Friday, September 19, 2008

ಆಚಾರವಿಲ್ಲದ ನಾಲಿಗೆ..ನಿನ್ನ

ಆಚಾರವಿಲ್ಲದ ನಾಲಿಗೆ..ನಿನ್ನ

ಗೋಕರ್ಣದಲ್ಲಿ ಸಪ್ಟೆಂಬರ್ ಹದಿನೈದರಂದು ಸರಿ ಸುಮಾರು ಮೂವತ್ತು ಸಾವಿರ ಜನರು ಸೇರಿದ್ದ ಮಹಾಸಂಕಲ್ಪ ಕಾರ್ಯಕ್ರಮ ನಡೆಯಿತು. ದೂರದರ್ಶನದ ಚಂದನ ವಾಹಿನಿ ನೇರಪ್ರಸಾರ ಮಾಡಿದ್ದರೆ ಸುವರ್ಣ ಸಹಿತ ಈಟಿವಿ ಮೊದಲಾದವುಗಳು ತಮ್ಮ ವಾರ್ತೆಯಲ್ಲಿ ಪ್ರಸಾರ ಮಾಡಿದವು. ಆದರೆ ರಾಮಚಂದ್ರಾಪುರ ಮಠದ ವಿರುದ್ದ ಹಾದಿಯಲ್ಲಿ ಹೋಗುವವರು ಮಾತನಾಡಿದರೂ ಅವರ ಮುಖಕ್ಕೆ ಮೈಕ್ ಹಿಡಿದು " ಅಲ್ಲಾ ನೀವು ವಿರೋಧ ಮಾಡ್ತೀರಾ ಅಂತ" ಎಂದು ತಮಗೆ ಬೇಕಾದ ರೀತಿಯಲ್ಲಿ ಉತ್ತರ ಹೊರಡಿಸಲು ಯತ್ನಿಸುವ ಉತ್ತಮ ಸಮಾಜಕ್ಕಾಗಿ ಎಂಬ ಸ್ಲೋಗನ್ ನೊಡನೆ ಮೂಡಿಬರುವ ಟಿವಿ ನೈನ್ ಚಾನಲ್ ಗೆ ಇದೊಂದು ಕಾರ್ಯಕ್ರಮ ಅಂತ ಅನ್ನಿಸದೇ ಇದ್ದುದು ಪರಮಾಶ್ಚರ್ಯ. ಅದೇ ದಿನ ಸ್ವರ್ಣವಲ್ಲಿಯಲ್ಲಿ ಕಾಂಜಿಪೀಂಜಿಗಳಿಗೂ ಮೈಕ್ ತಗುಲಿಸುತ್ತಿದ್ದ ಪರಿ ಆಶ್ಚ್ರಯ ಹುಟ್ಟಿಸುವಂತಿತ್ತು. ಪೇಜಾವರ ಶ್ರೀಗಳ ಬಳಿ ಫೋನ್ ಮಾಡಿ ಅವರಿಂದ ಹೇಗಾದರೂ ಮಾಡಿ ನಾನು ರಾಮಚಂದ್ರಾ ಪುರಮಠದ ವಿರೋಧಿ ಅಂತ ಹೇಳಿಸಬೇಕೆಂಬ ರಂ,ಭಾ ನ ಹರ ಸಾಹಸ ನೋಡಿದರೆ ಇದು ಮಾಹಿತಿ ನೀಡುವ ಚಾನಲ್ಲೋ ಅಥವಾ ಕಡ್ದಿಗೀರುವ ಚಾನಲ್ಲೋ ಎಂಬುದನ್ನ ಯಾವುದೇ ಅನುಮಾನ ಇಲ್ಲದೇ ಕ್ಷಣಮಾತ್ರದಲ್ಲಿ ಹೇಳಿಬಿಡಬಹುದಿತ್ತು. ಆಶ್ಚ್ರರ್ಯವಾಗುವುದು ಇಲ್ಲೆ.

