Friday, October 17, 2008

ಚಾತುರ್ಮಾಸ್ಯ ಮತ್ತು ಸಂಘಟನೆ

!!ಹರೇ ರಾಮ!!

ಶ್ರೀಗಳ ಕಳೆದ ವರುಷದ ಚಾತುರ್ಮಾಸ್ಯ ದಿಂದ ಶ್ರೀಮಠದ ಬೆಂಗಳೂರು ಸೀಮೆಯ ಭಕ್ತರು ಸಂಘಟಿತರಾಗಲು ತುಂಬ ಸಹಾಯ ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಯುವಕರು ತುಂಬ ಸಂಘಟಿತರಾಗಿದ್ದು ಶ್ರೀಗಳ ಕನಸುಗಳನ್ನು ನನಸಾಗಿಸಲು ತಮ್ಮದೇ ರೀತಿಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾ ಇದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಮೊನ್ನೆ ಒಬ್ಬ ಬೆಂಗಳೂರಿನಲ್ಲಿ ವಾಸಿಸುತಿರುವ ಸಿರಸಿ ಬಳಿಯ ವ್ಯಕ್ತಿಯೊಬ್ಬರಿಗೆ ತುಂಬ ತುರ್ತ್ತಾಗಿ A- ರಕ್ತದ ಅವಶ್ಯಕತೆ ಇತ್ತು. ಮಠದ ಸೇವಾಶಾಖೆಯನ್ನು ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ ಸಂಪರ್ಕಿಸಿ ವಿಷಯವನ್ನು ಕುಟುಂಬದವರು ತಿಳಿಸಿದರು. ತಕ್ಷಣ ಕಾರ್ಯಪ್ರವರ್ತವಾದ ಯುವ ಪಡೆ ಕೇವಲ ಸುಮಾರು ಒಂದು ಘಂಟೆ ಅಂದರೆ 3.30ರ ಸಮಯಕ್ಕೆ A- ಹೊಂದಿದ 3 ಜನರನ್ನು ಹುಡುಕಿ ಅವರನ್ನು ಸಂಪರ್ಕಿಸಿ ರಕ್ತದ ವ್ಯವಸ್ಥೆಯನ್ನು ಮಾಡಲಾಯಿತು. ಶ್ರೀಗಳ ಮೇಲಿನ ಗೌರವಕ್ಕೆ ನಮ್ಮ ಕರೆಗೆ ಓಗೊಟ್ಟು ದೂರದ ಹೊಸಕೋಟೆ ಯಿಂದ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಬಂದು ರಕ್ತಧಾನ ಮಾಡಿದ ಶ್ರೀ. ಪ್ರದೀಪ್ ಕುಮಾರ ಅವರಿಗೆ ಶ್ರೀ ಮಠದ ಸೇವಶಾಖೆ ಯಿಂದ ಹ್ರದಯಪೂರ್ವಕ ಧನ್ಯವಾದಗಳು.

-ನವೀನ ಹೆಗಡೆ

No comments: