾದರೂ ಗೌರವ ತಂದುಕೊಟ್ಟೀತೆ ? ಈ ಕ್ಷಣದಲ್ಲಾದರೂ ಇಂಥ ವಿದ್ರೋಹಿಗಳನ್ನು ಕಟ್ಟಿಕೊಂಡು ಸಮರ ನಡೆಸುತ್ತೇವೆ ಎಂಬ ಭ್ರಮೆಗಳನ್ನು ತೊರೆಯಿರಿ. ಹಾಗಾದರೂ ಭಾರತೀಯ ಸತ್ಪರಂಪರೆಯ ಧರ್ಮ ಪೀಠಗಳ ಪೂಜನೀಯತೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯಿರಿ. ಅದಿಲ್ಲದಿದ್ದರೆ ಅವರ ಮಟ್ಟಕ್ಕೆ ತಮ್ಮನ್ನೂ ಇಳಿಸಿಬಿಡಲು ಇನ್ನು ಹೆಚ್ಚು ಕಾಲವಿಲ್ಲ. ಇದು ಎಲ್ಲ ಧರ್ಮ ಪೀಠಗಳೆದುರು ನನ್ನ ಕಳಕಳಿಯ, ಅಷ್ಟೇ ಪ್ರಾಮಾಣಿಕ ವಿನಂತಿ.


-ಶ್ರೀ ವತ್ಸ

7 comments:

prajavani said...

ಅವರವರ ಭಾವಕ್ಕೆ ಅವರವರ ಬಕುತಿಗೆ.

ಇದೇತರಹದ ಹಲ್ಲೆ ಅಕಸ್ಮಾತ್ ಮಠದ ಕಾರ್ಯಕರ್ತರಿಂದ ನಡೆದಿದ್ದರೆ ಕರಿಗೆರೆ ಎಂಡ್ ಕಂಪನಿ ಹಾಗೂ ಟಿವಿ ೯ ನವರಿಗೆ ಬೇರೆ ಸುದ್ದಿಯೇ ಇರಲಿಲ್ಲ. ಈಗ ಸುದ್ದಿಯನ್ನು ಅಂಡಿಗೆ ಹಾಕಿ ಕುಳಿತಿದ್ದಾರೆ.

Unknown said...

A classic example of there will be people who always opposes something good. I am sure the real 'Gokarna Nagarika' will not support such anti social activities. Hope the culprits will soon learn their lesson

ಯಜ್ಞೇಶ್ (yajnesh) said...

ಒಂದು ಹೆಮ್ಮೆಯ ಕಾರ್ಯಕ್ರಮವಾದರೇ, ಇನ್ನೊಂದು ಹೇಯ ಕೃತ್ಯ. ಇಷ್ಟಾದರೂ ಕೆಲವರು ಅಂತವರ ಬೆಂಬಲಕ್ಕಿರುವುದು ನಾಚಿಕೆಗೇಡಿನ ವಿಷಯ

Suma said...

TV9, Hai Bangalore, Lankesh paregalalli enu suddi hakta ilva?

Papa yake haktare heli...........

Ade mathada karyakartaru madidre????????????

Jay said...
This comment has been removed by the author.
Jay said...

I think all the electronic media r same. even if a small thing happens in Gokarna, it will appear as BREAKING NEWS in TV9 in a neagative way...TV( is committed to destruct the image of Srimath.. Suvarna Channel is somewhat better i this regard, i suppose....

Gokarna said...

This is a constructed story.