ನಮ್ಮ ದೇಶದಲ್ಲಿ ಯಾವುದೇ ಕೆಲಸ ಹಿಂದುವಿನಿಂದ ನಡೆದರೂ ಅದಕ್ಕೆ ಪ್ರಭಲವಾಗಿ ಅರ್ಥವಿಲ್ಲದೆ ವಿರೋದ ವ್ಯಕ್ತಪಡಿಸುವ ಒಂದು ಗುಂಪು ಇದೆ. ಅವರು ಅಪ್ಪಿತಪ್ಪಿಯೂ ಬಾಂಬ್ ಬ್ಲಾಸ್ಟ್ ಮಾಡಿ ಮಾರಣ ಹೋಮ ಮಾಡಿರುವವರ ಕುರಿತು ಮಾತನಾಡುವುದಿಲ್ಲ. ವಕ್ಫ್ ಮಂಡಳಿ ಕುರಿತು ಮಾತನಾಡುವುದಿಲ್ಲ. ಮತಾಂತರದ ಬಗ್ಗೆ ಚಕಾರ ವೆತ್ತುವುದಿಲ್ಲ. ಅವರೆಲ್ಲಾ ಸಾಚಾಗಳು ಹಿಂದೂ ಮಠಾಧೀಶರು ಅನ್ಯಾಯ ಮಾಡುವ ಜನ ಎಂದು ಲಂಕೇಶ್ ಪತ್ರಿಕೆಯಿಂದ ಪ್ರಾರಂಭ ಗೊಂಡು ಹಾಯ್ ಬೆಂಗಳೂರು ಸೇರಿದಂತೆ ಟಿ.ವಿ. ನೈನ್ ವರೆಗೂ ಮುಂದುವರೆಯುತ್ತದೆ. ಹಾಯ್ ನ ಬೆಳೆಗೆರೆ ರಾಮಚಂದ್ರಾ ಪುರಮಠದ ಶ್ರೀಗಳಿಗೆ ಬಳಸಿದ ಬಾಷೆ ಮುಲ್ಲಾಗಳಿಗೆ ಬಳಸಲಾಗುತ್ತದಯೇ?. ಆದರೆ ಅದೇ ಹಿಂದೂಗಳಿಗೆ ಇವರದ್ದು ಕೀಳುಮಟ್ಟದ ಭಾಷೆ. ಅರ್ತವಿಲ್ಲದ ಕುತರ್ಕ. ಮಾದ್ಯಮಗಳೆಂದರೆ ನಿಷ್ಪಕ್ಷಪಾತವಾಗಿರಬೇಕು. ಧೈರ್ಯದ ಮಾತನ್ನಾಡಿದರೆ ಎಲ್ಲರಿಗೂ ಮಾತನ್ನಾಡಬೇಕು. ಸಾಧು ಸಜ್ಜನರು ಸಿಕ್ಕಿದರೆ ರಂಭಾ ,ರಬೆ, ಗೌಲಂ, ಅಶ್ರೀ, ಮುಂತಾದ ನೂರಾರು ಜನರು ತಮ್ಮ ಲೇಖನಿ ಹರಿಬಿಡುತ್ತಾರೆ. ಉತ್ತರನ ಪೌರುಷ ಒಲೆಯ ಮುಂದೆ ಎಂದಂತೆ ಇವರ ಕತೆ. ಇದೇಕೆ ಹೀಗೆ ಎಂದೇ ಅರ್ಥವಾಗದು. ಬಹುಶಃ ಇವರಿಗೆಲ್ಲಾ ಹಿಂದೂ ಗಳಿಂದ ಪೇಮೆಂಟ್ ಹೋಗದೇನೋ ಹಾಗಾಗಿ ಹೀಗೆ ಅಂತ ಒಂದೇ ಒಂದು ಉತ್ತರ ಸಿಗಬಹುದು.
-ರಘು

1 comment:

ಸಿರಿರಮಣ said...

ರಘು ಅವರೇ, ಇಂಥವರನ್ನು ಕಂಡಲ್ಲಿ ಬಡಿಯುವರಿಲ್ಲದಾಗಿದ್ದಾರೆ. ಇವರ ಪತ್ರಿಕೆ/ವಾಹಿನಿ ಓದುವ ವಿಕ್ಷಿಸುವ ಜನರೇ ಇಲ್ಲದಂತಾಗ ಮಾತ್ರ ಇವರು ಬಾಲ ಮುದುರಿಕೊಂಡು ಬಿದ್ದಾರು. ಸಧ್ಯಕ್ಕೆ ಪಾಗಾರದ ಮೇಲೆ ನಿಂತು ಮೇಲೆ ಮುಖಮಾಡಿ ಕೂಗುತ್ತಲೇ ಇದ್ದಾರೆ. ಇವರು ಮೊದಲು ಇಂತಹ ಅಸಂಬದ್ಧ ಸುದ್ದಿ ಮಾಡಿ ಆಮೇಲೆ ಸಂಬಂಧಿಸಿದ ಜನರಲ್ಲಿಗೆ ಹೋಗಿ ಪೂರ್ಣಫಲವಿಟ್ಟು ಪೊಡಮಟ್ಟು ಕ್ಷಮೆಯಾಚಿಸುತ್ತಾರೆ. ಅಷ್ಟರಲ್ಲೇ ಅವಘಡ ನಡೆದಿರುತ್ತದೆ. ಇದೇ ಟಿ.ವಿ 9 ರ ರಂಭಾ ಒಂದು ಸಾರಿ ನನ್ನನ್ನು ಕರೆದು ಹವ್ಯಕರಲ್ಲಿ ಮದುವೆ ಸಮಸ್ಯೆ ಇದ್ದು ಸಮಾಜ ಕುಲಗೆಡುತ್ತಿದೆ, ಈ ಸಮಾಜವೇ ಇನ್ನು ನಿರ್ನಾಮವಾಗುತ್ತದೆ ಎಂದು ಹೇಳಿಸಬೇಕೆಂದಿದ್ದ. ಆದರೆ ನಾನು ಎಲ್ಲ ಸಮಾಜ ಹಾಳುಗೆಡುವಲ್ಲಿ ತಮ್ಮಂತಹ ಮಾಧ್ಯಮದ ಪಾತ್ರ ದಡ್ಡದಿದೆ, ನಮ್ಮ ಸಮಾಜದಲ್ಲಿ ಅಂಥದೇನೂ ಇಲ್ಲ ಎಂದು ಸಮರ್ಥಿಸಿ ಆತನಿಗೆ ಸ್ವಲ್ಪ ಇರುಸುಮುರುಸಾಯಿತು. ಇದೇ ಹಾಯ್ ಬೆಂಗಳೂರಿನ ರಬೆ ಹಿಂದೆ ಎಲ್ಲ ಹಿಂದೂ ಧಾರ್ಮಿಕ ನಾಯಕರ ಕುರಿರೂ ಬರೆದಿದ್ದಾನೆ ಕೆಲವೇ ದಿನಗಳಲ್ಲಿ ಅಂಡು ಬೆಚ್ಚಗಾಗಿ ಅಲ್ಲಿಗೆ ಹೋಗಿ ಪಾದಕ್ಕೆ ಬಿದ್ದಿದ್ದ. ಮುಲ್ಲಾಗಳ, ಪಾದ್ರಿಗ ಕುರಿತು ಬರೆದರೆ ಏನಾಗಬಹುದಿತ್ತೋ ಅದು ಹಿಂದೂ ನಾಯಕರ ಕುರಿತು ಬರೆದಾಗ ಸಂಭವಿಸದರೆ ಎಲ್ಲ ಸರಿಹೋಗುತ್ತದೆ.