Monday, September 15, 2008

ಸಮುದ್ರ ತೀರದತ್ತ ಜನಸಾಗರ


ಶ್ರೀಗಳ ಸೀಮೋಲ್ಲಂಘನೆಯ ಸೋಮವಾರ ಸಮುದ್ರ ತೀರದ ಕ್ಷೇತ್ರ ಗೋಕರ್ಣಕ್ಕೆ ಜನಸಾಗರ. ಶ್ರೀಗಳ ಪುರಪ್ರವೇಶದೊಂದಿಗೆ ಭರ್ಜರಿ ವರುಣನೂ ಆಗಮಿಸಿದ. ಆದರೆ ಸಾಗರದತ್ತ ಮುಖಮಾಡಿ ಗುರುವಿನ ಹಿಂದೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರಿಗೆ ಮಳೆ ಹನಿ ಪುಷ್ಪವೃಷ್ಟಿಯಂತೆ ಅನಿಸಿರಬೇಕು. ಯಾರೂ ಚದುರಲಿಲ್ಲ ಬೆದರಲಿಲ್ಲ. ಉಘೇ ಉಘೇ ಘೋಷದೊಂದಿಗೆ ಜನಸಾಗರ ಕ್ಷೇತ್ರದತ್ತ ಮುಖ ಮಾಡಿದ್ದರು. ಆಕಾಶದಲ್ಲಿ ಎಲ್ಲಿ ನೋಡಿದರಲ್ಲಿ ಮೇಘಗಳು, ಭೂಮಿಯಲ್ಲಿ ಎಲ್ಲಿ ನೋಡಿದರಲ್ಲಿ ಜನಗಳು. ಈ ಸುಮಧುರ ಕ್ಷಣದ ಒಂದು ಝಲಕ್ ನಿಮಗಾಗಿ
ನುಡಿ+ಚಿತ್ರ: ಆರ್ಶ

No comments: