Tuesday, September 16, 2008

ಜನ ಶಕ್ತಿಯ ಸಂಕಲ್ಪ ತಡೆಯಲು ಅಸಾಧ್ಯ

ಆತ್ಮಲಿಂಗವೇದಿಕೆ : ಗೋಕರ್ಣ ಕ್ಷೇತ್ರದ ಪುನರುತ್ಥಾನ ಸಂಕಲ್ಪ ದೃಢ ಸಂಕಲ್ಪವಾಗಲಿ ಎಂದು ನ್ಯಾಯಮೂರ್ತಿ ಶಿವರಾಜ್ ಪಾಟೀಲ ಅಭಿಪ್ರಾಯಪಟ್ಟರು. ಗೋಕರ್ಣದ ಭದ್ರಕಾಳಿ ಕಾಲೇಜಿನ ಆತ್ಮಲಿಂಗ ವೇದಿಕೆಯಲ್ಲಿ ಸೋಮವಾರ ನಡೆದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾ ಸಂಕಲ್ಪಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನ ಶಕ್ತಿಗೆ ಬಲ. ಜನ ದೃಢ ಸಂಕಲ್ಪ ಮಾಡಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗೋಕರ್ಣ ಕ್ಷೇತ್ರದ ಧಾರ್ಮಿಕ ಪುನರುತ್ಥಾನ ಕಾರ್ಯದಲ್ಲಿ ಇದು ಹೀಗೆಯೇ ಆಗಲಿ. ಇಂದು ಯತಿವರೇಣ್ಯರ ಸಮ್ಮುಖದಲ್ಲಿ ತೆಗೆದುಕೊಂಡ ಗೋಕರ್ಣ ಕ್ಷೇತ್ರ ಧಾರ್ಮಿಕ ಪುನರುತ್ಥಾನ ಮಹಾಸಂಕಲ್ಪ ಜನಶಕ್ತಿಯಾಗಿ ಗೋಕರ್ಣ ಕ್ಷೇತ್ರ ಅಭಿವೃದ್ಧಿಯಾಗಲಿ ಎಂದರು. ‘ನನ್ನ ದೃಷ್ಟಿಯಲ್ಲಿ ಇದು ಕೇವಲ ಧಾರ್ಮಿಕ ಕ್ಷೇತ್ರದ ಪುನರುತ್ಥಾನ ಮಹಾಸಂಕಲ್ಪ ಸಭೆಯಲ್ಲ. ಇದು ಧಾರ್ಮಿಕ ಭಾವನೆಯ, ಸಾಮಾಜಿಕ ಮೌಲ್ಯಗಳ, ಅಧ್ಯಾತ್ಮ ಚಿಂತನೆಯ ಪುನರುತ್ಥಾನದ ಸಂಕಲ್ಪ. ಗೋಕರ್ಣ ಕ್ಷೇತ್ರ ಹಾಗೆಯೇ ಆಗಲಿದೆ ಎಂಬುದು ನನ್ನ ನಂಬಿಕೆ. ಆ ಮೂಲಕ ಭಾರತಕ್ಕೆ ಎಲ್ಲ ಕ್ಷೇತ್ರದಲ್ಲಿಯೂ ಮಾರ್ಗದರ್ಶನ ಮಾಡಲಿ’ ಎಂದರು.

No comments: